This page has been fully proofread once and needs a second look.

ತೃತೀಯೋsಧ್ಯಾಯಃ
 
ತಯಾರಿಸಬೇಕು. ನಾಲ್ಕು ಕೋಣೆಗಳಿರುವ ಮೂರು ಮಂಡಲ- ಗಳನ್ನು ಆ
ಮಂಟಪದ ಮಧ್ಯದಲ್ಲಿ ರಚಿಸಬೇಕು. ಈ ಮಂಡಲ ಪೂರ್ವದಿಂದ ಪಶ್ಚಿಮಕ್ಕೆ
ಆಯತಾಕಾರವಾಗಿರಬೇಕು. ಈ ಮಂಡಲದ ವಿಸ್ತಾರ ಒಂದು ಮೊಳ.
 

 
ಈ ಹನ್ನೆರಡು ಮನೆಗಳಲ್ಲಿ ಪಾಲಿಕೆಗಳು, ಪಂಚಮುಖಿಗಳು, ಶರಾವಗಳೆಂಬ
ಹನ್ನೆರಡು ಪಾತ್ರೆಗಳನ್ನಿಡಬೇಕು.[^1] ಇವುಗಳಲ್ಲಿ ಪಾಲಿಕೆಗಳು ಹನ್ನೆರಡು
ಅಂಗುಲವಿರಬೇಕು. ಪಂಚಮುಖಿಗಳು ಹದಿನೆಂಟು ಅಂಗುಲ ಎತ್ತರವಿರಬೇಕು.
ಶರಾವಗಳು ಹನ್ನೆರಡು ಅಂಗುಲ ಎತ್ತರ. ನಾಲ್ಕು ನಾಲ್ಕು ಪಾತ್ರೆಗಳನ್ನು ಪೂರ್ವಾದಿ

ಕ್ರಮದಲ್ಲಿ ಪೂರ್ವದಿಕ್ಕು - ಮಧ್ಯ - ಪಶ್ಚಿಮದಿಕ್ಕುಗಳ ಮಂಡಲದಲ್ಲಿ ಸ್ಥಾಪಿಸಬೇಕು.
 

 
[^
1]. ಪಾಲಿಕೆ - ಕೆಳಗೆ ಉಮ್ಮತ್ತಿ ಹೂವಿನಂತಿರುವ, ಮೇಲೆ ಕಮಲದಂತೆ ಅಗಲವಾಗಿರುವ, ಕಂಠದ
ವಿಸ್ತಾರ ಸುತ್ತಲೂ ಏಳಂಗುಲವಿರುವ ಮಡಿಕೆಯಂತಹ ವಸ್ತುವನ್ನೇ (ಪಾತ್ರೆಯನ್ನೇ) ಪಾಲಿಕೆ
ಎನ್ನುವರು.
 
105
 
ಭವೇತ್ ।
 

ಮಧ್ಯಖಿಲಾದುಪರ್ಯಂಭೋಜವದ್
ಭವೇತ್ ।
ಅಧಮ್ಮೋನಶ್ಚೋನ್ಮತ್ತಕುಸುಮಸಮಂ ಚೇತ್ ಪಾಲಿಕಾಂ ವಿದುಃ ॥
 

ಪಂಚಮುಖೀ ನಾಲ್ಕಂಗುಲವಿಸ್ತಾರವುಳ್ಳ ನಾಲ್ಕು ಮುಖಗಳುಳ್ಳ, ಮೇಲೆ ಒಂದು
ಮುಖವುಳ್ಳ ಘಟಾಕೃತಿಯೇ ಪಂಚಮುಖೀ,
 
.
ಚತುರಂಗುಲವಿಸ್ತಾರಂ ಕಲ್ಪಯೇಚ್ಚ ಚತುರ್ಮುಖಮ್ ।

ಘಟಕಾಲಕ್ಷಣಂ ತೈತ್ವೇವಂ ಪಂಚವಾವಕ್ತ್ರಾ ಘಟಾಕೃತೀಃ ॥

ಪಾಲಿಕೆಗಳು ಒಡೆಯಬಾರದು. ಹೀಗಾದಲ್ಲಿ ಅನಿಷ್ಟವು.
 

ಅಯುಗ್ಯಾಃಮಾಃ ಪಾಲಿಕಾ ಸ್ಯುಃ ಪಾಲಿಕಾದ್ಯಾಃ ತೇಷಾಂ ಭೇದಂ ಕದಾಚನ ।

ನ ಕುರ್ಯಾದ್ ಯದಿ ಕುರ್ವಿವೀತ ದೋಷಾಯ ಮಹತೋ ಭವೇತ್ ॥
 

ಪಾಲಿಕೆ-ಪಂಚಮುಖೀ-ಶರಾವ ಈ ಮೂರೂ ಕ್ರಮವಾಗಿ ಹನ್ನೆರಡು - ಹದಿನಾರು
- ಇಪ್ಪತ್ತನಾಲ್ಕು ಅಂಗುಲ ಎತ್ತರ- ವಿರಬೇಕು. ಈ ಮೂರರಲ್ಲಿ ಬ್ರಹ್ಮ-ವಿಷ್ಣು-ಮಹೇಶ್ವರರನ್ನು

ಆವಾಹಿಸಿ ಪೂಜಿಸಬೇಕು.
 

ದ್ವಿಷಡ್ ದ್ವಿರಷ್ಟಚತುರ್ವಿಂಶದುಚ್ಛ್ರಿತಾನಿ ಯಥಾಕ್ರಮಮ್ ।

ನಾರಾಯಣಮಹೇಶಾನಬ್ರಹ್ಮರೂಪಾಣಿ ತಾನ್ಯಪಿ
 

ಕೆಲವು ತಂತ್ರಗಳಲ್ಲಿ ಪಾಲಿಕೆ ಹದಿನಾರು, ಪಂಚಮುಖೀ ೧೨, ಶರಾವ ೮ಅಂಗುಲವಿರಬೇಕೆಂದು
 
ಹೇಳಿದೆ.
 

ಏವಮುಚ್ಚಾಯ ಉನ್ನೇಯಃ ಷೋಡಶ-ದ್ವಾದಶಾಷ್ಟ್ರಭಿಃ ।