This page has been fully proofread once and needs a second look.

ಗುರುಗಳೇ ಆಗಿರುವರು. ಆದ್ದರಿಂದ ಅವರವರಲ್ಲಿರುವ ಭಗವದ್ಭಕ್ತಿ ಮೊದಲಾದ ಗುಣಗಳಿಗೆ ತಕ್ಕಂತೆ ತಾರತಮ್ಯಾನುಸಾರವಾಗಿ ಗೌರವಸಂದಾಯವಾಗಬೇಕು. ಅವರಲ್ಲಿ ಮಾಡುವ ತಿರಸ್ಕಾರ ಭಗವಂತನಿಗೆ ಸೇರುತ್ತದೆ[^1]
 
ಜಪಸಿದ್ಧಿಯ ಉಪಾಯಗಳು
 
ಸರ್ವೇಭ್ಯೋऽಭ್ಯಧಿಕಾ ಭಕ್ತಿರ್ವಿಷ್ಣೌ ಸ್ಯಾದತಿನಿಶ್ಚಲಾ ।
ಲಕ್ಷ್ಮೀಬ್ರಹ್ಮಾದಿಷು ತತಃ ಕ್ರಮೇಣ ಸ್ಯಾತ್ಸುಭಾವಿತಾ।
ಏವಂ ವಿದ್ಯಾಃ ಫಲಿಷ್ಯಂತಿ ನಾನ್ಯಥಾ ತು ಕಥಂಚನ ॥ ೧೦೫ ॥
 
ಅರ್ಥ - ಯಾವುದೇ ಜಪಾದಿಗಳು ಸಿದ್ಧಿಸಬೇಕಾದರೆ ಜಾಪಕನು ಭಗವಂತನಲ್ಲಿ ಸರ್ವೋತ್ತಮಭಕ್ತಿಯನ್ನು ಮಾಡಬೇಕು. ಈ ಭಕ್ತಿ ಯಾದರೋ ಲಕ್ಷ್ಮ್ಯಾದಿ ಭಗವದಧೀನರಲ್ಲಿ ಮಾಡುವ ಭಕ್ತಿ- ಗಿಂತಲೂ ಅಧಿಕ ಹಾಗೂ ನಿಶ್ಚಲವಾಗಿರಬೇಕು. ಭಗವದಧೀನ- ರಾದ ಲಕ್ಷ್ಮ್ಯಾದಿಗಳಲ್ಲಿಯೂ ತಾರತಮ್ಯಾನುಸಾರವಾಗಿ ಭಕ್ತಿ- ಯನ್ನು ಮಾಡಬೇಕು. ಹೀಗಿದ್ದರೆ ಮಾತ್ರ ವಿದ್ಯೆಗಳು ಸಿದ್ಧಿಸುತ್ತವೆ.[^2]. ಇಲ್ಲವಾದರೆ ಜಪಾದಿಗಳು ವ್ಯರ್ಥವಾಗುತ್ತವೆ.
 
ಶುಭಾಶುಭಫಲವಾದಾಗ ಇರಬೇಕಾದ ಅನುಸಂಧಾನ
 
ಶುಭಾನ್ ಧ್ಯಾಯಂತಿ ಯೇ ಕಾಮಾನ್ ಗುರುದೇವಪ್ರಸಾದಜಾನ್ ।
ಇತರಾನಾತ್ಮಪಾಪೋತ್ಥಾಂಸ್ತೇಷಾಂ ವಿದ್ಯಾ ಫಲಿಷ್ಯತಿ ॥ ೧೦೬ ॥
 
ಅರ್ಥ - ಯಾರು ತಮಗೆ ಒಳ್ಳೆಯದಾದರೆ ಗುರುಗಳು ಹಾಗೂ ದೇವತೆಗಳ ಅನುಗ್ರಹವೆಂದು ಬಗೆಯುವರೋ, ತಮಗೆ ಕೆಟ್ಟದ್ದಾ- ದರೆ ಅದು ತಮ್ಮ ಪ್ರಾಚೀನಕರ್ಮದ ದುಷ್ಪಲವೆಂದು ತಿಳಿಯು- ವರೋ ಅವರಿಗೆ ವಿದ್ಯೆಯು ಫಲ ನೀಡಲು ಸಮರ್ಥವಾಗುತ್ತದೆ.
[^3].
 
[^1]. ಉಪೇಕ್ಷಕೇಷು ದೇವಾನಾಂ ಭಕ್ತಿನಾಶಂ ಸ್ವಯಂ ಹರಿಃ ।
ಕರೋತಿ ತೇನ ವಿಭ್ರಷ್ಟಾಃ ಸಂಸರಂತಿ ಪುನಃ ಪುನಃ ॥ -ಭಾಗ.ತಾತ್ಪರ್ಯ 11/3/34
[^2]. ವಿಷ್ಣೋರತ್ಯುತ್ತಮತ್ವಾದಖಿಲಗುಣಗಣೈಃ ತತ್ರ ಭಕ್ತಿಂ ಗರಿಷ್ಠಾಂ ಸಂಶ್ಲಿಷ್ಟೇ ಶ್ರೀಧರಾಭ್ಯಾಂ ಅಮುಮಥಪರಿವಾರಾತ್ಮನಾ ಸೇವಕೇಷು ॥ - ವಾಯುಸ್ತುತಿ
[^3]. ಗುರುಶಿಷ್ಯಯೋಃ ಅಯೋಗ್ಯತ್ವಾತ್ ಗುರುವೃತ್ತೇರಪೂರ್ತಿತಃ ।
ಅಪ್ರಸಾದಾದ್ ಗುರೋಃ ವಿದ್ಯಾ ನ ತಥೋಕ್ತಫಲಪ್ರದಾ ॥