This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಗಳು ಪೂಜೆ, ಪಾರ್ಷದರಿಗೆ ಬಲಿಪ್ರದಾನ, ಕಡೆಯಲ್ಲಿ ಅವಜ್ಞಭೃಥ, ಬ್ರಾಹ್ಮಣ
ಭೋಜನಾದಿಗಳು ನಡೆಯಬೇಕು.
 
132
 

 
ಸಂಪ್ರೋಕ್ಷಣವಿಧಿ
 

 
ಚೋರಚಂಡಾಲಪತಿತಪ್ಪೋದಕ್ಕಾಶ್ವೋದಕ್ಯಾದಿಪ್ರವೇಶನೇ ।

ಶವಾದ್ಯುಪಹತ್ತೌ ಚೈವ ಪೂಜಾವಿಚ್ಛೇದನೇ ತಥಾ II13511
 
೧೩೫ ॥
 
ಸ್ನ
ಪನೋಕೇಕ್ತೇನ ಮಾರ್ಗೇಣ ಪ್ರಾಯಶ್ಚಿತ್ತವಿಧಿಃ ಸ್ಮೃತಃ ।
 

 
ಅರ್ಥ - ಕಳ್ಳರು, ಚಂಡಾಲರು, ಪತಿತರು, ಪಾಪಿಗಳು, ನಾಯಿ, ಬೆಕ್ಕು, ಕತ್ತೆ
ಮೊದಲಾದ ಪ್ರಾಣಿಗಳು, ರಜಸ್ವಲೆಯರಾದ ಸ್ತ್ರೀಯರು, ದೇವಾಲಯಪ್ರವೇಶ
ಮಾಡಿದರೆ ಆಗ ಸಂಪ್ರೋಕ್ಷಣ ವಿಧಿಯಿಂದ ಶುದ್ದಿಧಿ ಮಾಡಬೇಕು. ಹಾಗೆಯೇ
ಶವಾದಿಗಳಿಂದ ದೇವಾಲಯದ ಪರಿಸರ ಮಲಿನವಾದಾಗಲೂ'[^1] ಸಂಪ್ರೋಕ್ಷಣ
 

 
ಸಮರ್ಪಿಸಬೇಕು.
 

[^
1]. ವಿಶೇಷಾಂಶ - ಕಳ್ಳರು ದೇವಾಲಯಕ್ಕೆ ನುಗ್ಗಿ ದೇವರನ್ನು ಮುಟ್ಟಿ ಆಭರಣಾದಿಗಳನ್ನು
ಅಪಹರಿಸಿದಾಗ, ಬ್ರಹ್ಮಹತ್ಯಾದಿ- ಗಳಿಂದ ಕೂಡಿದ ಪಾತಕಿಗಳ ಪ್ರವೇಶವಾದಾಗಲೂ, 'ಉದಕ್ಕಾಯಾ'

ಎಂದರೆ ರಜಸ್ವಲೆಯು. ಆದಿಪದದಿಂದ ಕತ್ತೆ, ಕಾಗೆ, ಗೂಬೆ ಮೊದಲಾದವುಗಳನ್ನು
ಇಟ್ಟುಕೊಳ್ಳಬೇಕು. ಇಲ್ಲಿ ಕೇವಲ ಅಭಿಷೇಕವನ್ನು ಮಾತ್ರ ಹೇಳಿದ್ದರಿಂದ ಪಂಚಗವ್ಯಾದಿ ಅಧಿ
- ವಾಸನ ವಾಗಲೀ, ಅಂಕುರಾರ್ಪಣಾದಿಗಳು ಬೇಕಾಗಿಲ್ಲ. 'ಜಲಾಧಿವಾಸರಹಿತಂ ನೇತ್ರೋ-
ನೀ
ನ್ಮೀಲನವರ್ಜಿತಾ'.
 

 
ಸಂಪ್ರೋಕ್ಷಣವಿಧಿ
 

 
ಆಚಮನ, ಪವಿತ್ರಪಾಣಿಯಾಗಿ ಪ್ರಾಣಾಯಾಮ ಮಾಡಿ 'ಶುಭತಿಥ್ಥೌ ಅಸ್ಯಾಃ ಪ್ರತಿಮಾಯಾಃ
ಚೋರಚಂಡಾಲಪತಿತಾದಿಜನಿತಸ್ಪೃಷ್ಟಾಸ್ಪ ಸ್ಪೃಷ್ಟದೋಷಪರಿಹಾರಾರ್ಥಂ ತಥಾ ಪ್ರತಿಮಾಯಾಂ
ಭಗವತ್ನ್ನಿಧಾನಸಿದ್ಧ್ಯರ್ಥಂ ಸಂಪ್ರೋಕ್ಷಣಂ ಕರಿಷ್ಯೇ' ಎಂದು ಸಂಕಲ್ಪಿಸಿ, ಗಣಪತಿಪೂಜೆ,
ವರುಣಪೂಜೆ, ಪುಣ್ಯಾಹ, ಋತ್ವಿಕ್‌- ವರಣ, 'ಶುಚೀವೋ ಹವ್ಯಾ' ಇತ್ಯಾದಿ ಮಂತ್ರದಿಂದ
ಯಾಗ
ಯಾಗ- ಭೂಮಿಯನ್ನು ಶುದ್ಧಿಮಾಡಿ, 'ಸ್ವಸ್ತ್ಯಯನಂ' ಇತ್ಯಾದಿ ಮಂತ್ರ- ದಿಂದ ಬಿಳಿಸಾಸಿವೆಯನ್ನು
ಎರಚಿ, ದೇವರ ಮುಂದೆ ಗೋಮಯಾ- ದಿಗಳಿಂದ ಶುದ್ಧಿಮಾಡಿ, ಚಕ್ರಾಬ್ಮಂಡಲವನ್ನು
ಬರೆಯಬೇಕು. ಅದರ ಮೇಲೆ ಎಂಟು ದಿಕ್ಕುಗಳಲ್ಲಿಯೂ ತೊಗರಿ, ಉದ್ದು, ಹುರುಳಿ, ಯವ,
ಗೋಧಿ, ಅವರೆ, ಕಡಲೆ, ಅಲಸಂದೆಗಳನ್ನು ಇಡಬೇಕು. ಮಧ್ಯ ಅಕ್ಕಿಯ ರಾಶಿಯಲ್ಲಿ ಬ್ರಹ್ಮನ
ಕಲಶವನ್ನು ಸ್ಥಾಪಿಸಿ, ಉಳಿದ ಎಂಟು ದಿಕ್ಕುಗಳಲ್ಲಿ ಕಲಶಸ್ಥಾಪಿಸಬೇಕು.
 

 
ಪೂರ್ವಕಲಶದಲ್ಲಿ ಅರಿಷಿಣದ ನೀರು, ಆಗೇಗ್ನೇಯಕಲಶದಲ್ಲಿ ಪಂಚಾಮೃತ, ದಕ್ಷಿಣಕಲಶದಲ್ಲಿ