This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅರ್ಥ - ಹೆಗಲಿನಲ್ಲಿ ಹೊದೆಯುವ ಉತ್ತರೀಯವಿರಬೇಕು. ಹಸ್ತ- ಗಳಲ್ಲಿ
ಚಕ್ರಾದಿ ಆಯುಧಗಳನ್ನು ಕೆತ್ತಿರಬೇಕು.
ಕೆತ್ತಿರಬೇಕು.
ದಂತಗಳಾದರೋ ಉಬ್ಬಿರದಂತೆ,
 
ಎಡಬಿಡದಂತೆ ಇದ್ದು ಮಂದಸ್ಮಿತ ಬೀರುವಂತಿರ- ಬೇಕು. ಪ್ರತಿಮೆಯ ದೃಷ್ಟಿ
ಮೇಲೋ ಕೆಳಗೋ ನೋಡುತ್ತಿರದೆ, ವಕ್ರವಾಗಿ ಪಕ್ಕಕ್ಕೆ ನೋಡುತ್ತಿರದೆ ನೇರವಾಗಿ
ನೋಡುತ್ತಿರಬೇಕು. ಹಾಗೂ ಪ್ರತಿಮೆಯು ಸುಂದರವಾಗಿರಬೇಕು.
 
90
 

 
ಪ್ರತಿಮಾನಿರ್ಮಾಣವಿಧಿ
 

 
ಪ್ರತಿಮಾರ್ಥಂ ವ್ರಜನ್ ಪಂಚಧ್ವನಿಭಿಃ ಮಂಗಲೈರ್ಯುತಃ ।

ಗತ್ವಾ ಶುಚಿಸ್ಥಲಂ ತತ್ರ ಶಿಲಾಂ ಚೈವ ಪರೀಕ್ಷಯೇತ್
 
44
 
॥ ೪೪ ॥
 
ಅರ್ಥ
 
- ಪ್ರತಿಮೆಯನ್ನು ತಯಾರಿಸಲು ಶಿಲೆಯನ್ನು ತರಲು ಹೊರಟಾಗ
ನಗಾರಿ, ಮದ್ದಲೆ, ವೀಣೆ, ತಾಳ, ಕೊಳಲು ಈ ಪಂಚವಾದ್ಯ ಮಂಗಳಧ್ವನಿ(?)
ಯೊಂದಿಗೆ (ಮಂಗಳದ್ರವ್ಯಗಳೊಂ- ದಿಗೆ) ಶಿಲೆಯ ಸ್ಥಳಕ್ಕೆ ಹೋಗಬೇಕು. ಅಲ್ಲಿರುವ
ಶಿಲೆಯನ್ನು ಪರೀಕ್ಷಿಸಬೇಕು.
 
-
 

 
ಶಿಲೆಯ ಪರೀಕ್ಷೆ
 

 
ಧ್ವನಿಭೇದೇನ ವಿಜ್ಞಾಯ ಶಿಲಾಂ ಗರ್ಭವತೀಂ ತ್ಯಜೇತ್ ।

ಮೂಲಮಂತ್ರಂ ಜಪನ್ ವಿಷ್ಣುಂ ಧ್ಯಾಯಂಸ್ತಿಷ್ಠೇದುಪೋಷಿತಃ ॥45 ೪೫
 

 
ವೃಕ್ಷಪ್ರತಿಮೆಯಲ್ಲಿ ವಿಶೇಷ
 

 
ವಾರ್ಕ್ಷಿಷೀ ಚೇದ್ ಯಜ್ಞವೃಕ್ಷಸ್ಯ ಸಾರೇಣೈವ ತು ಕಾರಯೇತ್ ।
 

 
ಅರ್ಥ - ಧ್ವನಿಯ ವ್ಯತ್ಯಾಸದಿಂದ ಕಪ್ಪೆ ಇರುವ ಗರ್ಭವತೀ ಶಿಲೆ ಹಾಗೂ
ಟೊಳ್ಳಾದ ಶಿಲೆಯನ್ನು ತಿಳಿಯಬೇಕು. ಅಂತಹ ಶಿಲೆ- ಯನ್ನು ಬಿಟ್ಟು, ಗಟ್ಟಿಯಾದ
ಶಿಲೆಯನ್ನು ಆರಿಸಬೇಕು. 'ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರ-
ವನ್ನು ಜಪಿ- ಸುತ್ತಾ, ವಿಷ್ಣುವನ್ನೇ ಧ್ಯಾನಮಾಡುತ್ತಾ, ಶಿಲೆಯ ಸಮೀಪ ಉಪವಾಸ-
ದಿಂದಿರಬೇಕು. ಮರದ ಪ್ರತಿಮೆಯನ್ನು ಮಾಡುವುದಾ- ದರೆ ದೇವದಾರು, ಬಿಲ್ವ,
ಶಮೀ, ಮಧೂಕ, ಅಶ್ವತ್ಥಾದಿ ಯಜೋಜ್ಞೋ- ಪಯೋಗೀ ವೃಕ್ಷಗಳಿಂದಲೇ ಮಾಡಬೇಕು.