We're performing server updates until 1 November. Learn more.

This page has not been fully proofread.

"ದಮನ ಮಾಡಿರಿ ಸ್ವಾಮಿ, ದುಷ್ಟದಮನ
ಸ್ಪಷ್ಟದಲಿ ತಿಳಿಸಿರಿ ಶ್ರೀ ಹರಿಯ ಗುಣಗಳ
ಮುದವ ನೀಡಿರಿ ನಿಮ್ಮ ಭಕ್ತಜನವೃಂದಕೆ'
ಹೀಗೆಂದು ಸ್ತುತಿಸಿದ ದೇವಗಣಕಾಗ
 
ಆನಂದ ಕೊಡಲೆಂದು ಮೂರ್ಲೋಕದಾಚಾರ್ಯ
ವಾಸುದೇವನು ಪಡೆದ ಗುರುವ ಅನುಮತಿಯ
 
56
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀ ನಾರಾಯಣ ಪಂಡಿತರು ರಚಿಸಿರುವ ಶ್ರೀ ಸುಮಧ್ವ ವಿಜಯ ಮಹಾಕಾವ್ಯದ
ಆನಂದಾಂಕಿತವಾದ ಮೂರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.
 
ಮೂರನೆಯ ಸರ್ಗ / 53