This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ದೇವತೆಗಳಾದ ಬ್ರಹ್ಮಾದಿಗಳಿಂದ ಯುಕ್ತನಾದವನೂ, ಮತ್ತು ತನ್ನದೇ ಆದ
ಮಾದಿರೂಪಗಳಿಂದಲೂ ಕೃದ್ಧೋಲ್ಕಾದಿರೂಪಗಳಿಂದಲೂ ಸುತ್ತುವರೆದಿರುವ
ವರಾಹರೂಪಿಯಾದ ಶ್ರೀಹರಿಯನ್ನು ಸಕಲಾಭೀಷ್ಟಸಿದ್ಧಿಗಾಗಿ ಧ್ಯಾನ ಮಾಡಬೇಕು'.
 
೧೪೮
 
ಮಂತ್ರಗಳ ಋಷಿ, ಛಂದಾದಿಗಳು
 
ವೈಷ್ಣವಾನಾಂ ಮುನಿಬ್ರ್ರಹ್ಮಾ ಮಂತ್ರಾಣಾಂ ವರ್ಣಭೇದತಃ ।
ಜೇಯಂ ಛಂದೋ ದೇವತೈಕ: ತತ್ತದ್ರೂಪೋ ಹರಿಃ ಪರಃ ॥6॥
ಅರ್ಥ ವೈಷ್ಣವಮಂತ್ರಗಳಿಗೆಲ್ಲ ಬ್ರಹ್ಮದೇವನೇ
ಅಕ್ಷರಗಣನೆಯಿಂದ ತಿಳಿಯಬೇಕು. ಎಲ್ಲಾ ಮಂತ್ರಗಳಿಗೂ
ಆಯಾಯ ಮಂತ್ರರೂಪನಾದ ಭಗವಂತನೇ ಪ್ರತಿಪಾದ್ಯನಾಗಿರುವನು.
 
ಋಷಿಯಾಗಿರುವನು.
 
ಛಂದಸ್ಸಾದರೋ
 
ಪ್ರಣವೇನ ಸ್ವನಾಮ್ಮಾ ಚ ಭೂಧರೇಣ ಪರಾತ್ಮನಾ ।
ಸರ್ವಜ್ಞಸರ್ವಶಕ್ತಿಭ್ಯಾಂ ಷಡಂಗಾನಿ ವಿದೋ ವಿದುಃ 11711
 
ಅರ್ಥ - ಓಂಕಾರ, ವರಾಹಪದ, ಭೂಧರ, ಪರಾತ್ಮಪದಗಳು ಹಾಗೂ ಸರ್ವಜ್ಞ
ಸರ್ವಶಕ್ತಿಪದಗಳಿಂದ ವರಾಹಮಂತ್ರಗಳ ಷಡಂಗನ್ಯಾಸವನ್ನು ಮಾಡಬೇಕು.
 
1. ವರಾಹಪುರಾಣದಲ್ಲಿ
 
''ಶುದ್ಧಸ್ಪಟಿಕಶೈಲಾಭಂ ರಕ್ತಪದ್ಮಾಯತೇಕ್ಷಣಮ್ ।
ವರಾಹವದನಂ ಸೌಮ್ಯಂ ಚತುರ್ಬಾಹುಂ ಕಿರೀಟಿನಮ್ ॥
ಶ್ರೀವತ್ಸವಕ್ಷಸಂ ಚಕ್ರಶಂಖಾಭಯಕರಾಂಬುಜ
 
ವಾಮೋರುಸ್ಥಿತಯಾ ಯುಕ್ತಂ
 
ಎಂದು ಇನ್ನೊಂದು ಧ್ಯಾನಶ್ಲೋಕವನ್ನು ಹೇಳಲಾಗಿದೆ.
 
2. ಅಂಗನ್ಯಾಸಕ್ರಮಃ – ಅಸ್ಯ ಶ್ರೀವರಾಹಮಂತ್ರಸ್ಯ ಬ್ರಹ್ಮಾ ಋಷಿಃ । ವರಾಹರೂಪೀ ಭಗವಾನ್
ದೇವತಾ । ನ್ಯಾಸೇ ವಿನಿಯೋಗಃ ॥
 
(1) ಓಂ ಹೃದಯಾಯ ನಮಃ (2) ಓಂ ವರಾಹಾಯ ಶಿರಸೇ ಸ್ವಾಹಾ
 
(3) ಓಂ ಭೂಧರಾಯ ಶಿಖಾಯ್ಕೆ ವೌಷಟ್ (4) ಓಂ ಪರಾತ್ಮನೇ ಕವಚಾಯ ಹುಮ್
(5) ಓಂ ಸರ್ವಜ್ಞಾಯ ನೇತ್ರಾಭ್ಯಾಂ ವಷಟ್ (6) ಓಂ ಸರ್ವಶಕ್ತಯೇ ಅಸ್ರಾಯ ಫಟ್
ಎಂದು ಷಡಂಗನ್ಯಾಸ.
 
ಈ ರೀತಿ ಎಲ್ಲಾ ಮಂತ್ರಗಳಿಗೂ ವರಾಹಪದದ ಸ್ಥಾನದಲ್ಲಿ ಆಯಾಯ ದೇವತಾನಾಮಗಳನ್ನು
ಸೇರಿಸಿ ಅಂಗನ್ಯಾಸ ಮಾಡಬಹುದು.