This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ನಿಲ್ಲಬಾರದು. ಜಲಾಶಯದ ಮಧ್ಯದಲ್ಲಿ ದೇವಾಲಯವು ವಿಶೇಷಸನ್ನಿಧಾನವಿರು-
ವಂತಾಗುತ್ತದೆ. ದೇವಾಲಯಕ್ಕೆ ಗಿಡಮರಗಳ ತಡೆಯಾಗಲೀ ಕಲ್ಲುಗಳ ತಡೆ-
ಯಾಗಲೀ ಇರಬಾರದು. ದೇವಾಲಯವು ಸ್ಮಶಾನಕ್ಕಿಂತ ದೂರವಿರಬೇಕು. ಹಾಗೂ
ಜನಾಕರ್ಷಕವಾಗಿದ್ದು ಹನ್ನೆರಡರಿಂದ ನೂರು ಕಿಷ್ಟು ಪ್ರದೇಶದಷ್ಟು
ವಿಶಾಲವಾಗಿರಬಹುದು. ಕಿಷ್ಟು ಎಂದರೆ ಎರಡು ಮೊಳ ಅಥವಾ 42 ಅಂಗುಲಗಳು.
 
ಭೂಶೋಧನೆ; ದೇವಾಲಯನಿರ್ಮಾಣ ರೀತಿ
 
ಕೃತ್ವಾ ಭೂಶೋಧನಂ ಸಮ್ಯಕ್ ಸಾರ್ಧಪುಂಮಾನತಧಃ ॥55॥
 
1. ಉಪವನ, ಸರೋವರ, ವೃಕ್ಷಾದಿಗಳಿಂದ ಆವೃತವಾಗಿದ್ದು ನೆರಳಿರುವ, ನದೀತೀರ, ಝರಿ
ಮೊದಲಾದ ನೀರಿನ ತಾಣಗಳಲ್ಲಿ ಕಟ್ಟಿದ ದೇವಾಲಯಗಳಲ್ಲಿ ದೇವತೆಗಳು ಸನ್ನಿಹಿತರಾಗಿ-
ರುತ್ತಾರೆ.
 
94
 
-
 
ಪರ್ವತಾಗ್ರದೇವಾಲಯಕ್ಕೆ ತಿರುಮಲ, ಸಿಂಹಾದ್ರಿ, ಕರಿಗಿರಿ, ಶ್ರೀಶೈಲದಲ್ಲಿರುವ
 
ದೇವಾಲಯಗಳು ಉದಾಹರಣೆಗಳು.
 
ಸುತ್ತಲೂ ನೀರಿರುವ ದೇವಾಯಕ್ಕೆ - ಶ್ರೀರಂಗಾದಿ ತ್ರಿರಂಗಗಳು ಉದಾಹರಣೆಗಳು.
ಸರೋವರವಿರುವ ದೇವಾಲಯಕ್ಕೆ - ಪದ್ಮಸರೋವರ, ನೃಸಿಂಹತೀರ್ಥ, ಮಧ್ವಸರೋ-
ವರವಿರುವ ಪ್ರದೇಶಗಳಲ್ಲಿರುವ ದೇವಾಲಯಗಳು.
 
ನದಿಯ ತೀರದಲ್ಲಿರುವ ದೇವಾಲಯಗಳಿಗೆ
ತೀರಗಳಲ್ಲಿರುವ ಸುಮಾರು ದೇವಾಲಯಗಳು; ನವವೃಂದಾವನವಾದರೋ
ನೀರಿರುವ ತಾಣವಾಗಿದೆ. ಝರಿ ಬೀಳುವ ಕಪಿಲತೀರ್ಥಕ್ಷೇತ್ರವು(ತಿರುಪತಿ) ಪ್ರಸಿದ್ಧವಾಗಿದೆ.
 
ಕಾವೇರಿ, ತುಂಗಭದ್ರಾದಿ ನದಿಗಳ
ಸುತ್ತಲೂ
 
ಸಲಿಲೋದ್ಯಾನಯುಕ್ರೇಷು ಕೃತೇಷು
 
ಅಕೃತೇಷು ಸರಸ್ಸು ನಲಿನಾಚ್ಛನ್ನನಿರಸ್ತ ರವಿರಶಿಷು ।
ವನೋಪಾಂತನದೀಶೈಲನಿರ್ಝರೋಪಾಂತಭೂಮಿಷು
ಸ್ಥಾನೇಷ್ಟೇತೇಷು ಸಾನ್ನಿಧ್ಯಮುಪಗಚ್ಛಂತಿ ದೇವತಾಃ ॥
 
-
 
ಕಿಷ್ಟು – ಎಂದರೆ ಎರಡು ರತ್ನಗಳು, ರತ್ನಿ ಎಂದರೆ ಇಪ್ಪತ್ತೊಂದು ಅಂಗುಲ. ಎರಡು ರತ್ನ
ಎಂದರೆ 42 ಅಂಗುಲ. - ಕಿಷ್ಕು: ಸ್ಮೃತೋ ದ್ವಿರತ್ನಿಸ್ತು ದ್ವಿಚತ್ವಾರಿಂಶದಂಗುಲಃ ।
 
ಸುಮಾರು ಎರಡು ಮೊಳ ಕಿಷ್ಕು ಎನಿಸುತ್ತದೆ. - ಹಸ್ತದ್ವಯಂ ಕಿಚ್ಚು: (ವ.ಟೀ.)
 
-
 
೪೨೫೧೨ = ೫೦೪ ಅಂಗುಲವಾಗಲೀ, ದ್ವಿಗುಣವೆಂದರೆ ೨೦೧೬ ಅಂಗುಲಗಳು, ಅಥವಾ
ನೂರು ಕಿಷ್ಟುಗಳಾಗಲೀ ೪೨೦೦ ಅಂಗುಲಗಳಷ್ಟು ಹರವು ಉಳ್ಳ ಪ್ರದೇಶದಲ್ಲಿ
 
ನಿರ್ಮಿತವಾಗಿರಬೇಕು. ಕಡಿಮೆ ಎಂದರೆ ೫೦೪ ಅಂಗುಲಗಳಿರಬೇಕು.