This page has been fully proofread once and needs a second look.

ತೃತೀಯೋsಧ್ಯಾಯಃ
 
131
 
ಯಾನಮಾರೋಪ್ಯ ಯಾತ್ರಾದುತ್ತದ್ಯುತ್ಸವಂ ಕರಿಷ್ಯೇ' ಎಂದು ಸಂಕಲ್ಪಿಸಿ, ವಾಸ್ತುಪೂಜೆ, ತದಂಗ
ಚಂಡ-ಪ್ರಚಂಡ, ವಿಷಕ್ಕೇಷ್ವಕ್ಸೇನ ಗರುಡಾದಿಗಳ ಪ್ರತಿಷ್ಠೆ ಮಾಡಬೇಕು.
 

 
ದ್ವಾರದಲ್ಲಿ ಚಂಡಪ್ರಚಂಡರನ್ನೂ, ಕ್ಷೇತ್ರಪಾಲಕ, ಇಂದ್ರಾದಿ ಅಷ್ಟದಿಕ್ಷಾಪಾಲಕರನ್ನೂ, ಆಯಾಯಾ
ದಿಕ್ಕಿನಲ್ಲಿ ಸ್ಥಾಪಿಸಬೇಕು. ನಂತರ 'ಅಸ್ಮಿನ್ ಉತ್ಸವಕರ್ಮಣಿ ರಕ್ಷಾಬಂಧನಂ ಕರಿಷ್ಯೇ' ಎಂದು
ಪುಣ್ಯಾಹ ಮಾಡಿ ಆ ನೀರಿನಿಂದ ಸ್ಥಳಶುದ್ಧಿ ಮಾಡಬೇಕು.
 
ನಾರಾಯಣಾಯ
ಬ್ರಹ್ಮಾ ಬ್ರಹ್ಮಣ
 

 
'ಸಹಸ್ರಾರ ಹುಂ ಫಟ್' ಎಂದು ಏಳು ಬಾರಿ ಅಭಿಮಂತ್ರಿಸಿ, ದೇವನ ಬಲಗೈಗೂ,
ಶ್ರೀಭೂದೇವಿಯರಿಗೆ ವಾಮಹಸ್ತದಲ್ಲೂ ಬಂಧಿಸ- ಬೇಕು. ಓಂ ನಮೋ
ನಾರಾಯಣಾಯ ಎಂದು ಪ್ರತಿಮೆಯನ್ನು ಮುಟ್ಟಿ ನೂರೆಂಟು ಬಾರಿ ಜಪಿಸಬೇಕು. 'ಯೋ
ಬ್ರಹ್ಮಾ ಬ್ರಹ್ಮಣ
ಉಜ್ಜಹಾರ' ಇತ್ಯಾದಿ ಮೃಘೃತಸೂಕ್ತದಿಂದ ಅಭಿಮಂತ್ರಿಸಿ, 'ಬೃಹಾತ್ಸಾಮಕ್ಷತ್ರಳ್ಳಭೃದ್' ಇತ್ಯಾದಿ
ಮಂತ್ರದಿಂದ ಧೂಪಪಾತ್ರೆಯ ಭಸ್ಮದಿಂದ ರಕ್ಷೆಯನ್ನಿಡಬೇಕು. ನಂತರ ಅರ್ತ್ಘ್ಯಪಾದ್ಯಾದಿಗಳಿಂದ

ಅರ್ಚಿಸಿ ಅಪೂಪಾದಿ ನೈವೇದ್ಯ ಮಾಡಿ, 'ಶತಂ ಜೀವ ಶರದೋ' 'ಯೇ ಯಜ್ಞೇನ' 'ತ್ರ್ಯಂಬಕಂ
ಯಜಾಮಹೇ' ಇತ್ಯಾದಿ ಮಂತ್ರ- ಗಳಿಂದ ರಕ್ಷೆಯನ್ನು ಅಭಿಮಂತ್ರಿಸಿ, ಬಲಗೈಗೆ ಕಟ್ಟಬೇಕು. ನಂತರ

ಸಮವಾಗಿ ಮಿಲಿತವಾದ ಪಂಚಗವ್ಯದಿಂದ ಪುರುಷಸೂಕ್ತದಿಂದ ಪಠಿಸುತ್ತಾ ಚಂಡ-ಪ್ರಚಂಡ,
ಕ್ಷೇತ್ರಪಾಲಕ, ಗರುಡ, ವಿಷಕ್ಸಷ್ವಕ್ಸೇನ, ಗಣೇಶ, ಅಷ್ಟದಿಕಾಕ್ಪಾಲಕರನ್ನು ಪ್ರೋಕ್ಷಿಸಬೇಕು.
 

ನಂತರ ಪ್ರತಿಷ್ಠಾವಿಧಿಯಲ್ಲಿ ಹೇಳಿದಂತೆ ಕಲಶಗಳನ್ನು ಪರಿವಾರ ದೇವತಾಕಲಶಗಳನ್ನು ಸ್ಥಾಪಿಸಿ,
ಉಪಚಾರಪೂಜೆ, ತತ್ವನ್ಯಾಸಾದಿ ಗಳಿಂದ ಪೂಜಿಸಿ, ಕುಂಡದಲ್ಲಿ ಅಗ್ನಿಪ್ರತಿಷ್ಠಾಪನಾಪೂರ್ವಕ

ನವಗ್ರಹ ಹೋಮಮಾಡಿ ನಂತರ ಹಿಂದೆ ತಿಳಿಸಿದಂತೆ ಹತ್ತು- ಸಾವಿರ ಅಥವಾ ನೂರೆಂಟು ಬಾರಿ
ವಿಷ್ಣುಗಾಯತ್ರಿಯಿಂದ ಸಮಿತ್ತು, ಚರು, ಆಜ್ಯಾದಿಗಳಿಂದ ಹೋಮಿಸಬೇಕು. ಈ ಹೋಮ

ಲಕ್ಷಸಂಖ್ಯೆಯಲ್ಲಿ ಮಾಡುವುದಿದ್ದರೆ ಒಂಭತ್ತು ದಿವಸಗಳಲ್ಲಿಯೂ ವಿಭಾಗಿಸಿ ಹೋಮಿಸಬೇಕು.
ಇದೇ ರೀತಿ ಹತ್ತು ಸಾವಿರ ಮಾಡುವು- ದಾದರೂ ವಿಭಾಗಿಸಿ ಹೋಮಿಸುವುದು. ಪುರುಷಸೂಕ್ತ-
ದಿಂದ ಹೋಮವನ್ನು ಒಂಭತ್ತು ದಿವಸಗಳಲ್ಲಿಯೂ ಮಾಡಬೇಕು. ಪರಿವಾರದೇವತೆಗಳ
ಮಂತ್ರಗಳಿಂದ ನೂರೆಂಟು ಬಾರಿ ಹೋಮಿಸ ಬೇಕು. ನಂತರ ಎಲ್ಲ ದೇವತೆಗಳಿಗೂ ಪ್ರಾಣಪ್ರತಿಷ್ಠಾ
ಮೂಲಕ ಧ್ಯಾನಾವಾಹನಾದಿಗಳನ್ನು ಸಮರ್ಪಿಸಬೇಕು. ಚಕ್ರಾಬ್ಕಲಶ- ಗಳಿಂದ ದೇವರನ್ನು
ಅಭಿಷೇಕಿಸಿ, ವಾದ್ಯಘೋಷಗಳಿಂದ ಆಯಾಯ ಪ್ರತಿಮೆಗಳಿಗೂ ಪ್ರೋಕ್ಷಿಸಬೇಕು. ಧ್ವಜಸಮೀಪ
ಬಂದು ಹಿಂದಿನಂತೆ ಪ್ರೋಕ್ಷಿಸಿ, ಉಪಚಾರಪೂಜೆ ಮಾಡಿ ಘಂಟಾನಾದ- ಪೂರ್ವಕ 'ಸುಪರ್ಣೋಸಿ
ಗರುತ್ಮಾನ್' (ತೈ 4/1/19), 'ತ್ರಿವೃತ್ತೋ ಶಿರೋ ಗಾಯತ್ರಂ ಚಕ್ಷುಸ್ತೋಮ ಆತ್ಮಾ' ಇತ್ಯಾದಿ
ಮಂತ್ರಗಳಿಂದ ಗರುಡನ ಚಿತ್ರವಿರುವ ಪತಾಕೆಯನ್ನು ಏರಿಸಬೇಕು. ಇದು ದೇವತೆ ಗಳನ್ನು
ಉತ್ಸವಕ್ಕೆ ಆಹ್ವಾನಪತ್ರಿಕೆ ಕಳುಹಿಸಿದಂತೆ. ಧ್ವಜಸ್ತಂಭ- ದಲ್ಲಿ ದರ್ಭೆಕೂರ್ಚ, ಅಶ್ವತ್ಥಪಲ್ಲವಾದಿ-
ಗಳನ್ನು ಕಟ್ಟಬೇಕು. ನಂತರ ಗ್ರಾಮದಿಂದ ಹೊರಗೆ ಹೋಗಿ, ಮೂಲಪ್ರತಿಮೆಯಲ್ಲಿ

ಮೂಲಮಂತ್ರದಿಂದ ಆವಾಹಿಸಿ, ಅಷ್ಟದಿಕ್ಷಾಪಾಲಕಾದಿಗಳಿಗೆ ಬಲಿಯನ್ನು ನೀಡಿ ಉತ್ಸವವನ್ನು
ಮಾಡಬೇಕು. ನಂತರ ಅವಭ್ಯಭೃಥಸ್ನಾನ ಧ್ವಜಾವರೋಹಣ ಕಾರ್ಯ ಮಾಡಿ ಭಗವಂತ- ನಲ್ಲಿ