This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಉದ್ದೇಶ ಇತ್ಯಸ್ಯಾಯಮರ್ಥಃ । ಭಗವಚ್ಛಬಸ್ಯ ಚತುರ್ಥ್ಯಂತಪ್ರಯೋಗಃ । ಉತ್ತರಾ-
ಪ್ಯುದ್ದೇಶ ಇತ್ಯಸ್ಯ ಪದಸ್ಯ ಚತುರ್ಥ್ಯಂತಪದಪ್ರಯೋಗ ಇತಿ ಭಾವಃ ॥
 
೧೪೬
 
ಟೀಕಾರ್ಥ - ಮೊದಲು ವರಾಹಮಂತ್ರಸ್ವರೂಪವನ್ನು ತಿಳಿಸುವರು. ಯಕಾರದಿಂದ
ಎಂಟನೆಯ ಅಕ್ಷರವಾದ ಹಕಾರಕ್ಕೆ ಕಾರ ಸೇರಿಸಿದರೆ ಹೂ ಎಂದಾಗುತ್ತದೆ. ಅಂತದಿಂದ
ಸೇರಿಸಬೇಕು. 'ಅಂ ಅಂತಾಯ ನಮಃ' ಎಂಬಂತೆ ಅನುಸ್ವಾರವನ್ನು ಸೇರಿಸಿದಾಗ 'ಹೂಂ'
ಎಂದಾಗುತ್ತದೆ. ಇದೇ ವರಾಹಮಂತ್ರದ ಬೀಜಾಕ್ಷರವು.
 
ಇದರ ನಂತರ ನಮಃಪದವನ್ನು ಸೇರಿಸಬೇಕು. ಭಗವಚ್ಛಬ್ದವಾದರೂ ಉದ್ದೇಶ-
ವಾಗಿರುತ್ತದೆ. ಅಂದರೆ ಚತುರ್ಥಿವಿಭಕ್ತಿಯ ಭಗವಚ್ಛಬ್ದವೆಂದಿಟ್ಟುಕೊಳ್ಳಬೇಕು.
ಮುಂದೆಯೂ ಹೀಗೆಯೇ ಉದ್ದೇಶವೆಂದು ಹೇಳಿದಾಗ ಚತುರ್ಥಿವಿಭಕೃಂತಪದವನ್ನು
ತೆಗೆದುಕೊಳ್ಳಬೇಕು. ಇದರಿಂದಾಗಿ 'ಓಂ ಹೂಂ ನಮೋ ಭಗವತೇ' ಎಂದಾಯಿತು.
 
ವ.ಟಿ. - ತತ್ಪರಂ ಸ ಏವ । ತಾದೃಶ್ಚತುರ್ಥ್ಯ೦ತಃ । ರೂಪಸಂಯುತಶ್ಚ ವರಾಹ-
ರೂಪಾಯೇತ್ಯರ್ಥಃ । ಲೋಕಯಪಾಲಃ । ಭೂರ್ಭುವಃಸ್ವಪತಿಃ । ಭುವಃ ಪತೇಃ
ಭುವಃಪತಿತ್ವಂ ಭಾವಂ ಮೇ ದೇಹಿತಿ ತತ್ವಮ್ । ತದಂತೇ ದದಾಪಯ ಸ್ವಾಹಾ ಇತಿ
ಏಕೋ ಮಂತ್ರಃ ।
 
ಟೀಕಾರ್ಥ "ಓಂ ಹೂಂ ನಮೋ ಭಗವತೇ'' ಎಂಬುದರ ನಂತರ ಚತುರ್ಥಿ-
ವಿಭಕ್ತಿಯಿಂದ ಕೂಡಿರುವ ವರಾಹಶಬ್ದವನ್ನು ಸೇರಿಸಬೇಕು. ಆಗ 'ವರಾಹರೂಪಾಯ'
ಎಂದಾಗುತ್ತದೆ. ನಂತರ ಲೋಕತ್ರಯಪಾಲಕವೆಂಬರ್ಥ ಬರುವ ಭೂರ್ಭುವಸ್ವಃಪತಿ
ಎಂಬ ಶಬ್ದ ಸೇರಿಸಬೇಕು. ನಂತರ 'ಭೂಪತಿತ್ವಂ ಮೇ ದೇಹಿ ದದಾಪಯ' ಎಂಬ
ಪದಗಳನ್ನು ಸೇರಿಸಿ, ಅಂತ್ಯದಲ್ಲಿ ಸ್ವಾಹಾ ಎಂಬ ಪದಸೇರಿಸಿದಾಗ 32ಅಕ್ಷರಗಳ
ವರಾಹಮಂತ್ರ ಲಭಿಸುತ್ತದೆ.
 
"ಓಂ ಹೂಂ ನಮೋ
 
ಭಗವತೇ ವರಾಹರೂಪಾಯ ಭೂರ್ಭುವಃಸ್ವಪತಯೇ
ಭೂಪತಿತ್ವಂ ಮೇ ದೇಹಿ ದದಾಪಯ ಸ್ವಾಹಾ'' ಎಂದು ಪೂರ್ಣಮಂತ್ರಸ್ವರೂಪವು.
 
ತಿಥಿಃ = ಹದಿನೈದನೆಯ 'ಅಮ್' ಎಂಬಲ್ಲಿಯ ಅನುಸ್ವಾರ. ಮೈಮ : ಆಕಾಶಬೀಜ
ಹಕಾರವು. ವಾಮಕರ್ಣಭೂಷಿತಮ್ : ಉಕಾರದಿಂದ ಯುಕ್ತವಾದದ್ದು ವರಾಹಬೀಜಾಕ್ಷರವು
ಎಂದು ವೈಹಾಯಸಸಂಹಿತೆಯಲ್ಲಿದೆ.
 
ವರಾಹಪುರಾಣದಲ್ಲಿ 'ಓಂ ನಮಃ ಶ್ರೀವರಾಹಾಯ ಧರಣ್ಯುದ್ಧರಣಾಯ ಸ್ವಾಹಾ' ಎಂಬ
ಮಂತ್ರವಿದ್ದು ಇದನ್ನು ಹದಿನಾಲ್ಕು ಲಕ್ಷಬಾರಿ ಜಪಿಸಿ ಪಾಯಸಾನ್ನಹೋಮ ಮಾಡಿದರೆ
ಸಕಲಭೂಪತಿತ್ವಾದಿಫಲವೆಂದು ತಿಳಿಸಲಾಗಿದೆ.