This page has not been fully proofread.

"ಬುದ್ಧಿ ಸಾಗರ, ವಾದಿಸಿಂಹರು ಲೋಕದೊಳು ಖ್ಯಾತರು
ಭೂಲೋಕದಲ್ಲೆಲ್ಲ ಜಯಭೇರಿ ಹೊಡೆದವರು
ಇಂಥ ಪಂಡಿತರನ್ನು ಕ್ಷಣದಲ್ಲಿ ನಿಗ್ರಹಿಸಿ
ಅದ್ಭುತವ ತೋರಿದರು ಆನಂದ ತೀರ್ಥರು"
ಇಂತೆಂದು ಜನರೆಲ್ಲ ಮೂಕ ವಿಸ್ಮಿತರಾಗಿ
ಕುಣಿದು, ಕೊಂಡಾಡಿದರು ಆಚಾರ್ಯರನ್ನು
 
ಇಂತಿರಲು ಆಚಾರ್ಯ ಆನಂದ ತೀರ್ಥರು
ತರ್ಕ ವಿದ್ಯಾ ನಿಪುಣ ಶಿಷ್ಯರನ್ನು ಕುರಿತು
ಮಣಿಮಂತ ವಿರಚಿತ ಸೂತ್ರಭಾಷ್ಯದ ಬಗ್ಗೆ
ಮೆಲುನಗೆಯ ಸೂಸುವ ಪರಿಹಾಸ ದನಿಯಲ್ಲಿ
 
ನುಡಿದ ಮಾತುಗಳನ್ನು ಆಲಿಸುತ ಆ ಸುರರು
ಪರಿಪರಿಯ ಬಗೆಯಲ್ಲಿ ಆನಂದ ಪೊಂದಿದರು
 
ಶಂಕರ ಭಾಷ್ಯದ ಖಂಡನೆ
 
ಶಾಂಕರ ಪ್ರತಿಪಾದ್ಯ ಸೂತ್ರಗಳ ಭಾಷ್ಯ
ಆಭಾಸ, ಮಿಥೈಗಳ ಸರಮಾಲೆಯಹುದು
ಪರಿಶುದ್ಧ ಮತಿಯುಳ್ಳ ಪಂಡಿತರ ಮಾತಿಂದ
ಬ್ರಹ್ಮಸೂತ್ರದ ಭಾವ ನಾವರಿಯಬೇಕು
ದುರ್ಭಾಗ್ಯವೆಲ್ಲರಲು ಈಗ ಸತ್ಯತವು
ಇದು ಎಂಥ ಅಚ್ಚರಿ! ಎಂತಹ ಸೋಜಿಗ!
 
ಇಂತು ಪೇಳುತ ನಮ್ಮ ಆನಂದ ತೀರ್ಥರು
ಆ ಭಾಷ್ಯದಲ್ಲಿನ ಪ್ರಬಲ ದೋಷವನೆಲ್ಲ
ತೆರೆದಿಟ್ಟು ತೋರಿದರು ಮತ್ತೆ ಮತ್ತೆ
ವಿಸ್ಮಯವ ಪೊಂದಿದರು ನೆರೆದ ಪಂಡಿತರೆಲ್ಲ
ಆಚಾರ್ಯ ವಾಣಿಯಲಿ ಹುರುಳಿಲ್ಲವೆಂದು
ವಾದಿಸಲಸಮರ್ಥ ವಾಕ್ಯಾರ್ಥ ನಿಪುಣರು
 
ಐದನೆಯ ಸರ್ಗ / 77
 
16
 
17
 
18
 
19