This page has been fully proofread once and needs a second look.

॥ಶ್ರೀಃ ॥
 

 
ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತ
 

ತಂತ್ರಸಾರಸಂಗ್ರಹಃ
 
B
 

(ಶ್ರೀವರದೇಂದ್ರ-ವಸುಧೇಂದ್ರ ತೀರ್ಥಟೀಕಾಸಹಿತಮ್)
 

 
ಮಂಗಳಾಚರಣಮ್
 

 
ಜಯತ್ಯಬ್ಜಭವೇಶೇಂದ್ರವಂದಿತಃ ಕಮಲಾಪತಿ: [^1
]।
ಅನಂತವಿಭವಾನಂದಶಕ್ತಿಜ್ಞಾನಾದಿಸದ್ಗುಣ: ॥1
 
=
 

ಅರ್ಥ- ಅಬ್ಬಭವಃ = ಚತುರ್ಮುಖನು, ಈಶಃ = ರುದ್ರನು, ಇಂದ್ರಃ

=
ಇಂದ್ರದೇವರು ಇವರಿಂದ, ವಂದಿತಃ : =ವಂದಿತನಾದವನು, ಅನಂತ := ಕೊನೆ-
ಯಿರದ, ವಿಭವ := ಐಶ್ವರ್ಯದ, ಶಕ್ತಿಜ್ಞಾನಾದಿ- ಸದ್ಗುಣ := ಸಾಮರ್ಥ್ಯ, ಆನಂದ
ಮೊದಲಾದ ಸದ್ಗುಣಗಳಿಂದ ಪೂರ್ಣನಾದ, ಕಮಲಾಪತಿಃ = ಲಕ್ಷ್ಮೀರಮಣನು,

ಜಯತಿ := ಉತ್ಕೃಷ್ಟನಾಗಿದ್ದಾನೆ.
 

ವಸುಧೇಂದ್ರತೀರ್ಥರ ಟೀಕಾ ಈ ಮೊದಲನೆಯ ಶ್ಲೋಕದಲ್ಲಿ ಈ ತಂತ್ರಸಾರದಲ್ಲಿ
ಹೇಳಲ್ಪಟ್ಟ ವಸ್ತು ಯಾವುದೆಂದು ವಸ್ತುನಿರ್ದೇಶ ಮಾಡಿದ್ದಾರೆ.
 

 
ಕಮಲಾಪತಿರ್ವಿಜಯತಿ- ಭಗವಂತನಿಗೆ ಯಾವಾಗಲೂ ಜಯವೇ ಇರುವುದರಿಂದ
ಜಯವಾಗಲಿ ಎಂದರೆ ಉತ್ಕೃಷ್ಟನಾಗಿದ್ದಾನೆ = ಎಲ್ಲರಿಗಿಂತಲೂ ಮಿಗಿಲಾಗಿದ್ದಾನೆ ಎಂದರ್ಥ.
 

 
ಭಗವಂತನು ಉತ್ಕೃಷ್ಟನಾಗಿದ್ದಾನೆ ಎನ್ನಲು 'ಅಬ್ಭವೇಶ- ವಂದಿತನಾಗಿರುವುದೂ
ಹಾಗೂ 'ಅನಂತವೂ ವೈಭವೋಪೇತವೂ ಆದ ಶಕ್ತಿ, ಜ್ಞಾನಾನಂದಾದಿ ಸದ್ಗುಣವಿರುವುದು
' ಎಂಬ ಎರಡು ಹೇತುಗಳನ್ನು ಹೇಳಲಾಗಿದೆ.
 

 
ಅನಂತವಿಭವ ಎಂಬಲ್ಲಿ ಅನಂತವೆಂದರೆ ಪೂರ್ಣವೆಂದರ್ಥ. ಈ ಪೂರ್ಣತ್ವವೆಂಬ
ಅನಂತತ್ವವಿಶೇಷಣವನ್ನು ವಿಭವ, ಆನಂದ, ಶಕ್ತಿ, ಜ್ಞಾನಗಳಿಗೂ ಸೇರಿಸಬೇಕು.
ಇದರಿಂದಾಗಿ ಪೂರ್ಣವಾದ ಐಶ್ವರ್ಯವುಳ್ಳವನು, ಪೂರ್ಣಾನಂದವುಳ್ಳವನು,
ಪೂರ್ಣಶಕ್ತಿ- ಯುಳ್ಳವನು ಭಗವಂತನೆಂದು ಸಿದ್ಧಿಸುತ್ತದೆ.
 

 
 
 
 
[^
1]. 'ಯಂ ಕಾಮಯೇ ತಂ ತನುಮುಗ್ರಂ ಕೃಣೋಮಿ । ತಂ ಬ್ರಹ್ಮಾಣಂ ತಮೃಷಿಂ' ಇತ್ಯಾದಿ. 'ಮಮ
ಯೋನಿಃ ಅಂಅಪ್ಸ್ವಂತಃಸಮುದ್ರೆರೇ' – ಅಂಭೃಣೀಸೂಕ್ತ.