This page has not been fully proofread.

ವಿಷ್ಣು ಮಂಗಲದಲ್ಲಿ ತೋರಿದ ಅಪೂರ್ವ ಮಹಿಮ
ಅಚ್ಚರಿಯ ಸೂಸುತ್ತ ಕೇಳಿದರು ಗುರುಗಳು
"ಭೋಜನಾನಂತರವೂ ಎರಡು ಶತ ಹಣ್ಣುಗಳ
 
ಭುಜಿಸಿ ನಿರ್ಲಿಪ್ತರಾಗಿರುವಿರಲ್ಲಾ
ತೆಳ್ಳಗಿನ ಉದರವು ಪೀನವಾಗಿಲ್ಲ
ಪರಿಶುದ್ಧ ಮನಸುಳ್ಳಓ ಪೂರ್ಣ ಪ್ರಜ್ಞರೇ !
ನಿಜವಾದ ಕಾರಣವ ನೀವೆಮಗೆ ತಿಳುಹಿ"
 
"ಅಂಗುಷ್ಠಗಾತ್ರದ ಕಿಡಿಯೊಂದು ಉರಿಯುತ್ತಿದೆ
 
ಜಠರದಲಿ
 
ಜಾಜ್ವಲ್ಯ ಮಾನವದು ಎನ್ನ
 
ಹಿತವನ್ನು ನೀಡುವುದು ಎಲ್ಲ ಕಾಲದಿ ನನಗೆ
ಪ್ರಲಯ ಕಾಲದಿ ಅದುವು ಜಗವನ್ನೆ ಸುಡಬಹುದು"
ಇಂತೆಂದು ನುಡಿದರು ಆನಂದ ತೀರ್ಥರು
 
ಎಂದೆಂದು ಶ್ರೀ ಹರಿಯ ಚರಣಸೇವಕರವರು
 
ದಿಗ್ವಿಜಯ ಯಾತ್ರೆಯನ್ನು ಮುಂದುವರಿಸುತಲವರು
ವಿಷ್ಣುಮಂಗಲದಿಂದ ತೆರೆಳಿದರು ಮುಂದೆ
ಹಲವು ಪ್ರದೇಶಗಳ ನದಿಗಳನ್ನು ದಾಟುತ್ತ
ಬಹುಪರಿಯ ಧರ್ಮಗಳ, ಪರಿಪರಿಯ ವಸ್ತುಗಳ
ವಿವಿಧ ಪದ ಅರ್ಥಗಳ ಮತಗಳನ್ನು ಖಂಡಿಸುತ
ಎಲ್ಲ ತಡೆಗಳ ಗೆಲಿದು ಮುನ್ನುಗ್ಗಿ ಹೊರಟರು
 
ಪಯಸ್ವಿನೀ ತೀರದಲ್ಲಿ ದುರ್ಗಾದೇವಿಯ ಸ್ಮರಣೆ
 
ಕೇರಳಕೆ ಭೂಷಣವು ನದಿಯೊಂದು ಇಹುದು
"ಪಯಸ್ವಿನೀ" ಎಂಬುವುದು ಈ ನದಿಯ ಹೆಸರು
ಪ್ರವಹಿಸುವ ಹಾದಿಯಲಿ ವೃಕ್ಷಗಳ ಕೆಡಹುವಳು
ತನ್ನಲ್ಲಿ ಮಿಂದವರ ಪರಿಶುದ್ಧ ಮಾಡುವಳು
ಭೂಸುರರು ಅರ್ಚಿಸುವ ಈ ತೀರ್ಥ ಕ್ಷೇತ್ರದಲ್ಲಿ
ಚಂಡಿಕೆಯು ಜನಿಸುವುದ ಸ್ಮರಣೆ ಮಾಡಿದರು
 
ಐದನೆಯ ಸರ್ಗ / 81
 
32
 
33
 
34
 
35