This page does not need to be proofread.

ಮುನ್ನುಡಿ

ತಂತ್ರಶಾಸ್ತ್ರವನ್ನು ತಿಳಿಯದ ಯಾವನೊಬ್ಬನೂ ತತ್ವಜ್ಞಾನವನ್ನು ಪಡೆಯಲಾರ.

ತಂತ್ರಶಾಸ್ತ್ರದಲ್ಲಿ ಬಿತ್ತರಿಸಿದ ಯಜ್ಞಯಾಗಾದಿಗಳಾಗಲೀ,

ಯಾವುದೋ ಒಂದು ತತ್ವವನ್ನು ತಿಳಿಯಲೆಂದೇ ಆಗಿದೆ ಎಂಬುದನ್ನು ತಂತ್ರಶಾಸ್ತ್ರ

ಅಧ್ಯಯನಶೀಲರು ತಿಳಿಯದೇ ಇರಲಾರರು.
 

 
ಮಂತ್ರತಂತ್ರಗಳಾಗಲೀ
 

 

 

 
ಶ್ರೀಮದಾಚಾರ್ಯರು ತಮ್ಮ ಯಾವುದೇ ತಾಂತ್ರಿಕವಿಷಯವನ್ನು ತಿಳಿಸುವಾಗ

ಪ್ರಧಾನತತ್ವವಾದ ಭಗವತತ್ವವನ್ನು ಹೇಳದೇ ಬಿಟ್ಟಿಲ್ಲ. ತತ್ವಗಳಾಗಲೀ, ತತ್ವ-

ದೇವತೆಗಳಾಗಲೀ, ಪೂಜೆಯಾಗಲೀ, ಪೂಜಾವಿಧಾನವಾಗಲೀ, ಹೋಮಾದಿಗಳಾಗಲೀ,

ಮಂತ್ರ ಜಪವಾಗಲೀ ಭಗವಂತನ ಚಿಂತನೆಯಿಲ್ಲದೇ ಅವರಿಂದ ನಿರೂಪಿತಗಳಾಗಿಲ್ಲ.

ಯಾವ ದೇವತೆಯನ್ನಾಗಲೀ ಕುರಿತು ಯಜ್ಞಯಾಗಾದಿಗಳನ್ನು ಮಾಡಲಿ ಆ ಕರ್ಮವು

ಆಯಾಯ ದೇವತೆಗಳಲ್ಲಿದ್ದು ಶಕ್ತಿ ನೀಡುವ 'ಮಹಾಶಕ್ತಿ' ಎನಿಸುವ ಭಗವಂತನದೇ

ಎಂದು ತಿಳಿಯಿರಿ ಎಂದು ಅಲ್ಲಲ್ಲಿ ತಿಳಿಸುತ್ತಾರೆ.
 

 
-
 

 
ಮಂತ್ರ ಜಪಾದಿಗಳಲ್ಲೂ ಭಗವಂತನನ್ನು ಮರೆಯಲಾಗದು ವಿಮುಖ ನ

ಹರೇಃ ಯದಿ(೪/೯೯); ತ್ರಾಣಂ ಚ ಕುರುತೇ. ಈ ಅಂಶವನ್ನು ಮಂತ್ರವಿಧಿಯನ್ನು

ತಿಳಿಸುವ ನಾಲ್ಕನೆಯ ಅಧ್ಯಾಯದಲ್ಲಿ ಕಾಣಬಹುದಾಗಿದೆ. ಈ ಭಾಗದಲ್ಲಿರುವ

'ಸರ್ವವ್ಯಾಧಿವಿನಾಶನಂ', 'ಕಾಮದೋ ಭಯನಾಶನಃ', 'ಸಂಸ್ಕೃತಿರ್ವ್ಯಾಧಿನಾಶನಃ',

'ಸರ್ವೆ ರೋಗಾಃ ಪ್ರಣಶ್ಯಂತಿ' ಇತ್ಯಾದಿವಾಕ್ಯಗಳು ಈ ತಂತ್ರಶಾಸ್ತ್ರದಲ್ಲಿ ಹೇಳಿರುವ

ಯಜ್ಞಯಾಗಾದಿಗಳನ್ನೂ, ಮಂತ್ರಗಳ ಜಪಹೋಮಾದಿಗಳನ್ನೂ ಮಾಡುವವರು ಸಕಲ

ಸಂಸಾರಭಯದಿಂದ ನಿವೃತ್ತರಾಗಿ ಸುಖಿಸುವರು ಎಂದು ತಿಳಿಸುತ್ತವೆ. ಇದರಿಂದಾಗಿ

ತಂತ್ರಪದದ ಅರ್ಥವಾದ 'ತ್ರಾಣಂ ಚ ಕುರುತೇ' ಎಂಬ ಅಂಶ ಈ ತಂತ್ರಸಾರ-

ಸಂಗ್ರಹದಲ್ಲಿ ಹೇಗೆ ಮೂಡಿದೆ ಎಂದು ತಿಳಿಯುತ್ತದೆ.
 

 
ಈ ರೀತಿಯಾಗಿ 'ತಂತ್ರ'ದ ನಿಜ ಅರ್ಥವನ್ನು ಪೂರ್ಣರೀತಿಯಲ್ಲಿ ನಿರೂಪಿಸಿ

ಅನುಗ್ರಹಿಸಿದ ಶ್ರೀಮದಾಚಾರ್ಯರು ಸಕಲ ಆಕಜನರಿಂದ ಮಾನ್ಯರಾಗಿರುವರು.
 

 
ಈ ಗ್ರಂಥಕ್ಕೆ ಪೇಜಾವರಮಠಾಧೀಶರಾದ ಪರಮಪೂಜ್ಯ ಶ್ರೀ೧೦೮ ವಿಶ್ವೇಶತೀರ್ಥ

ಶ್ರೀಪಾದಂಗಳವರು ಅನುಗ್ರಹವಚನವನ್ನು ನೀಡಿ ಆಶೀರ್ವದಿಸಿದ್ದಾರೆ. ಅವರಿಗೆ ನನ್ನ

ಹತ್ತೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ.
 

 
ಎರಡನೆಯದಾಗಿ ಪರಮಪೂಜ್ಯರೂ, ಶ್ರೀರಾಘವೇಂದ್ರಸ್ವಾಮಿಗಳ ಕರುಣಾಪಾತ್ರರೂ