This page has been fully proofread once and needs a second look.

108
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಭೂತೈಶ್ಚ ಪಾಯಸೇನೈವ ತಥಾ ಪದ್ಮಾಕ್ಷತೇನ ಚ ।

ಅನ್ನಾಪೂಪೇನ ಪುಷ್ಪಾನ್ನೈ:ನೈಃ ಅನ್ನಲಾಜಾಕ್ಷತೈರಪಿ ।

ಸುಕ್ತುಭಿಶ್ಚ ಕ್ರಮೇಣೈವ ದೇವಾಂತಂ ಪಾಯಸೇನ ವಾ 187
 
॥ ೮೭ ॥
 
ಅರ್ಥ - ಬೀಜಾವಾಪವಾದ ದಿನದಿಂದಾರಂಭಿಸಿ ಹತ್ತುದಿವಸಗಳ- ವರೆಗೆ ಅಲ್ಲಿ
ಭಗವಂತನಿಗೆ ನಿತ್ಯವೂ ನೈವೇದ್ಯವನ್ನರ್ಪಿಸಿ ಪೂಜಿಸಬೇಕು. ಜೊತೆಗೆ ಬ್ರಹ್ಮರುದ್ರಾದಿ
ಇತರದೇವತೆಗಳಿಗೂ, ಪಿತೃಗಳು, ಗಂಧರ್ವರು, ಯಕ್ಷರು, ಭೂತಗಳಿಗೂ
ಬಲಿಯನ್ನರ್ಪಿ-ಸಬೇಕು.
 

 
ವಿಷ್ಣುವಿಗೆ ಪಾಯಸವನ್ನೂ, ಬ್ರಹ್ಮದೇವನಿಗೆ ತುಂಡಾಗದ ಅಕ್ಕಿ ಹಾಗೂ
ತಾವರೆಯ ಹೂವನ್ನರ್ಪಿಸಬೇಕು. ರುದ್ರದೇವನಿಗೆ ಅನ್ನಸಹಿತವಾದ ಅಪೂಪವನ್ನೂ;
ದೇವತೆಗಳಿಗೆ ಪುಷ್ಪಗಳಿಂದ ಪೂಜೆ ಹಾಗೂ ಅನ್ನನೈವೇದ್ಯವನ್ನೂ ; ಪಿತೃಗಳಿಗೆ
ಸತಿಲಾನ್ನ- ವನ್ನೂ ; ಗಂಧರ್ವರಿಗೆ ಅರಳನ್ನೂ; ಯಕ್ಷರಿಗೆ ಅಕ್ಕಿಕಾಳು ಹಾಗೂ

ಅರಳನ್ನೂ, ಭೂತಗಳಿಗೆ ಹುರಿಹಿಟ್ಟು ಅಥವಾ ಎಲ್ಲರಿಗೂ ಹರಿನಿವೇದಿತ
ಪಾಯಸವನ್ನೇ ನೀಡಬಹುದು[^1].
 

 

 
ಅಧಿವಾಸನವಿಧಿ
 

 
ತತ್ರೈ
ವ ಪ್ರತಿಮಾಯಾಶ್ಚ ಕಾರಯೇದಧಿವಾಸನಮ್ ।

ಪಂಚಗವೇವ್ಯೇ ಸಪ್ತರಾತ್ರಂ ಕ್ಷಿಪ್ಪಾತ್ವಾ ಪುರುಷಸೂಕ್ತತಃ 118811
॥ ೮೮ ॥
 
ಅರ್ಥ -
 
ಅಂಕುರಾರ್ಪಣಕಾಲದಲ್ಲಿಯೇ ಪ್ರತಿಷ್ಠಿಸಬೇಕಾದ ಪ್ರತಿಮೆಯನ್ನು
 

 
[^
1]. ವಿಶೇಷಾಂಶ - ಅಂಕುರಾರೋಪಣ ಮಾಡಿದ ದಿನದಿಂದ ನೈವೇದ್ಯವನ್ನು ಅರ್ಪಿಸುತ್ತಿರಬೇಕು.
ಬಲಿಯನ್ನು ನೀಡದೇ ಮಾಡಿದ ಅಂಕುರಾರೋಪಣವು ನಿಷ್ಲ.

ಬಲ್ಯದಾನೇ ತು ನೈಷ್ಫಲ್ಯಾತ್ ಸರ್ವಥಾಂಕುರಾರೋಪಣಮ್ ।

ಬಲಿನಾ ಸಹ ಕರ್ತವ್ಯಂ ಪ್ರಯತ್ನಾತ್ ದೇಶಿಕೋತ್ತಮೈ:ಮೈಃ

ರಾತ್ರೀಶೇದ್ಭ್ಯೋ ಬಲಿಂ ದದ್ಯಾತ್ ಪಾರ್ಷದಾಂತಂ ಜಲಾನ್ವಿತಮ್ ॥
 

-
ಓಂ ವಿಷ್ಣವೇ ನಮಃ, ಓಂ ಬ್ರಹ್ಮಣೇ ನಮಃ, ಓಂ ರುದ್ರಾಯ ನಮಃ ಎಂದು ಓಂಕಾರಸಹಿತ
ದೇವತಾನಾಮಗಳಿಗೆ ನಮಃ ಸೇರಿಸಿ ಬಲಿಯನ್ನರ್ಪಿಸಬೇಕು. ವಿಷ್ಣುವಿಗೆ ಪಾಯಸದಿಂದ
ಪದ್ಮಾಕೃತ- ದಿಂದ ಬ್ರಹ್ಮಶಂಕರದೇವತೆಗಳಿಗೆ, ಪುಷ್ಪಾನ್ನದಿಂದ ಗಂಧರ್ವರಿಗೆ, ಅನ್ನಲಾಜಾಕ್ಷತೆಗಳಿಂದ
ಯಕ್ಷರುಗಳಿಗೆ, ಹುರಿಹಿಟ್ಟಿನಿಂದ ಭೂತಗಳಿಗೆ ಎಂದು ಒಂದು ಪಕ್ಷವಿದೆ.