This page has been fully proofread once and needs a second look.

ಮಧ್ಯಗೇಹರ ಮಧ್ದರ್ಶನ
 

 
ನಂದನನ ದೇಹವದು ಭವ್ಯ ಪಾತ್ರೆಯು ಅಹುದು

ತುಂಬಿಹುದು ಪಾತ್ರೆಯಲ್ಲಿ ತೇಜವೆಂಬುವ ಸುಧೆಯು

ಮಧ್ಯಗೇಹರು ತಮ್ಮ ನಯನಗಳ ಬೊಗಸೆಯಲಿ

ಆ ಸುಧೆಯ ಕುಡಿಕುಡಿದು ತೃಷೆಯ ತಣಿಸಿದರು

ಮಗನ ನುಡಿಯೆಂಬ ಗಡಿಗೆಯಲ್ಲಿ ತುಂಬಿದ್ದ

ಜ್ಞಾನವೆಂಬಮೃತವ ಕರ್ಣದಲ್ಲಿ ಕುಡಿದರು
 
॥ ೨೪ ॥
 
ಅಚ್ಯುತಪ್ರೇಕ್ಷರೂ ಆನಂದ ತೀರ್ಥರೂ

ಸರಸ ಸಂಭಾಷಣೆಯಲ್ಲಿ ತೊಡಗಿದ್ದರೊಮ್ಮೆ

ಪರಿಹಾಸ ದನಿಯಲ್ಲಿ ಗುರುಗಳಿಂತೆಂದರು

"ನಾನೊಂದು ಸಲಹೆಯನ್ನು ನೀಡುವೆನು ನಿಮಗೆ
 

ಬಲ್ಲೆನೆಂಬಿರಿ ನೀವು ಬ್ರಹ್ಮ ಸೂತ್ರಕೆ ಅರ್ಥ

ಉತ್ಕೃಷ್ಟ ಭಾಷ್ಯವನ್ನು ರಚಿಸಿ ಬರೆಯಿರಿ ನೀವೇ''
 

॥ ೨೫ ॥
 
 
ಭಾಷ್ಯ ರಚಿಸಲು ಪ್ರಾರ್ಥ
 
ನೆ
 
ಹಂಸ ಬೇರ್ಪಡಿಸುವುದು ಹಾಲಿನಲ್ಲಿನ ನೀರ

ಅಂತೆಯೇ ಆ ದಿನದಿ ಆನಂದ ತೀರ್ಥರು

ಗುರುವಾಣಿಯಲ್ಲಿನ ಆಕ್ಷೇಪ ತೊರೆದು

ಆದೇಶದಲ್ಲಿನ ಸತ್ವವನ್ನು ಸ್ವೀಕರಿಸಿ

ಆ ಕ್ಷಣವೆ ತಳೆದರು ಭಾಷ್ಯ ರಚನೆಯ ದೀಕ್ಷೆ

ಸಂತರಿಗೆ ಸಂತೋಷ ಸದ್ಗುಣದ ಅಂಶದಲ್ಲಿ
 
ಲಿ ॥ ೨೬ ॥
 
ವೈರಾಗ್ಯ, ವೈಯಾತ್ಯ, ಸಾಸದ್ವಾಕ್ಯವೆಲ್ಲವೂ

ಪರಮಹಂಸರಿಗೆಲ್ಲ ರಾಆದರ್ಶವಾಗಿಹವು
 

ಇಂಥ ಸದ್ಗುಣ ಖನಿಯು ಲಿಕುಚ ವಂಶೋದ್ಭವರು
 

ಆಶ್ರಮವ ಅಚ್ಯುತ ಪ್ರೇಕ್ಷರಿಂ ಪಡೆದವರು

ಆನಂದ ತೀರ್ಥರಿಗೂ ಜೇಜ್ಯೇಷ್ಠರೀ ಯತಿಗಳು

ಇಂತು ಅರುಹಿದರವರು ಪರಮ ಭಕ್ತಿಯಲಿ
 
ಐದನೆಯ ಸರ್ಗ / 79
 
24
 
25
 
26
 
27
 
॥ ೨೭ ॥