This page has not been fully proofread.

೧೫೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ನೃಸಿಂಹಗಾಯತ್ರೀ
 
ವಿದ್ಮಹೇ ಧೀಮಹೇ ಪೂರ್ವಂ ಸ್ವಯಂ ಚೈವ ಮಹಾಬಲಃ ।
ಪ್ರೇರಯೇತ್ ತನ್ನ ಇತ್ಯೇತನ್ಮಧೈ5ನಂತಃ ಪ್ರಕೀರ್ತಿತಃ ॥13॥
 
ಅರ್ಥ 'ಸ್ವಯಂ' ಎಂದರೆ ಚತುರ್ಥ್ಯಂತವಾದ 'ನೃಸಿಂಹಾಯ' ಎಂಬ ಪದ.
ಇದರನಂತರ ವಿದ್ಮಹೇ ಎಂಬ ಪದ. ಈ ಪದದ ನಂತರ 'ಮಹಾಬಲಾಯ' ಎಂಬ
ಪದ. ನಂತರ 'ಧೀಮಹಿ' ಎಂಬ ಪದವನ್ನು ಹೇಳಬೇಕು. ಕಡೆಯಲ್ಲಿ ತನ್ನೋ ಅನಂತಃ
ಪ್ರಚೋದಯಾತ್' ಎಂದು ಉಚ್ಚರಿಸಿದಾಗ ನೃಸಿಂಹಗಾಯತ್ರೀ ಮಂತ್ರವೇರ್ಪಡುತ್ತದೆ.
ಸ್ವಯಂ ನೃಸಿಂಹಶ್ಚತುರ್ಥ್ಯಂತಃ । ತದುಪರಿ ವಿದ್ಮಹೇ ಇತಿ । ತತ್ಪರಂ
ಮಹಾಬಲಃ ಚತುರ್ಥ್ಯಂತಃ । ತದುಪರಿ ಧೀಮಹೀತಿ ತನ್ನೊSನಂತಃ ಪ್ರಚೋದಯಾತ್
ಇತಿ । ನೃಸಿಂಹಗಾಯಮಂತ್ರೇಷು ಪೂರ್ವಯೋಃ ಮಂತ್ರಯೋಃ ಇತಿ ಶೇಷಃ ॥
 
ವ.ಟೀ.
 
-
 
ನೃಸಿಂಹಮಂತ್ರದ ನ್ಯಾಸಕ್ರಮ
 
ಪಾದೈರ್ವ್ಯಸೈ: ಸಮಸ್ಯೆ ಪಶ್ಚಾಂಗಂ ಪ್ರಕೀರ್ತಿತಮ್ ।
ಪೂರ್ವಯೋಸ್ತತ್ರ ಪೂರ್ವಂತು ಸರ್ವಜ್ಞನ ಷಡಂಗಕಮ್ ।
ತೃತೀಯಂ ತು ದ್ವಿರಾವೃ: ಪಾರಂಗಸಮನ್ವಿತಮ್ ॥14॥
 
ಅರ್ಥ ಹಿಂದೆ ಹೇಳಿದ ಎರಡು ನೃಸಿಂಹಮಂತ್ರಗಳಲ್ಲಿ ಪಂಚಾಂಗನ್ಯಾಸವನ್ನು
ಮಂತ್ರದ ನಾಲ್ಕು ಪಾದ ಹಾಗೂ ಸಮಸ್ತಮಂತ್ರದಿಂದ ಮಾಡಬೇಕು. ಇದಕ್ಕೆ 'ಸರ್ವಜ್ಞ'
ಎಂಬ ಪದ ಸೇರಿಸಿ ಷಡಂಗನ್ಯಾಸವನ್ನು ಮಾಡಬಹುದು. ದ್ವಿತೀಯಮಂತ್ರದಲ್ಲಿ
ಆರುಪದಗಳಿಂದಲೇ ಷಡಂಗನ್ಯಾಸವು. ಮೂರನೆಯದ್ದಾದ ನೃಸಿಂಹಗಾಯತ್ರಿಯಲ್ಲಾ-
ದರೋ ಪಾದಗಳನ್ನೇ ಎರಡು ಬಾರಿ ಉಚ್ಚರಿಸಿ ಷಡಂಗನ್ಯಾಸ ಮಾಡಬೇಕು.
 
1. ಮಂತ್ರಸ್ವರೂಪ ಹೀಗಿದೆ -
 
"ನೃಸಿಂಹಾಯ ವಿದ್ಮಹೇ ಮಹಾಬಲಾಯ ಧೀಮಹಿ ।
ತನ್ನೋSನಂತಃ ಪ್ರಚೋದಯಾತ್ ''
 
2. ಈ ಶ್ಲೋಕದಿಂದ ಹೇಳಿದ ನ್ಯಾಸವಿವರಗಳನ್ನು ಹೀಗೆ ಸಂಗ್ರಹಿಸಬಹುದು.
 
ಮೊದಲನೆಯ ನೃಸಿಂಹಾನುಷ್ಟುಪ್ ಮಂತ್ರದ ಅಂಗನ್ಯಾಸ
 
(1) ಉಗ್ರಂ ವೀರಂ ಮಹಾವಿಷ್ಣುಂ ಹೃದಯಾಯ ನಮಃ ।
(2) ಜ್ವಲಂತಂ ಸರ್ವತೋಮುಖಂ ಶಿರಸೇ ಸ್ವಾಹಾ ।