This page has been fully proofread once and needs a second look.

॥ಶ್ರೀಃ ॥
 
ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತ
ತಂತ್ರಸಾರಸಂಗ್ರಹಃ
(ಶ್ರೀವರದೇಂದ್ರ-ವಸುಧೇಂದ್ರ ತೀರ್ಥಟೀಕಾಸಹಿತಮ್)
ಮಂಗಳಾಚರಣಮ್
 
ಜಯತ್ಯಬ್ಜಭವೇಶೇಂದ್ರವಂದಿತಃ ಕಮಲಾಪತಿ: [^1]।
ಅನಂತವಿಭವಾನಂದಶಕ್ತಿಜ್ಞಾನಾದಿಸದ್ಗುಣ: ॥ ೧ ॥
ಅರ್ಥ- ಅಬ್ಬಭವಃ = ಚತುರ್ಮುಖನು, ಈಶಃ = ರುದ್ರನು, ಇಂದ್ರಃ
=ಇಂದ್ರದೇವರು ಇವರಿಂದ, ವಂದಿತಃ =ವಂದಿತನಾದವನು, ಅನಂತ = ಕೊನೆಯಿರದ, ವಿಭವ = ಐಶ್ವರ್ಯದ, ಶಕ್ತಿಜ್ಞಾನಾದಿ- ಸದ್ಗುಣ = ಸಾಮರ್ಥ್ಯ, ಆನಂದ ಮೊದಲಾದ ಸದ್ಗುಣಗಳಿಂದ ಪೂರ್ಣನಾದ, ಕಮಲಾಪತಿಃ = ಲಕ್ಷ್ಮೀರಮಣನು,
ಜಯತಿ = ಉತ್ಕೃಷ್ಟನಾಗಿದ್ದಾನೆ.
ವಸುಧೇಂದ್ರತೀರ್ಥರ ಟೀಕಾ ಈ ಮೊದಲನೆಯ ಶ್ಲೋಕದಲ್ಲಿ ಈ ತಂತ್ರಸಾರದಲ್ಲಿ ಹೇಳಲ್ಪಟ್ಟ ವಸ್ತು ಯಾವುದೆಂದು ವಸ್ತುನಿರ್ದೇಶ ಮಾಡಿದ್ದಾರೆ.
 
ಕಮಲಾಪತಿರ್ವಿಜಯತಿ- ಭಗವಂತನಿಗೆ ಯಾವಾಗಲೂ ಜಯವೇ ಇರುವುದರಿಂದ ಜಯವಾಗಲಿ ಎಂದರೆ ಉತ್ಕೃಷ್ಟನಾಗಿದ್ದಾನೆ = ಎಲ್ಲರಿಗಿಂತಲೂ ಮಿಗಿಲಾಗಿದ್ದಾನೆ ಎಂದರ್ಥ.
 
ಭಗವಂತನು ಉತ್ಕೃಷ್ಟನಾಗಿದ್ದಾನೆ ಎನ್ನಲು 'ಅಬ್ಜಭವೇಶ- ವಂದಿತನಾಗಿರುವುದೂ ಹಾಗೂ 'ಅನಂತವೂ ವೈಭವೋಪೇತವೂ ಆದ ಶಕ್ತಿ, ಜ್ಞಾನಾನಂದಾದಿ ಸದ್ಗುಣವಿರುವುದು' ಎಂಬ ಎರಡು ಹೇತುಗಳನ್ನು ಹೇಳಲಾಗಿದೆ.
 
ಅನಂತವಿಭವ ಎಂಬಲ್ಲಿ ಅನಂತವೆಂದರೆ ಪೂರ್ಣವೆಂದರ್ಥ. ಈ ಪೂರ್ಣತ್ವವೆಂಬ ಅನಂತತ್ವವಿಶೇಷಣವನ್ನು ವಿಭವ, ಆನಂದ, ಶಕ್ತಿ, ಜ್ಞಾನಗಳಿಗೂ ಸೇರಿಸಬೇಕು. ಇದರಿಂದಾಗಿ ಪೂರ್ಣವಾದ ಐಶ್ವರ್ಯವುಳ್ಳವನು, ಪೂರ್ಣಾನಂದವುಳ್ಳವನು, ಪೂರ್ಣಶಕ್ತಿ- ಯುಳ್ಳವನು ಭಗವಂತನೆಂದು ಸಿದ್ಧಿಸುತ್ತದೆ.

 
 
 
[^1]. 'ಯಂ ಕಾಮಯೇ ತಂ ತಮುಗ್ರಂ ಕೃಣೋಮಿ । ತಂ ಬ್ರಹ್ಮಾಣಂ ತಮೃಷಿಂ' ಇತ್ಯಾದಿ. 'ಮಮ ಯೋನಿಃ ಅಪ್ಸ್ವಂತಃಸಮುದ್ರೇ' – ಅಂಭೃಣೀಸೂಕ್ತ.