This page has not been fully proofread.

ಚತುರ್ಥೋಽಧ್ಯಾಯಃ
 
೧೬೭
 
ಪ್ರಚೋದಯಾತ್ ಎಂಬ ಪದಗಳ ಮಧ್ಯದಲ್ಲಿ ವ್ಯಾಸಃ ಎಂಬ ಪದ ಸೇರಿಸಿದರೆ ವ್ಯಾಸ-
ಗಾಯತ್ರಿ ಏರ್ಪಡುತ್ತದೆ. ಇದು ಮಂತ್ರಗಳಲ್ಲಿಯೇ ಅತ್ಯಂತಶ್ರೇಷ್ಠವಾದ ಮಂತ್ರರಾಜ
 
ವೆನಿಸಿದೆ.
 
"ಪೂರ್ಣಜ್ಞಾನಾಯ ವಿದ್ಮಹೇ ಪೂರ್ಣಾನಂದಾಯ ಧೀಮಹಿ ।
ತನ್ನೋ ವ್ಯಾಸಃ ಪ್ರಚೋದಯಾತ್ '
 
ಎಂದು ವ್ಯಾಸಗಾಯತ್ರಿಯ ಸ್ವರೂಪ.
 
ವ.ಟಿ. - ಚತುರ್ಥ್ಯಂತಯೋಃ ಜ್ಞಾನಾನಂದಪದಯೋಃ ಪೂರ್ವ೦ ಕ್ರಮೇಣ ವಿದ್ಮಹೇ
ಧೀಮಹೀತಿ ಯೋಜ್ಯಮ್ । ತತ್ಪರಂ ತನ್ನೋ ವ್ಯಾಸಃ ಪ್ರಚೋದಯಾತ್ ಇತಿ
ವ್ಯಾಸಗಾಯತ್ರೀ ॥
 
ಏಕಾಕ್ಷರವ್ಯಾಸಮಂತ್ರ
 
ಆದಿಬೀಜಂ ಸ್ಥಿರಾದೋಷಜ್ಞಾನಬೀಜಂ ವಿಮುಕ್ತಿದಮ್ !
ಸರ್ವಪಾಪಕ್ಷಯಕರಂ ಸರ್ವವ್ಯಾಧಿವಿನಾಶನಮ್
 
ಅರ್ಥ - ಹಿಂದಿನ ಮಂತ್ರದ ಆದಿಯಲ್ಲಿರುವ ವ್ಯಾಂ ಎಂಬ ಬೀಜಾಕ್ಷರವೂ ಒಂದು
ಪ್ರತ್ಯೇಕ ವ್ಯಾಸಮಂತ್ರವೇ ಆಗಿರುತ್ತದೆ. ಇದರ ಜಪವು ಸರ್ವಪಾಪಪರಿಹಾರಕವೂ,
ಸರ್ವರೋಗನಿವಾರಕವೂ ಆಗಿರುತ್ತದೆ.
 
ವ.ಟೀ. - ಆದಿಬೀಜಮ್ = ವ್ಯಾಮಿತ್ಯಾದಿಬೀಜಮ್ ।
 
ಏಕಾಕ್ಷರವ್ಯಾಸಮಂತ್ರದ ಧೈಯರೂಪ
 
ಧ್ಯಾಯೇಚ್ಛಶಾಂಕಶತಕೋಟ್ಯತಿಸೌಖ್ಯಕಾಂತಿಂ
ಸಂಸಿಚ್ಯಮಾನಮಮೃತೋರುಘಟೈ: ಸುರೇಶೈಃ ।
ವರ್ಣಾಭಿಮಾನಿಭಿರಜೇಶಮುಖೈಃ ಸಹೈವ
ಪಂಚಾಶತಾ ಪ್ರತಿಗಿರಂತಮಶೇಷವಿದ್ಯಾ 114811
 
114711
 
ಅರ್ಥ
 
ಅನಂತಾನಂತಚಂದ್ರರ ಚಂದ್ರಿಕೆಯಂತೆ ಸೌಖ್ಯವುಂಟುಮಾಡುವ
ಕಾಂತಿಯುಳ್ಳವನೂ, ವರ್ಣಾಭಿಮಾನಿಬ್ರಹ್ಮಾದಿದೇವತೆಗಳಿಂದ ಸುರಿಸಲ್ಪಟ್ಟ ಅಮೃತ-
ದಿಂದ ಆಪ್ಲಾವಿತನಾದವನೂ, ಅಜಾದಿ ಐವತ್ತೊಂದು ರೂಪಗಳೊಂದಿಗೆ ಸಮಸ್ತ-
ವಿದ್ಯೆಗಳನ್ನು ಅವರಿಗೆ
ಅವರಿಗೆ ಉಪದೇಶ ನೀಡುತ್ತಿರುವ ವೇದವ್ಯಾಸರೂಪವನ್ನು
 
-