This page has not been fully proofread.

ತೃತೀಯೋಧ್ಯಾಯಃ
 
ದಿಗ್ನಾಯುಸೂನುಸೂರ್ಯಾಶ್ಚ
 
ವರುಣಶ್ಚಾನಾವಪಿ ॥149
 
ವರದಕ್ಷ ಇಂದ್ರಸೂನುಃ ಮಿತ್ರಶೈವ ಮನುಸ್ತಥಾ ।
ಇಂದ್ರಿಯಾಖ್ಯಾಃ ಶಬ್ದನಾಮಾ ಬೃಹಸ್ಪತಿರುದಾಹೃತಃ ॥150॥
 
ಅನ್ವೇತು ಸೂನವೋ ವಾಯೋ ರುದ್ರಸ್ಯಾಪಿ ಪ್ರಕೀರ್ತಿತಾಃ ।
ಏತೇಷು ಭಗವಾನ್ ವಿಷ್ಣುಃ ಪ್ರಧಾನತನುರೇವ ತು ॥151
 
139
 
ಅರ್ಥ - ದಿಗಭಿಮಾನಿಗಳಾಗಿದ್ದು ದಿಗ್ಗೇವತೆಗಳೆನಿಸಿದ ಮಿತ್ರ, ಯಮ,
ಕುಬೇರ, ವರುಣ, ಚಂದ್ರರು ಪ್ರೋತೇಂದ್ರಿಯಕ್ಕೆ 'ಅಭಿಮಾನಿಗಳಾಗಿದ್ದಾರೆ.
ವಾಯುವಿನ ಪುತ್ರನಾದ ಪ್ರಾಣನು ತ್ವರಭಿಮಾನಿಯು. ಸೂರ್ಯನು ಚಕ್ಷುರಭಿ-
ಮಾನಿಯು, ವರುಣನು ಜಿಹೇಂದ್ರಿಯಕ್ಕೆ ಅಭಿಮಾನಿಯು, ಅಶ್ವಿನೀದೇವತೆಗಳು
ಘ್ರಾಣೇಂದ್ರಿಯಕ್ಕೆ ಅಭಿಮಾನಿಗಳು, ವಾಗಿಂದ್ರಿಯಾಭಿಮಾನಿ ಅಗ್ನಿಯು, ಪಾಣಿಗೆ
ಇಂದ್ರಪುತ್ರನಾದ ಜಯಂತನು, ಪಾಯುವಿಗೆ ಮಿತ್ರ ಹಾಗೂ ಯಮ, ನಿರ್ಋತಿಗಳು
ಅಭಿಮಾನಿಗಳು, ಸ್ವಾಯಂಭುವ ಮನು, ದಕ್ಷಪ್ರಜಾಪತಿಗಳು ಗುಹೇಂದ್ರಿಯಕ್ಕೆ
ಅಭಿಮಾನಿಗಳು. ಗಣಪತಿ ಆಕಾಶಕ್ಕೂ, ಪ್ರವಹವಾಯು ಭೂತವಾಯುವಿಗೂ,
ತೇಜಸ್ಸಿಗೆ ವಹಿಯೂ, ಜಲಕ್ಕೆ ವರುಣನೂ, ಪೃಥಿವಿಗೆ ಶನೈಶ್ಚರ ಧರಾದೇವಿಯರೂ
ಅಭಿಮಾನಿಗಳು. ಶಬ್ದ ಸ್ಪರ್ಶ ರೂಪ ರಸ ಗಂಧಗಳಿಗೆ ಕ್ರಮವಾಗಿ ಪ್ರಾಣಾಪಾನ
ವ್ಯಾನೋದಾನಸಮಾನರು ಮತ್ತು ರುದ್ರಪುತ್ರರಾದ ಪ್ರಾಣಾಪಾನಾದಿಗಳೂ
ಅಭಿಮಾನಿಗಳಾಗಿರುವರು. ಪುರುಷ ಮೊದಲಾದ ತತ್ವಗಳಿಗೂ ಸರ್ವೋತ್ತಮನಾದ
ಭಗವಂತನೇ ಅಂತರ್ನಿಯಾಮಕನಾಗಿರುವನೆಂದು ಚಿಂತಿಸಬೇಕು.
 
ತತ್ವನ್ಯಾಸಕ್ರಮ
 
ಧೈಯಃ ಪರಾತ್ಮನೋರ್ಮಧ್ಯೆ ತತ್ತ್ವನಾಮ ತದರ್ಥಯೋಃ ।
ಜಪೇ ನ್ಯಾಸೇ ನಮೋಽಂತಸ್ತು ಸ್ವಾಹಾಂತೋ ಹೋಮಕರ್ಮಣಿ ॥152॥
 
ಅರ್ಥ - ಭಗವದ್ವಾಚಕಗಳಾದ ಪರ ಮತ್ತು ಆತ್ಮಶಬ್ದಗಳ ಮಧ್ಯದಲ್ಲಿ
ತತ್ವವಾಚಕಗಳಾದ ಪುರುಷ ಮೊದಲಾದ ಪದಗಳನ್ನೂ, ಆತ್ಮಶಬ್ದದ ನಂತರ ಜಪ
ಮತ್ತು ನ್ಯಾಸ ಮಾಡಿಕೊಳ್ಳುವಾಗ 'ನಮಃ'ಶಬ್ದವನ್ನು ಹೇಳಿ, 'ಪರಾಯ
ಪುರುಷಾತ್ಮನೇ ನಮಃ', 'ಪರಾಯ ಅವ್ಯಕ್ತಾತ್ಮನೇ ನಮಃ' ಇತ್ಯಾದಿಯಾಗಿ