We're performing server updates until 1 November. Learn more.

This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಬ್ರಹ್ಮರುದ್ರಾದಿವಂದಿತತ್ವ ಸಿದ್ಧವಾದ ಮೇಲೆ ಜಗದ್ವಂದ್ಯತ್ವವು ಸಿದ್ಧಿಸಿದಂತೆಯೇ. ಈ
ಬ್ರಹ್ಮರುದ್ರಾದಿಗಳಿಗೂ ಸ್ವಚ್ಛಯಾ ಬ್ರಹ್ಮಾದಿಪದವಿಯನ್ನು ನೀಡುವ ಲಕ್ಷ್ಮೀದೇವಿಗೂ
ನಿಯಾಮಕನೆಂದು ಕಮಲಾಪತಿ ಎಂಬ ವಿಶೇಷಣ ಸೂಚಿಸುತ್ತದೆ.
 
2
 
ವಿಧಿಂ ವಿಧಾಯ ಸರ್ಗಾದ್‌ ತೇನ ಪೃಷ್ಟೋಽಬ್ಬಲೋಚನಃ ।
ಆಹ ದೇವೋ ರಮೋತ್ಸಂಗವಿಲಸತ್ ಪಾದಪಲ್ಲವ
 
11211
 
ಅ : ರಮಾದೇವಿಯ ಉತ್ಸಂಗದಲ್ಲಿ ತನ್ನ ಚಿಗುರಿನಂತಿರುವ ಪಾದಗಳನ್ನಿರಿಸಿದ
ಶ್ರೀಮನ್ನಾರಾಯಣನು ಸೃಷ್ಟಿಯ ಮೊದಲು, ತನ್ನಿಂದ ಜನಿಸಿದ ಬ್ರಹ್ಮದೇವನು ಕೇಳಿದ
ಪ್ರಶ್ನೆಗಳಿಗೆ ಹೀಗೆ ಉತ್ತರ ನೀಡಿದನು.
 
ವಟೀ - ಸರ್ಗಾದೌ = ಜಗದುತ್ಪತೇಃ ಪೂರ್ವಮ್, ವಿಧಿಂ = ಬ್ರಹ್ಮಾಣಂ, ರಮಾಯಾ
ಉತ್ಸಂಗಃ ತಸ್ಮಿನ್ ವಿಲಸನ್ ಪಾದಪಲ್ಲವಃ ಯಸ್ಯ ಸಃ । ತಥಾ ಸುಖೋಪವಿಷ್ಟಃ ವಿಷ್ಣು
ವಿಧಿಮಾಹ ಇತ್ಯನೇನ ಎಷ್ಟೋಃ ವಿಪ್ರಲಂಭಕತ್ವಾದಯೋ ದೋಷಾಃ ಪರಿಹೃತಾ ಭವತಿ ।
 
ಟೀಕಾರ್ಥ - ಇಲ್ಲಿರುವ ಸರ್ಗಾದ್ ಎಂದರೆ ಈ ಜಗತ್ತನ್ನು ಸೃಷ್ಟಿಮಾಡುವ ಮೊದಲು
ಎಂದರ್ಥ. ವಿಧಿಂ ಎಂದರೆ ಬ್ರಹ್ಮನನ್ನು ಎಂದರ್ಥ; 'ರಮಾದೇವಿಯ ತೊಡೆಯಲ್ಲಿರಿಸಿದ
ಪಾದಕಮಲಗಳನ್ನಿಟ್ಟು ಸುಖವಾಗಿದ್ದ ಭಗವಂತನು ಬ್ರಹ್ಮದೇವನಿಗೆ ಉತ್ತರಿಸಿದನು'
ಎಂಬುದರಿಂದ ವಕ್ತಾನುಕೂಲ್ಯಕ್ಕೆ ಆವಶ್ಯವೆನಿಸಿದ ಅವಿಪ್ರಲಂಭಕತ್ವಾದಿ ದೋಷಗಳಾವುವೂ
ಇರುವುದಿಲ್ಲವಾದ್ದರಿಂದ ವಕ್ತಾನುಕೂಲ್ಯಾದಿಗಳು ಲಭಿಸುತ್ತವೆ ಎಂದು ತಿಳಿಯಬೇಕು.
 
1. ವಿಶೇಷಾಂಶ
 
"ಆಹ'' ಉತ್ತರಿಸಿದನು ಎಂಬುದರಿಂದ ವಕೃವಿಗೆ ಬೇಕಾದ ಹೇಳಬೇಕೆಂಬ
ಇಚ್ಛೆಯು (ವಿವಕ್ಷಾ) ಇದೆಯೆಂದೂ, 'ದೇವಃ' ಎಂಬುದರಿಂದ ವಿವಕ್ಷಿತಾರ್ಥತತ್ತ್ವಜ್ಞಾನವೂ,
ಕರಣಪಾಟವವೂ ಇದೆಯೆಂದೂ ಸೂಚಿಸಿ ವಕ್ತಾನುಕೂಲ್ಯವಿದೆಯೆಂದು ತಿಳಿಸಲಾಗಿದೆ.
ವಿಧಯೇ ಬ್ರಹ್ಮನಿಗಾಗಿ ಎಂದದ್ದರಿಂದ ಬ್ರಹ್ಮದೇವನು ಅಧಿಕಾರಿಗಳಲ್ಲಿ ಉತ್ತಮನಾದ್ದರಿಂದ
ತತ್ತ್ವಜ್ಞಾನಯೋಗ್ಯತೆಯೆಂಬ ಪ್ರೋತ್ರಾನುಕೂಲ್ಯವೂ ಸಿದ್ಧಿಸುತ್ತದೆ.
 
ಸರ್ಗಾದ್ ಎಂದದ್ದರಿಂದ ವಿರಿಂಚಿಯನ್ನು ಹೊರತು ಬೇರೆ ಪ್ರಪಂಚವೇ ಸೃಷ್ಟಿಯಾಗಿಲ್ಲವಾಗಿ,
ಬ್ರಹ್ಮನು ಪುತ್ರನಾದ್ದರಿಂದ ವಸ್ತು ಪ್ರೀತಿವಿಷಯತ್ವವೂ ಸೂಚಿತವಾಗಿದೆ.
 
ಪೃಷ್ಟ ಆಹ ಪ್ರಶ್ನಿಸಿದಾಗ ಉತ್ತರಿಸಿದನು ಎಂಬುದರಿಂದ ಪ್ರಸಂಗಾನುಕೂಲ್ಯವನ್ನು ತಿಳಿಸಿರುವರು.
ಬ್ರಹ್ಮದೇವರು ಜ್ಞಾನಿಗಳಾದರೂ ವಿಶೇಷಜ್ಞಾನಕ್ಕಾಗಿ ಈ ಪ್ರಶ್ನೆಯಾಗಿದೆ.
 
ಜಾನಂತೋಪಿ ವಿಶೇಷಾರ್ಥಜ್ಞಾನಾಯ ಸ್ಥಾಪನಾಯ ಚ ।
ಪೃಚ್ಛಂತಿ ಸಾಧವೋ ಯಸ್ಮಾತ್ ತಸ್ಮಾತ್ ಪೃಚ್ಛಸಿ ಪಾರ್ಥಿವ !! (ಭಾ.ತಾ.)
 
-