This page has not been fully proofread.

ನೆರೆದ ಜನರೆಲ್ಲರೂ ಬೆರಗಾಗಿ ನಿಂದರು
ಬಾಲಕನ ಧಾರ್ಷ್ಟ್ಯಕ್ಕೆ ತಲೆಯ ತೂಗಿದರು
ಮುಖಭಂಗ ಹೊಂದಿದಾ ಶಿವಭಟ್ಟನನ್ನು
ಲೆಕ್ಕಿಸದೆ ಹೋದರಾ ಬ್ರಾಹ್ಮಣನ ಜನರು
ಕೇಸರಿಯ ಶಿಶುವಿನಾ ಗರ್ಜನೆಯ ಕೇಳವರು
ಊಳಿಡುವ ನರಿಯನ್ನು ಲೆಕ್ಕಿಸುವರೆ ?
 
"ಶಿವಭಟ್ಟ ನುಡಿದದ್ದು ತಪ್ಪಾಯಿತೆ ?
ಸತ್ಯ ಸಂಗತಿಯನ್ನು ನೀನರುಹು ನಮಗೆ
 
ಹೀಗೆಂದ ಜನರಿಗೆ ವಾಸುದೇವನು ಆಗ
 
ತತ್ವಾರ್ಥ ಚಿಂತನೆಯ ಸತ್ಯಾರ್ಥ ಅರುಹಿದನು
 
ಹರುಷಗೊಂಡರು ಆಗ ದೇವಲೋಕದ ಸುರರು
 
ಮಧ್ವವೃಕ್ಷದ ಬೀಜ ಅಂಕುರಿಸಿತೆಂದು
 
ಜನಮನವ ಗೆಲಿದಿದ್ದ ವಾಸುದೇವನು ಆಗ
ಮನೆಗೆ ಮರಳಿದ ಮತ್ತೆ ತಾಯಿಯೊಡಗೂಡಿ
ನಡೆದ ಸಂಗತಿಯೆಲ್ಲ ತಂದೆಗರುಹಿದ ಹಸುಳೆ
"ಶಿವಭಟ್ಟ ಪ್ರವಚನದಿ ಮಿಥೈಯನು ನುಡಿದರು
ನಾನಾಗ ಸತ್ಯಾರ್ಥ ಜನರಿಗರುಹಿದನು
 
ನನ್ನ ನಡೆ ಸರಿಯಹುದೆ ?" ಎಂದನವ ತಂದೆಯೆಡೆ ನೋಡಿ
 
"ಸತ್ಯವನೆ ನುಡಿದಿರುವ, ಓ ನನ್ನ ಮಗುವೆ!'
ಬಾಲಕನ ಪ್ರತಿಭೆಗೆ ಮಣಿದು ನುಡಿದನು ತಂದೆ
ಆಲೋಚಿಸಿದನಾತ ಹರಿಯ ಹಿರಿಮೆಯ ಕುರಿತು
 
ಹಸುಳೆಯ ಪ್ರಖರತೆಯು ದೇವವೃಂದಕೆ ಸಾಟ
ಇಂಥ ಮಗನನು ಪಡೆದ ನನಗೆ ಭಾಗ್ಯ !
ಎಂಥದೀ ಹರಿಕೃಪೆಯು, ಎಂಥ ಸೌಭಾಗ್ಯ !
 
ಮೂರನೆಯ ಸರ್ಗ / 45
 
24
 
25
 
26
 
27