This page has been fully proofread once and needs a second look.

೧೭೬
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಮುಖ್ಯಪ್ರಾಣಧೇಧ್ಯೇಯರೂಪ
 

 
ಉದ್ಯದ್ರವಿಪ್ರಕರಸನ್ನಿಭಮಚ್ಯುತಾಂಕೇ

ಸ್ವಾಸೀನಮಸ್ಯ ನುತಿನಿತ್ಯವಚಃ ಪ್ರವೃತ್ತಿಮ್ ।

ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ

ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ ॥69
 
೬೯ ॥
 
ಅರ್ಥ - ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಾ, ಭಗವಂತನ ಬಲ
ತೊಡೆಯ ಮೇಲೆ ಕುಳಿತಿರುವ, ಭಗವಂತನನ್ನು ನಿರಂತರವೂ ಸ್ತೋತ್ರಮಾಡು-
ತ್ತಿರುವ, ಎರಡು ಕೈಗಳಲ್ಲಿ ಗದೆ ಹಾಗೂ ಅಭಯಮುದ್ರೆಯನ್ನು ಧರಿಸಿ, ಮತ್ತೆರಡು
ಹಸ್ತಗಳನ್ನು ಒಂದುಗೂಡಿಸಿ ಬದ್ಧಾಂಜಲಿಯಾಗಿ ಭಗವಂತನನ್ನು ನಮಸ್ಕರಿ-ಸುತ್ತಿರುವ,
ಅದ್ಭುತಕಾರ್ಯಸಮರ್ಥನಾದ ಇಚ್ಛಾರೂಪೀ ಪ್ರಾಣದೇವನನ್ನು ಧ್ಯಾನಿಸಬೇಕು.
 

 
ಪ್ರಾಣಾದಿಪಂಚಮಂತ್ರಗಳು
 

 
ಪ್ರಾಣಾದ್ಯಾಃ ಪಂಚಮಂತ್ರಾಶ್ಚ ತಸ್ಯ ದೇವಸ್ಯ ವಾಚಕಾಃ ।

ಉಚ್ಯತೇ ಹರಿರಪ್ಯೇತೈಃ ಸಾಕ್ಷಾನ್ನಾರಾಯಣಾದಿಕಃ
 
॥ ೭೦ ॥
 
ಅರ್ಥ - ಪ್ರಾಣ, ಅಪಾನಾದಿ ಪಂಚಮಂತ್ರಗಳೂ ಸಹ ಆ ವಾಯು ದೇವನನ್ನೇ
ಪ್ರತಿಪಾದಿಸುತ್ತವೆ. ಈ ಪ್ರಾಣಾದಿಪಂಚಪದಗಳು ಪ್ರಾಣಾದಿಪಂಚರೂಪಗಳಲ್ಲಿ
ಅಂತರ್ಯಾಮಿಯಾಗಿರುವ ನಾರಾಯಣಾದಿ ಪಂಚರೂಪಗಳೂ ಪ್ರತಿಪಾದಿತವಾಗಿವೆ.
 
117011
 

 
ವೈದಿಕಸರಸ್ವತೀ-ಭಾರತೀಮಂತ್ರ
 

 
ಬ್ರಹ್ಮಾಣ್ಯಾ ಅಪಿ ಭಾರತ್ಯಾ ಗೌರೀರ್ಯಸ್ತ ಇತಿ ಶ್ರುತ್ ।
 
ತೌ ।
ಮಂತ್ರೌ ದೀರ್ಘತಮೋದೃಷ್ಟೌ ಸರ್ವಾಭೀಷ್ಟಪ್ರದಾಯಕೌ II71 ೭೧

 
ಅರ್ಥ 'ಗೌರೀರ್ಮಿಮಾಯ ಸಲಿಲಾನಿ' ಇತ್ಯಾದಿ ವೈದಿಕಮಂತ್ರ, ಹಾಗೂ
'ಯಸ್ತೇ ಸ್ತನಃ ಶಶಯೋ' ಇತ್ಯಾದಿ ವೇದಮಂತ್ರಗಳು ಕ್ರಮವಾಗಿ ಭಾರತೀ
 
-
 
ಓಂ ಪ್ರಾಣಾಯ ಹೃದಯಾಯ ನಮಃ । ಓಂ ಅಪಾನಾಯ ಶಿರಸೇ ಸ್ವಾಹಾ । ಓಂ ವ್ಯಾನಾಯ
ಶಿಖಾಯ್ಸಯೈ ವಷಟ್ । ಓಂ ಉದಾನಾಯ ಕವಚಾಯ ಹುಮ್ । ಓಂ ಸಮಾನಾಯ ಅಸ್ತ್ರಾಯ
ಫಟ್ । ಇತಿ ದಿಬ್ಗ್ಬಂಧಃ ।