This page has been fully proofread once and needs a second look.

ಇಂತು ಆಲೋಚಿಸಿದ ಆ ವಾಸುದೇವನಿಗೆ
 

ಹಗಲಿರುಳು ಶ್ರೀ ಹರಿಯ ಧ್ಯಾನವೇ ಗ್ರಾಸ

ಆಸಕ್ತಿ ತೊರೆದನು ಭೋಗ್ಯವಸ್ತುಗಳಲ್ಲಿ

ತ್ಯಜಿಸಿದನು ದುರ್ವಿಷಯ ಭೋಗಲಾಲಸೆಯ

ಚೇತನಾ ಚೇತನದಿ ನೆಲೆಸಿರುವ ಶ್ರೀ ಹರಿಯ

ಬೇಡಿದನು ಸನ್ಯಾಸಕನುಮತಿಯ ಅಡಿಗಡಿಗೆ
 
॥ ೪ ॥
 
"ಜಡವಸ್ತುಗಳಿಗೆಲ್ಲ ಏಕೆ ನಮಿಸುವೆ ನೀನು ?"

ತಂದೆಯೇ ಮೊದಲಾದ ಬಂಧುಗಳು ಪ್ರಶ್ನಿಸಲು

ಉತ್ತರವ ನೀಡಿದನು ವಾಸುದೇವನು ಆಗ

"ಎಲ್ಲ ವಸ್ತುಗಳಲ್ಲೂ ಇರುವ ನನ್ನಯ ಸ್ವಾಮಿ

ಅದಕೆಂದೆ ಇವರೆಕೆಲ್ಲ ನನ್ನ ಈ ನಮನ'
"
ಲೋಕಶಿಕ್ಷಕ ಗುರುವು ಅರಸಿ ಹೊರಟನು ಗುರುವ
 
॥ ೫ ॥
 
ಅಚ್ಯುತ ಪ್ರೇಕ್ಷರ ಪೂರ್ವೋತ್ತರ
 

 
ಅಂದಿನಾ ದಿನದಲ್ಲಿ ಈ ಲೋಕದಲ್ಲಿ
 

ಖ್ಯಾತರಾಗಿದ್ದರು ಅಚ್ಯುತ ಪ್ರೇಕ್ಷರು

ಯಾವ ಭೂಷಣವಿಲ್ಲ ಈ ಭೂಸುರ ಶ್ರೇಷ್ಠರಿಗೆ

ವಿರಕ್ತಿ ಎಂಬೊಂದು ಆಭರಣ ಮಾತ್ರ

ತಮ್ಮೆಲ್ಲ ಸೌಶೀಲ್ಯ, ಸದ್ಗುಣಗಳಿಂದ

ಅನ್ವರ್ಥವಾಗಿತ್ತು ಅವರಿಗಾ ಹೆಸರು
 
॥ ೬ ॥
 
ಪೂರ್ವ ಜನ್ಮದಲಿವರು ಪ್ರಖ್ಯಾತ ಯತಿವರರು

ಪಾಂಡವಾಲಯದಲ್ಲಿ ದೌದ್ರೌಪದಿಯ ಹಸ್ತದಲ್ಲಿ
ಲಿ
ಪರಿಶುದ್ಧ ಭೋಜನವ ಭುಂಜಿಸಿದ ಸಿದ್ದರು
ಧರು
ಮಧುಕರ ವೃತ್ತಿಯೇ ಬಾಳಿನ ಶೈಲಿ

ಇಂಥ ಮಹಿಮರ ಬಾಳೆ ಳ್ವೆಎಲ್ಲರಿಗೂ ಆದರ್ಶ

ನಾಡ ಜನರೆಲ್ಲರಿಗೂ ದಾರಿ ತೋರುವ ದೀಪ
 
58 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
7
 
॥ ೭ ॥