This page has been fully proofread once and needs a second look.

ಚತುರ್ಥೋಽಧ್ಯಾಯಃ
 
೧೮೯
 
ಕೈಯ್ಯನ್ನಿಟ್ಟು, ಈ ಧನ್ವಂತರಿ ಮಂತ್ರವನ್ನು ಜಪಿಸಿದ್ದೇ ಆದರೆ ಆ ರೋಗಿಯು ತನ್ನ
ರೋಗವನ್ನು ಕಳೆದುಕೊಂಡು ನೀರೋಗಿ- ಯಾಗುವನು. ಆದರೆ ಭಗವದ್ಭಕ್ತರಿಗೆ
ಮಾತ್ರ ಫಲ ಅಭಕ್ತರಿಗಲ್ಲ.
 

 
ರೋಗಾದಿಗಳಲ್ಲಿ ಧನ್ವಂತರಿ ಜಪದ ಮಹಿಮೆ
 

 
ಶತಂ ಸಹಸ್ರಮಯುತಂ ಲಕ್ಷಂ ವಾಽರೋಗಸಂಕ್ಷಯಾತ್ ।

ಇಮಮೇವ ಜಪೇನ್ಮಂತ್ರಂ ಸಾಧೂನಾಂ ದುಃಖಶಾಂತಯೇ ॥98 ೯೮
 

 
ಅರ್ಥ - ಭಗವದ್ಭಕ್ತರ ರೋಗಾದಿದುಃಖನಿವೃತ್ತಿಗಾಗಿ ಇದೇ ಮಂತ್ರವನ್ನೇ
ರೋಗದ ತೀವ್ರತೆಯನ್ನು ಲಕ್ಷಿಸಿ ಅದಕ್ಕೆ ತಕ್ಕಂತೆ ನೂರು, ಸಾವಿರ, ಹತ್ತು ಸಾವಿರ,
ಲಕ್ಷಬಾರಿ ಜಪಿಸಬೇಕು.
 

 
ಜ್ವರದಾಹಾದಿಶಾಂತ್ಯರ್ಥಂ ತರ್ಪಯೇನ್ ಮನುನಾಽಮುನಾ ।

ಧ್ಯಾತ್ವಾ ಹರಿಂ ಜಲೇ ಸಪ್ತರಾತ್ರಾತ್ ಜೂರ್ತಿವಿ್ರರ್ವಿನಶ್ಯತಿ ॥99 ೯೯

ಅರ್ಥ
 
- ಜ್ವರಮೊದಲಾದ ತಾಪವನ್ನು ಪರಿಹರಿಸಿಕೊಳ್ಳುವವರು ಸಪ್ತದಿನ
ಪರ್ಯಂತ ಜಲದಲ್ಲಿ ಧನ್ವಂತರಿಯನ್ನು ಧ್ಯಾನಿಸಿ, ಆ ನೀರಿನಿಂದಲೇ ಧನ್ವಂತರಿ-
ಯನ್ನುದ್ದೇಶಿಸಿ ತರ್ಪಣವನ್ನಿತ್ತರೆ ಜ್ವರತಾಪವು ಇಲ್ಲದಂತಾಗುವುದು.
 

 
ಧನ್ವಂತರಿಮಂತ್ರಹೋಮದ ಮಹಿಮ
 

 
ಅಯುತಾಮೃತಸಮಿದ್ದೋಧೋಮಾದ್ಯೋಪ್ಪಗೋಘೃತಕ್ಷೀರಸಂಯುತಾತ್ ।

ಸರ್ವರೋಗಾ ವಿನಶ್ಯಂತಿ ವಿಮುಖೋ ನ ಹರೇರ್ಯದಿ ॥100 ೧೦೦
 

 
ಅರ್ಥ ಹಸುವಿನ ನೃಘೃತ, ಗೋಕ್ಷೀರಗಳಿಂದ ಮಿಶ್ರವಾದ ಅಮೃತ- ಬಳ್ಳಿ
ಸಮಿತ್ತುಗಳಿಂದ ಹತ್ತು ಸಾವಿರ ಬಾರಿ ಧನ್ವಂತರಿ ಮಂತ್ರ- ದಿಂದ ಹೋಮಿಸಿದರೆ
ರೋಗಿಯು ಭಗವದ್ಭಕ್ತನಾಗಿದ್ದ ಪಕ್ಷದಲ್ಲಿ ರೋಗಿಯ ಸಮಸ್ತರೋಗಗಳೂ ಹೇಳ
ಹೆಸರಿಲ್ಲದಂತಾಗುತ್ತವೆ.
 

 
ಭೂತಾಭಿಚಾರಶಾಂತ್ಯರ್ಥಮಪಾಮಾರ್ಗಾಹುತಿಕ್ರಿಯಾ ।

ದ್ವಿಗುಣಾಽಮೃತಯಾ ಪಶ್ಚಾತ್ ಕೇವಲೇಮೃಘೃತೇನ ವಾ ॥101
 
೧೦೧॥