This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಮತ್ತೊಂದರಲ್ಲಿ ಅಮೃತತುಂಬಿರುವ ಕಲಶವನ್ನು ಧರಿಸಿಕೊಂಡು, ಚಂದ್ರಮಂಡಲ-
ದಲ್ಲಿ ಕುಳಿತಿರುವ, ಧನ್ವಂತರಿಮೂರ್ತಿಯು ತನ್ನಲ್ಲಿರುವನೆಂದು ಧ್ಯಾನಿಸಬೇಕು.
 
೧೮೮
 
ಮೂರ್ಧ ಸ್ಥಿತಾದಮುತ ಏವ ಸುಧಾಂ ಸ್ರವಂತೀಂ
ಭೂಮಧ್ಯಗಾಚ್ಚ ತತ ಏವ ಚ ತಾಲುಸಂಸ್ಥಾತ್ ।
ಹಾರ್ದಾಚ್ಚ ನಾಭಿಸದನಾದಧರಸ್ಥಿತಾಚ್ಚ
ಧ್ಯಾತ್ವಾಭಿಪೂರಿತತನುಃ ದುರಿತಾನಿ ಹನ್ಯಾತ್ 95
 
ಅರ್ಥ - ಸಾಧಕನು ತನ್ನ ತಲೆ, ಹುಬ್ಬುಗಳ ಮಧ್ಯಭಾಗ, ತಾಲುಮೂಲ,
ಹೃದಯ, ನಾಭಿ ಹಾಗೂ ನಾಭಿಯ ಅಧೋಭಾಗಗಳಲ್ಲಿರುವ ಆರುಚಕ್ರಗಳಲ್ಲಿ
ಸನ್ನಿಹಿತನಾದ ಧನ್ವಂತರಿಯು ಅಮೃತಧಾರೆಯನ್ನು ಸುರಿಸುತ್ತಿರುವನೆಂದು ಧ್ಯಾನಿಸಿ,
ಆ ಅಮೃತದಿಂದ ತನ್ನ ಶರೀರವೆಲ್ಲ ನೆನೆದು ಒದ್ದೆಯಾಗುತ್ತಿದೆ ಎಂದು ಭಾವಿಸಿ
ಮಂತ್ರ ಜಪಿಸುತ್ತಾ ಸಮಸ್ತರೋಗಮೂಲವಾದ ಪಾಪಗಳನ್ನು ಕಳೆದುಕೊಳ್ಳಬೇಕು.
 
ಅಜ್ಞಾನದುಃಖಭಯರೋಗಮಹಾವಿಷಾಣಿ
 
ಯೋಗೋSಯಮಾಶು ವಿನಿಹಂತಿ ಸುಖಂ ಚ ದದ್ಯಾತ್ ।
ಉನ್ಮಾದವಿಭ್ರಮಹರಃ ಪರತತ್ವ ಸಾಂದ್ರ-
ಸ್ವಾನಂದಮೇವ ಪದಮಾಪಯತಿ ಸ್ಮ ನಿತ್ಯಮ್ ॥9॥
 
ಅರ್ಥ ಈ ಮಂತ್ರಜಪವು ಅಜ್ಞಾನ, ನಾನಾವಿಧದುಃಖ, ಶತ್ರು ಮೊದಲಾದ
ಭಯ, ಅನೇಕವಿಧರೋಗಗಳು, ಭಯಂಕರವಿಷ ಇವುಗಳನ್ನು ಪರಿಹರಿಸುತ್ತದೆ.
ಹಾಗೂ ಸುಖವನ್ನು ನೀಡುತ್ತದೆ. ಇದಲ್ಲದೆ ಹುಚ್ಚು, ಮಾನಸಿಕವಿಭ್ರಮೆಗಳನ್ನೂ
ಪರಿಹರಿಸಿ ಉತ್ತರತ್ರ ಪರಮಪದಪ್ರಾಪ್ತಿಯನ್ನು ನೀಡುತ್ತದೆ.
 
ಧ್ಯಾವ ಹಸ್ತತಲಗಂ ಸ್ವಮೃತಂ ಸ್ರವಂತಂ
ದೇವಂ ಸ ಯಸ್ಯ ಶಿರಸಿ ಸ್ವಕರಂ ನಿಧಾಯ ।
ಆವರ್ತಯೇತ್ ಮನುಮಿಮಂ ಸ ಚ ವೀತರೋಗ:
 
ಪಾಪಾದಪೈತಿ ಮನಸಾ ಯದಿ ಭಕ್ತಿನಮಃ 119711
 
ಅರ್ಥ - ಮಂತ್ರಜಪಿಸುವ ಸಾಧಕನು ತನ್ನ ಅಂಗೈಯಲ್ಲಿ ಸನ್ನಿಹಿತನಾಗಿ ಅಮೃತ
ವನ್ನು ಸುರಿಸುತ್ತಿರುವ ಧನ್ವಂತರಿಯನ್ನು ಧ್ಯಾನಿಸಿ, ರೋಗಿಯ ತಲೆಯ ಮೇಲೆ ತನ್ನ