This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅರ್ಥ - ಹೆಗಲಿನಲ್ಲಿ ಹೊದೆಯುವ ಉತ್ತರೀಯವಿರಬೇಕು. ಹಸ್ತಗಳಲ್ಲಿ
ಚಕ್ರಾದಿ ಆಯುಧಗಳನ್ನು ಕೆತ್ತಿರಬೇಕು.
ಕೆತ್ತಿರಬೇಕು. ದಂತಗಳಾದರೋ ಉಬ್ಬಿರದಂತೆ,
 
ಎಡಬಿಡದಂತೆ ಇದ್ದು ಮಂದಸ್ಮಿತ ಬೀರುವಂತಿರಬೇಕು. ಪ್ರತಿಮೆಯ ದೃಷ್ಟಿ
ಮೇಲೋ ಕೆಳಗೋ ನೋಡುತ್ತಿರದೆ, ವಕ್ರವಾಗಿ ಪಕ್ಕಕ್ಕೆ ನೋಡುತ್ತಿರದೆ ನೇರವಾಗಿ
ನೋಡುತ್ತಿರಬೇಕು. ಹಾಗೂ ಪ್ರತಿಮೆಯು ಸುಂದರವಾಗಿರಬೇಕು.
 
90
 
ಪ್ರತಿಮಾನಿರ್ಮಾಣವಿಧಿ
 
ಪ್ರತಿಮಾರ್ಥಂ ವ್ರಜನ್ ಪಂಚಧ್ವನಿಭಿಃ ಮಂಗಲೈರ್ಯುತಃ ।
ಗತ್ವಾ ಶುಚಿಸ್ಥಲಂ ತತ್ರ ಶಿಲಾಂ ಚೈವ ಪರೀಕ್ಷಯೇತ್
 
44
 
ಅರ್ಥ
 
ಪ್ರತಿಮೆಯನ್ನು ತಯಾರಿಸಲು ಶಿಲೆಯನ್ನು ತರಲು ಹೊರಟಾಗ
ನಗಾರಿ, ಮದ್ದಲೆ, ವೀಣೆ, ತಾಳ, ಕೊಳಲು ಈ ಪಂಚವಾದ್ಯ ಮಂಗಳಧ್ವನಿ(?)
ಯೊಂದಿಗೆ (ಮಂಗಳದ್ರವ್ಯಗಳೊಂದಿಗೆ) ಶಿಲೆಯ ಸ್ಥಳಕ್ಕೆ ಹೋಗಬೇಕು. ಅಲ್ಲಿರುವ
ಶಿಲೆಯನ್ನು ಪರೀಕ್ಷಿಸಬೇಕು.
 
-
 
ಶಿಲೆಯ ಪರೀಕ್ಷೆ
 
ಧ್ವನಿಭೇದೇನ ವಿಜ್ಞಾಯ ಶಿಲಾಂ ಗರ್ಭವತೀಂ ತ್ಯಜೇತ್ ।
ಮೂಲಮಂತ್ರಂ ಜಪನ್ ವಿಷ್ಣುಂ ಧ್ಯಾಯಂಸ್ತಿದುಪೋಷಿತಃ ॥45॥
 
ವೃಕ್ಷಪ್ರತಿಮೆಯಲ್ಲಿ ವಿಶೇಷ
 
ವಾರ್ಕ್ಷಿ ಚೇದ್ ಯಜ್ಞವೃಕ್ಷಸ್ಯ ಸಾರೇಣೈವ ತು ಕಾರಯೇತ್ ।
 
ಅರ್ಥ - ಧ್ವನಿಯ ವ್ಯತ್ಯಾಸದಿಂದ ಕಪ್ಪೆ ಇರುವ ಗರ್ಭವತೀ ಶಿಲೆ ಹಾಗೂ
ಟೊಳ್ಳಾದ ಶಿಲೆಯನ್ನು ತಿಳಿಯಬೇಕು. ಅಂತಹ ಶಿಲೆಯನ್ನು ಬಿಟ್ಟು, ಗಟ್ಟಿಯಾದ
ಶಿಲೆಯನ್ನು ಆರಿಸಬೇಕು. 'ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರ-
ವನ್ನು ಜಪಿಸುತ್ತಾ, ವಿಷ್ಣುವನ್ನೇ ಧ್ಯಾನಮಾಡುತ್ತಾ, ಶಿಲೆಯ ಸಮೀಪ ಉಪವಾಸ-
ದಿಂದಿರಬೇಕು. ಮರದ ಪ್ರತಿಮೆಯನ್ನು ಮಾಡುವುದಾದರೆ ದೇವದಾರು, ಬಿಲ್ವ,
ಶಮೀ, ಮಧೂಕ, ಅಶ್ವತ್ಥಾದಿ ಯಜೋಪಯೋಗೀ ವೃಕ್ಷಗಳಿಂದಲೇ ಮಾಡಬೇಕು.