This page has been fully proofread once and needs a second look.

"ವೇದ ಸಿದ್ಧಾಂತಕ್ಕೆ ಹಲವು ಭಾಷ್ಯಗಳಿಹವು

ಅಧಿಕತಮ ಭಾಷ್ಯಗಳು ವೇದ ಸಮ್ಮತವಲ್ಲ

ಅಂತಿರಲಿ, ಅದರಿಂದ ನಮಗೇನು ಹಾನಿ ?
 

ಪರಮ ಜ್ಞಾನಿಗಳಾದ ಆನಂದ ತೀರ್ಥರೇ !

ಬ್ರಹ್ಮಸೂತ್ರದ ಕಾಂಕ್ಷೆ ಸರಿಯಾಗಿ ತೋರಿಸುವ

ಸತ್ಯನಿಷ್ಠುರವಾದ ಭಾಷ್ಯವನ್ನು ರಚಿಸಿ
 
" ॥ ೨೮ ॥
 
ಆಶ್ವಯುಜ ಕಾರ್ತಿಕ ಹುಣ್ಣಿಮೆಯ ದಿನದಂದು

ಬೆಳಗುವ ಚಂದ್ರಮನ ಬೆಳಕಿನ ಪರಿಯಲ್ಲಿ

ಸಜ್ಜನರ ಮನದಲ್ಲಿ ಹುದುಗಿದ್ದ ಕಾಂಕ್ಷೆಗಳು

ಪ್ರಕಟವಾಯಿತು ಜೇಜ್ಯೇಷ್ಠಯತಿಗಳ ನುಡಿಯಿಂದ

ಆನಂದ ತೀರ್ಥರ ಮುಖವೆಂಬ ಚಂದ್ರನಿಂ

ಹೊರಬಿತ್ತು ಶ್ರೀ ಹರಿಯ ವ್ಯಾಖ್ಯಾನ ಚಂದ್ರಿಕೆ
 
॥ ೨೯ ॥
 
ಕಾಲ ಪರಿಪಾಲಿಸುವ ತೆಂಕಣದ ದಿಸೆಯಲ್ಲಿ

ವಿಷ್ಣು ಮಂಗಲವೆಂಬ ಗ್ರಾಮವೊಂದುಂಟು

ಗುರುವೊಡನೆ ದಿಗ್ವಿಜಯ ಯಾತ್ರೆಯನ್ನು ಕೈಗೊಂಡು

ಬಂದಿಳಿದರಲ್ಲಿ ಆನಂದ ತೀರ್ಥರು
 

ಜಗಕೆ ಮಂಗಳ ಕೊಡುವ ಶ್ರೀ ಹರಿಯ ಕ್ಷೇತ್ರವದು

ನಮಿಸಿದರು ಭಕ್ತಿಯಲ್ಲಿ ದೇವಸರ್ವೋತ್ತಮಗೆ
 
॥ ೩೦ ॥
 
ದಕ್ಷಿಣ ದಿಗ್ವಿಜಯದ ಆರಂಭ
 

 
ಭಿಕ್ಷೆಯನ್ನು ಏರ್ಪಡಿಸಿ ಭಿಕ್ಷಾಪ್ರದಾತನು

ಆನಂದ ತೀರ್ಥರನು ಪರಿಕಿಸುವ ಸಲುವಾಗಿ

ಕದಲಿ ಫಲಗಳ ರಾಶಿ ಅವರ ಮುಂದಿರಿಸಿದನು
 

ಎಳ್ಳಷ್ಟು ಕಂಗೆಡದೆ ಆನಂದ ತೀರ್ಥರು

ಹಣ್ಣುಗಳನೆಲ್ಲವನು ಭುಜಿಸಿ ಮುಗಿಸಿದರು

ನೆರೆದಿದ್ದ ಎಲ್ಲ ಜನ ವಿಸ್ಮಯವ ತಾಳಿದರು
 
80 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31
 
॥ ೩೧ ॥