This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 

 
ಅರ್ಥ - ಹಿಂದೆ ಹೇಳಿದ ಅಷ್ಟಾಕ್ಷರವುಳ್ಳ ಓಂಕಾರವು; ವಿಶ್ವ ತೈಜಸ, ಪ್ರಾಜ್ಞ,
ತುರೀಯ, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ವವೆಂಬ ನನ್ನದೇ ಆದ ಎಂಟು
ರೂಪಗಳನ್ನು ಪ್ರತಿಪಾದಿಸುತ್ತದೆ.
 
4
 

 
ವ.
ಟೀಕಾ - ಅಷ್ಟಾಕ್ಷರಾಣಾಂ ದೇವತಾ ಆಹ - ಸ ಇತಿ ॥ ಸೋಽಯಮಷ್ಟಾಕ್ಷರವಾನ್
ಪ್ರಣವಃ । ವಿಶ್ವ-ತೈಜಸ-ಪ್ರಾಜ್ಞ-ತುರೀಯಾತ್ಯಾಂತರಾತಮಾಂತರಾತ್ಮಪರಮಾತ್ಮಜ್ಞಾನಾತ್ಮಸಂಜ್ಞಕಾ-
ನಾಮ್ ಅಷ್ಟಾಕ್ಷರರೂಪಾಣಾಂ ಕ್ರಮೇಣ ವಾಚಕ ಇತ್ಯರ್ಥಃ ॥
 

 
ಟೀಕಾರ್ಥ- ಹಿಂದೆ ಹೇಳಿದ ಅಕಾರಾದಿ ಎಂಟು ಅಕ್ಷರಗಳಿಗೂ ಸಂಬಂಧಪಟ್ಟ
ಭಗವದ್ರೂಪಗಳನ್ನು ಹೇಳುತ್ತಿದ್ದಾರೆ- 'ಸ' ಎಂಬ ಶ್ಲೋಕದಿಂದ, ಸಃ ಎಂದರೆ ಹಿಂದೆ
ಹೇಳಿದ ಎಂಟಕ್ಷರವುಳ್ಳ ಪ್ರಣವವು ಎಂದರ್ಥ. ಅಕಾರಾದಿ ಎಂಟು ಅಕ್ಷರಗಳಿಗೆ ಕ್ರಮವಾಗಿ

ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ ಪರಮಾತ್ಮ, ಜ್ಞಾನಾತ್ಮ ಎಂಬ
ಎಂಟುರೂಪಗಳು ಪ್ರತಿಪಾದ್ಯವಾಗಿವೆ.
 
www
 

 
ವಿಶೇಷಾಂಶ - ಯತಿಪ್ರಣವಕಲ್ಪದಲ್ಲಿ ಕೃಷ್ಣ, ನೃಸಿಂಹ, ವರಾಹ, ವಿಷ್ಣು, ಪರಂಜ್ಯೋತಿ,
ಪರಂಬ್ರಹ್ಮ, ವಾಸುದೇವ ಎಂದು ಭಗವಂತನ ಬೇರೆ ರೂಪಗಳನ್ನು ಅಕಾರಾದಿಗಳಿಂದ
ಪ್ರತಿಪಾದ್ಯ- ವೆನ್ನಲಾಗಿದೆ. ಇದನ್ನು ಶ್ರೀಮದಾಚಾರ್ಯರು 'ಮದ್ರೂಪಾಣಾಂ ಚ ವಾಚಕಃ'
ಎಂಬಲ್ಲಿರುವ 'ಚ'ಕಾರದಿಂದ ಹೇಳಿದ್ದಾರೆ.
 

 
ತತ್ವಸಾರದಲ್ಲಿ ಸೃಷ್ಟಿಯನ್ನು ಮಾಡುವ ಬ್ರಹ್ಮಾಂತರ್ಯಾಮಿ- ಯಾದ ರೂಪ, ಪಾಲನೆ
ಮಾಡುವ ವಿಷ್ಣುರೂಪ, ಸಂಹಾರ ಮಾಡುವ ಶಿವಾಂತರ್ಯಾಮಿರೂಪ, ಅನಿರುದ್ಧಾದಿ
ಪಂಚ ರೂಪಗಳು; ಇವು ಸೇರಿ ಒಟ್ಟು ಎಂಟುರೂಪಗಳು ಎಂದು ಹೇಳಿದೆ.
 

 
ಐವತ್ತು ಮಾತೃಕಾರೂಪಗಳು
 

 
ತದ್ರೂಪಭೇದಾಃ ಪಂಚಾರನ್ನೂಶನ್ಮೂರ್ತಯೋ ಮಮ ಚಾಪರಾಃ ।

ಪಂಚಾಶದ್ವರ್ಣವಾಚ್ಯಾಸ್ತಾ ವರ್ಣಾಸ್ತಾರಾರ್ಣಭೇದಿತಾಃ ॥5
 

 
ಅರ್ಥ - ಈ ವಿಶ್ವಾದಿಎಂಟುರೂಪಗಳಿಂದ ವ್ಯಕ್ತಿಗಳಾದ, ವಿಶ್ವಾದಿ ರೂಪಗಳಿಂದ
ಬೇರೆಯಾದ ನನ್ನ ಐವತ್ತು ರೂಪಗಳಿವೆ. ಓಂಕಾರದ ಅಷ್ಟಾಕ್ಷರಗಳಿಂದ ಅಭಿವ್ಯಕ್ತ
ಗಳಾದ ಅಕಾರಾದಿ-ಕಾರದವರೆಗಿನ ಐವತ್ತು ವರ್ಣಗಳು ಈ ಐವತ್ತು ರೂಪಗಳನ್ನು

ಪ್ರತಿಪಾದಿಸುತ್ತವೆ.
 

 
ವ.ಟೀ. - ಮಾತೃಕಾದೇವತಾ ಆಹ - ತದ್ರೂಪಭೇದಾ ಇತ್ಯಾದಿ ॥ ಪಂಚಾಶ-
ದಕ್ಷರಾಣಾಂ ಮೂರ್ತಯಃ, ಅಥ ನಾರಾಯಣಾಷ್ಟಾಕ್ಷರ ಮೂರ್ತಯತ್ನ ತದ್ರೂಪ
 
ಶ್ಚ ತದ್ರೂಪ-