This page has not been fully proofread.

ಇಂತು ಆಲೋಚಿಸಿದ ಆ ವಾಸುದೇವನಿಗೆ
 
ಹಗಲಿರುಳು ಶ್ರೀ ಹರಿಯ ಧ್ಯಾನವೇ ಗ್ರಾಸ
ಆಸಕ್ತಿ ತೊರೆದನು ಭೋಗ್ಯವಸ್ತುಗಳಲ್ಲಿ
ತ್ಯಜಿಸಿದನು ದುರ್ವಿಷಯ ಭೋಗಲಾಲಸೆಯ
ಚೇತನಾ ಚೇತನದಿ ನೆಲೆಸಿರುವ ಶ್ರೀ ಹರಿಯ
ಬೇಡಿದನು ಸನ್ಯಾಸಕನುಮತಿಯ ಅಡಿಗಡಿಗೆ
 
"ಜಡವಸ್ತುಗಳಿಗೆಲ್ಲ ಏಕೆ ನಮಿಸುವೆ ನೀನು ?"
ತಂದೆಯ ಮೊದಲಾದ ಬಂಧುಗಳು ಪ್ರಶ್ನಿಸಲು
ಉತ್ತರವ ನೀಡಿದನು ವಾಸುದೇವನು ಆಗ
"ಎಲ್ಲ ವಸ್ತುಗಳಲ್ಲೂ ಇರುವ ನನ್ನಯ ಸ್ವಾಮಿ
ಅದಕೆಂದ ಇವರೆಲ್ಲ ನನ್ನ ಈ ನಮನ'
ಲೋಕಶಿಕ್ಷಕ ಗುರುವು ಅರಸಿ ಹೊರಟನು ಗುರುವ
 
ಅಚ್ಯುತ ಪ್ರೇಕ್ಷರ ಪೂರ್ವೋತ್ತರ
 
ಅಂದಿನಾ ದಿನದಲ್ಲಿ ಈ ಲೋಕದಲ್ಲಿ
 
ಖ್ಯಾತರಾಗಿದ್ದರು ಅಚ್ಯುತ ಪ್ರೇಕ್ಷರು
ಯಾವ ಭೂಷಣವಿಲ್ಲ ಈ ಭೂಸುರ ಶ್ರೇಷ್ಠರಿಗೆ
ವಿರಕ್ತಿ ಎಂಬೊಂದು ಆಭರಣ ಮಾತ್ರ
ತಮ್ಮೆಲ್ಲ ಸೌಶೀಲ್ಯ, ಸದ್ಗುಣಗಳಿಂದ
ಅನ್ವರ್ಥವಾಗಿತ್ತು ಅವರಿಗಾ ಹೆಸರು
 
ಪೂರ್ವ ಜನ್ಮದಲಿವರು ಪ್ರಖ್ಯಾತ ಯತಿವರರು
ಪಾಂಡವಾಲಯದಲ್ಲಿ ದೌಪದಿಯ ಹಸ್ತದಲ್ಲಿ
ಪರಿಶುದ್ಧ ಭೋಜನವ ಭುಂಜಿಸಿದ ಸಿದ್ದರು
ಮಧುಕರ ವೃತ್ತಿಯೇ ಬಾಳಿನ ಶೈಲಿ
ಇಂಥ ಮಹಿಮರ ಬಾಳೆ ಎಲ್ಲರಿಗೂ ಆದರ್ಶ
ನಾಡ ಜನರಲರಿಗೂ ದಾರಿ ತೋರುವ ದೀಪ
 
58 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
7