This page has not been fully proofread.

ತೃತೀಯೋSಧ್ಯಾಯಃ
 
ದೇವಾಲಯಕ್ಕೆ ಯೋಗ್ಯಸ್ಥಳ
 
ವೇದಮಂಗಲಘೋಷೇಣ ವಾದ್ಯ: ತತ್ ಪ್ರತಿಮಾಂ ಹರೇತ್ ।
ಪ್ರಾಗುದಕ್ ಪ್ರವಣೇ ದೇಶೇ ಕುರ್ಯಾದ್ ದೇವಾಲಯಂ ಸುಧೀಃ ॥51I
 
ಅರ್ಥ.
 
ವಿಧಿವತ್ತಾಗಿ ಪ್ರತಿಮೆಯು ತಯಾರಾದ ಮೇಲೆ ಮಂಗಳವಾದ್ಯ,
ಶಂಖ, ಭೇರಿ, ಮೃದಂಗ, ವೇದಗಳ ಧ್ವನಿಯನ್ನು ಮಾಡುತ್ತಾ (ಮನೆಗೆ ಊರಿಗೆ)
ಆ ಪ್ರತಿಮೆಯನ್ನು ತರಬೇಕು. ಮಳೆಯು ಬಿದ್ದಾಗ ನೀರು ಪೂರ್ವ, ಉತ್ತರ,
ಈಶಾನ್ಯದಿಕ್ಕಿಗೆ ಹರಿಯುವ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಬೇಕು.
 
-
 
ರಾಮಾವೃತೇ ದಕ್ಷಿಣತಃ ಪಶ್ಚಾದ್ ಗಿರ್ಯಗ್ರ ಏವ ವ।
ಮಧ್ಯೆ ವಾ ಗ್ರಾಮಪುರಯೋಃ ವಿಶಾಲೇ ಸುಶುಚೌ ತಥಾ ॥52॥
 
ಐಶಾನೀಂ ದಿಶಮೇಕಾಂ ತು ವಿನೋದಕವಿವರ್ಜಿತೇ ।
ಜಲಾಶಯಸ್ಯ ಮಧ್ಯೆ ವಾ ಶಿಲಾವೃಕ್ಷವಿವರ್ಜಿತೇ 115311
 
93
 
ಸ್ಮಶಾನಾದಿದೇಶಾನಾಂ ವಿದೂರೇ ಸುಮನೋಹರೇ।
 
ಕಿಷ್ಟು ದ್ವಾದಶತೋಽನೂನಂ ಕುರ್ಯಾದೇವಾಲಯಸ್ಥಲಮ್ II541
 
ದ್ವಿಗುಣಂ ಚತುರ್ಗುಣಂ ವಾಪಿ ಶತಕಿಷ್ಟು ಪ್ರಮಾಣಕಮ್ ।
 
ಅರ್ಥ - ದೇವಾಲಯವನ್ನು ಉದ್ಯಾನವನಗಳಿಂದ ಆವೃತವಾಗಿರುವ
ಪ್ರದೇಶದಲ್ಲಿ ದರ್ಭೆ, ಗರಿಕೆ, ತುಲಸೀ ಮೊದಲಾದವು ಸಮೃದ್ಧವಾಗಿರುವ ದೇಶ-
ದಲ್ಲಾಗಲೀ ಪರ್ವತದ ಅಗ್ರಭಾಗದಲ್ಲಾಗಲೀ, ಪರ್ವತದ ಬಲಭಾಗದಲ್ಲಾಗಲೀ,
ಗ್ರಾಮ ಅಥವಾ ನಗರಮಧ್ಯದೇಶದಲ್ಲಾಗಲೀ ದೇವಾಲಯವನ್ನು ನಿರ್ಮಿಸಬೇಕು.
ದೇವಾಲಯದ ಪ್ರದೇಶ ಶುದ್ಧವಾಗಿರಬೇಕು. ಹಾಗೂ ಯಾವುದೇ ನೀರು
 
1. ವಿಶೇಷಾಂಶ - ಮಳೆಯ ನೀರು ಹರಿಯುವ ದಿಕ್ಕನ್ನು ನೋಡಿ ದೇವಾಲಯ ನಿರ್ಮಿಸಬೇಕು.
ನೀರು ಪೂರ್ವಕ್ಕೆ ಹರಿದರೆ 'ಪ್ರಾಚೀಪ್ರವಣ'ವೆಂದೂ, ಉತ್ತರದಿಕ್ಕಿಗೆ ಹರಿದರೆ 'ಉದೀಚೀ
ಪ್ರವಣ'ವೆಂದೂ, ಈಶಾನ್ಯಕ್ಕೆ ಹರಿದರೆ 'ಪ್ರಾಗುದಕ್ ಪ್ರವಣ'ವೆಂದೂ ಹೆಸರು. ಪ್ರಾಚೀ,ಈಶಾನ
ಪ್ರವಣದಲ್ಲಿ ದೇವಾಲಯವು ಸರ್ವತೋSಭಿವೃದ್ಧಿಯನ್ನುಂಟು ಮಾಡುತ್ತದೆ.
 
ಆನಯೇಚ್ಛಂಖನಿರ್ಘೋಪೈಃ ಗೀತಮಂಗಲನಿಃಸ್ವತೈಃ ।
ಋಗ್ಯಜುಃಸಾಮಶಬ್ದ ಪ್ರತಿಮಾಂ ಕಾರಿತಾಂ ಶುಭಾಮ್ !!