This page has not been fully proofread.

ತೃತೀಯೋಧ್ಯಾಯಃ
 
ಬಲಿದಾನವಿಧಾನ
 
ತತ್ರ ನಿತ್ಯಂ ಬಲಿಂ ದದ್ಯಾದ್ ವಿಷ್ಣವೇ ದಶರಾತ್ರಕಮ್ ।
ಬ್ರಹ್ಮಶಂಕರಗೀರ್ವಾಣಪಿತೃಗಂಧರ್ವಯಕ್ಷಕ್ಕೆ:
 
ವಿನ್ಯಸ್ಯ ಶಾಲಿಶ್ಯಾಮಾನಿ ಪ್ರಿಯಂಗುಫಲಸರ್ಷಪಾನ್ ।
ಮುದ್ದಮಾಷ್ ಶಿಂಖಿಕುಲಿತಂ ಚಾಢಕೀಂ ಯವಸಂ ತಥಾ ॥
 
118611
 
ಧಾನ್ಯಗಳು ಏಳು ಎಂದಿದ್ದರೂ ಹತ್ತು, ಹನ್ನೆರಡು ಧಾನ್ಯಗಳನ್ನು ತಂತ್ರಗಳಲ್ಲಿ ತಿಳಿಸಲಾಗಿದೆ.
ಗೌತಮೀ ತಂತ್ರವು(೬/೪೧) ಹತ್ತು ಧಾನ್ಯಗಳನ್ನು ಹೇಳಿದೆ.
 
107
 
ಬೀಜಾನಾಂ ದೈವತಂ ಸೋಮಃ ಸ ರಾತ್ರಿ ಕಾಂತಿಮಾನ್ ಯತಃ ।
ತಸ್ಮಾದಾತೃತ್ಯ ಬೀಜಾನಿ ನಿಶಾಯಾಮೇವ ವಾಪಯೇತ್ ॥
 
ಅಂಕುರಾರೋಪಣವು ರಾತ್ರಿಯಲ್ಲಿ ನಡೆದರೆ ಉತ್ತಮ. ರಾತ್ರಿಯ ಹಾಗೂ ವನಸ್ಪತಿಯ
ದೇವತೆಯಾದ ಚಂದ್ರನ ಅನುಗ್ರಹವು ದೊರಕಿ ವಿಶೇಷಫಲವುಂಟಾಗುವುದು.
 
ಧಾನ್ಯಗಳಲ್ಲಿ ದೇವತಾವಾಹನೆ -
 
ಯವದಲ್ಲಿ ಬ್ರಹ್ಮದೇವರು; ಸಾಸಿವೆಯಲ್ಲಿ ರುದ್ರದೇವರು; ಮುದ್ದದಲ್ಲಿ ಶ್ರೀಹರಿ; ನಿಷ್ಟಾವದಲ್ಲಿ
ವಾಯುದೇವ; ಪ್ರಿಯಂಗುವಿನಲ್ಲಿ ಸ್ಕಂದ; ಮಾಷದಲ್ಲಿ ಇಂದ್ರದೇವ; ಕುಲಿತದಲ್ಲಿ ಅಗ್ನಿ; ಭತ್ತದಲ್ಲಿ
ಸೂರ್ಯ; ಎಳ್ಳಿನಲ್ಲಿ ಯಮದೇವ; ರಾಜಮಾಷದಲ್ಲಿ ವರುಣ; ತೊಗರಿಯಲ್ಲಿ ಲಕ್ಷ್ಮೀದೇವಿ;
ಸಾಮೆಯಲ್ಲಿ ಚಂದ್ರರನ್ನು ಆವಾಹಿಸಬೇಕು.
 
ಯವಸರ್ಷಪಮುದ್ದೇಷು ಬ್ರಹ್ಮಾರುದ್ರೋ ಹರಿಃ ಕ್ರಮಾತ್ ।
ವಾಯುಃ ಪೂಜ್ಯಸ್ತು ನಿಷ್ಟಾವೇ, ಸ್ಕಂದಶ್ಚಿವ ಪ್ರಿಯಂಗವೇ ॥
ಮಾವೇಷ್ಟಿಂದ್ರಃ ಕುಲಿತೇಽಗ್ನಿ: ಶಾಲಿಷ್ಟರ್ಕೊ ಯಮಸ್ತಿಲೇ।
 
ವರುಣೋ ರಾಜಮಾಷೇ ಶ್ರೀರಾಢಾಂ ಶ್ಯಾಮಗಃ ಶಶೀ ॥ ವಿಷ್ಣುಸಂಹಿತಾ 15/42
ಹೀಗೆ ಆವಾಹಿಸಿ ಮೂಲಮಂತ್ರಜಪಿಸಿ, 'ಹಿರಣ್ಯವರ್ಣಾಂ' ಎಂಬುದರಿಂದ ನೀರನ್ನು ಪ್ರೋಕ್ಷಿಸಿ,
'ಬ್ರಹ್ಮಾದ್ಯಾವಾಹಿತದೇವತಾಭ್ ನಮಃ' ಎಂದು ಷೋಡಶೋಪಚಾರೆಯನ್ನು ಮಾಡಬೇಕು.
ನಂತರ ಪುನಃ ಹುತ್ತದ ಮಣ್ಣು ಬೆರಣಿ ಪುಡಿಗಳನ್ನು ಅವುಗಳ ಮೇಲೆ ಹಾಕಿ ಎರಡೂ ಕಾಲದಲ್ಲಿ
ನೀರನ್ನು ಹಾಕುತ್ತಿರಬೇಕು. ನಂತರ ವಸ್ತ್ರದಿಂದ ಅದನ್ನು ಮುಚ್ಚಬೇಕು. ಹೀಗೆ ಏಳು ದಿನ,
ಒಂಭತ್ತು ದಿನಗಳ ವರೆಗೆ ಪೂಜಿಸಬೇಕು. ಕಡೇ ಪಕ್ಷ ಮೂರುದಿವಸವಾದರೂ ಇರಬೇಕು.
ಸಸ್ಯ ವೃದ್ಧಿಯನ್ನು ನೋಡಿ ಕಾರ್ಯವೃದ್ಧಿಯನ್ನು ತಿಳಿಯಬೇಕು. ನೇರವಾಗಿ ಬಂದಿದ್ದರೆ
ಕಾರ್ಯಸಿದ್ಧಿ.
 
ಪ್ರರೂಡೈಃ ಅಂಕುರೈಃ ಕರ್ತು: ನಿರ್ದಿಶೇಚ್ಚ ಶುಭಾಶುಭಾ ॥ ಗೌತಮೀತಂತ್ರ