This page has not been fully proofread.

೧೮೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಗರುಡಮಂತ್ರ - ಋಷ್ಯಾದಿಗಳು, ಧ್ಯಾನಪ್ರಕಾರ
ವ್ಯತ್ಯಸ್ತಪಕ್ಷಿತಾರ್‌ ಚ ಸ್ವಾಹಾಂತೋ ಗಾರುಡೋ ಮನುಃ ।
ಕಶ್ಯಪೋಽಸ್ಯ ಮುನಿರ್ಧ್ಯೆಯಃ ಸುಧಾಪೂರ್ಣ೦ ಹಿರಣ್ಣಯಮ್ ॥82॥
 
ದಧಾನಃ ಕುಂಭಮಭಯಂ ಪೀತಶುಕಾರುಣೋ ಹರಿತ್ ।
ಕೃಷ್ಣಶಾಜಾನುತೋ ನಾಭೇಃ ಕಂಠಾತ್ ಕಾದಂತ ಏವ ಚ ॥83॥
 
ಪ್ರಿಯಾಯುಕ್ ಪುರತೋ ವಿಷ್ಟೂ ಪಕ್ಷತುಂಡಸಮನ್ವಿತಃ ।
ಜಂಗಮಸ್ಥಾವರವಿಷಹೃದಯಂ ಸರ್ವಕಾಮದಃ
 
॥84।1
 
ಅರ್ಥ
 
ಪಕ್ಷಿಶಬ್ದವನ್ನು ತಿರುಗಿಸಿ ಹೇಳಿ, ಅದರೊಂದಿಗೆ ಓಂಕಾರ ಹಾಗೂ
ಸ್ವಾಹಾ ಎಂಬ ಪದವನ್ನು ಸೇರಿಸಬೇಕು. 'ಕ್ಷಿಪ ಓಂ ಸ್ವಾಹಾ' ಎಂದಾಗುತ್ತದೆ. ಇದು
ಕಾಶ್ಯಪಋಷಿಯು ಕಂಡ ಗರುಡಮಂತ್ರ,
 
ಗರುಡನು ಸುವರ್ಣದ ಅಮೃತಕಲಶವನ್ನು, ಅಭಯಮುದ್ರೆಯನ್ನು ಧರಿಸಿ-
ರುವನು. ದೇಹದಲ್ಲಿ ಪಾದದಿಂದ ಮೊಣಕಾಲಿನವರೆಗೆ ಹಳದಿಬಣ್ಣವು, ಅಲ್ಲಿಂದ
ನಾಭಿಪರ್ಯಂತ ಬಿಳಿಯ ಬಣ್ಣವು, ಅಲ್ಲಿಂದ ಕಂಠದವರೆಗೂ ಕೆಂಪು ಬಣ್ಣವು,
ಅಲ್ಲಿಂದ ಶಿರಸ್ಸಿನವರೆಗೂ ಹಸಿರುಬಣ್ಣ, ಶಿರಸ್ಸಾದರೋ ಕಪ್ಪುಬಣ್ಣ ಹಾಗೂ ತನ್ನ
ಪತ್ನಿಯಾದ ಸೌಪರ್ಣಿಯ ಜೊತೆಗೆ ಕುಳಿತು ಭಗವಂತನ ಮುಂಭಾಗದಲ್ಲಿರುತ್ತಾನೆ.
ರೆಕ್ಕೆ ಹಾಗೂ ಕೊಕ್ಕುಗಳಿಂದ ಶೋಭಿಸುತ್ತಿರುವ ಗರುಡನನ್ನು ಧ್ಯಾನಿಸಬೇಕು. ಈ
ಮಂತ್ರಜಪದಿಂದ ಸ್ಥಾವರಗಳೆನಿಸಿದ ವಿಷವೃಕ್ಷಗಳ ಭಯವನ್ನು, ಜಂಗಮವೆನಿಸಿದ
ಸರ್ಪಾದಿಗಳ ವಿಷಯಭಯದಿಂದಲೂ ರಕ್ಷಿಸುತ್ತದೆ. ಇದಲ್ಲದೆ ಯಾವುದೇ
ಇಷ್ಟಾರ್ಥವನ್ನೂ ಗರುಡಮಂತ್ರಜಪದಿಂದ ಹೊಂದಬಹುದಾಗಿದೆ.
 
ದಿಕ್ಷಾಲಕರ ಮಂತ್ರಗಳು
 
ಮಂತ್ರಾಶ್ಚ ಲೋಕಪಾಲಾನಾಂ ನಮೋಂತಾಃ ಸರ್ವಕಾಮದಾಃ ।
ಪೀತರಕ್ತಾಸಿತಶ್ವೇತರಕ್ತಶುಕ್ಲಾಶ್ಚ ವರ್ಣತಃ
 
118511
 
ಸಪ್ರಿಯಾಃ ಸಾಭಯಾ ವಜ್ರಶಕ್ತಿದಂಡಾಸಿಪಾಶಿನಃ ।
 
1. ಗಾರುಡೋ ಮನುರಾಖ್ಯಾತಃ ವಿಷದ್ವಯವಿನಾಶನಃ ।