This page has been fully proofread once and needs a second look.

ತಪದ ನಿಧಿಯೆನಿಸಿದ್ದ ಮಧ್ಯಗೇಹರು ಅಂದು

ನಷ್ಟಗೊಂಡಾ ನಿಧಿಯ ಮತ್ತೆ ಪಡೆದವರಂತೆ
 

ಸತಿಸುತರ ಒಡಗೂಡಿ ಮನೆಗೆ ಮರಳಿದರು

ವಾಸುದೇವನ ಮೊಗವು ಬಾಲಸೂರ್ಯನ ಹಾಗೆ

ಆ ಮೊಗವ ನೋಡಿದಾ ಸಜ್ಜನರ ಮುಖಕಮಲ

ಅರಳಿದವು ಉದಯಿಸಿದ ರವಿಯ ಕಂಡಂತೆ
 
॥ ೧೬ ॥
 
ವಿಮಾನಗಿರಿಯಲ್ಲಿ ವಾಸುದೇವ
 

 
ಪಾಜಕದ ಬಳಿಯೊಂದು ವಿಮಾನಗಿರಿಯುಂಟು

ದುರ್ಗಮವು ಆ ಗಿರಿಯು ಹಿಮಗಿರಿಯ ಪರಿಯಲ್ಲಿ

ಊರ ಜನರಾರೂ ಗಿರಿಯ ಕಡೆ ಮೊಗವಿಡರು
 

ಇಂತಹ ಬೆಟ್ಟದಲ್ಲಿ ವಾಸುದೇವನು ಮಾತ್ರ

ನಿರ್ಭಯದಿ ಸಂಚರಿಸುವನೇಕಾಂಗಿಯಾಗಿ

ದುರ್ಗೆಯ ಶ್ರೀರಕ್ಕೆಷೆ ಸತತವಿಹುದವಗೆ
 
॥ ೧೭ ॥
 
ಭಾರತೀಪತಿಯ ಅಕ್ಷರಾಭ್ಯಾಸ
 

 
ಮಾತುಗಳದೆಲ್ಲದಕ್ಕೂ ಮಾತೆ ಭಾರತಿಯು

ಅಕ್ಷರದ ರಾಜ್ಯಕ್ಕೆ ಅಕ್ಕರೆಯ ಅಭಿಮಾನಿ

ಇಂಥ ಭಾರತಿಗೀತ ಒಡೆಯನಿವನು

ಈ ವಾಸುದೇವನಿಗೆ ಅಕ್ಷರಾಭ್ಯಾಸವೆ ?

ಬಾಲಕನ ಮಹಿಮೆಯನ್ನು ಅರಿಯದಾ ವಿಪ್ರರು

ಕಲಿಸಿದರು ಆತನಿಗೆ ಓದು ಬರಹ
 
॥ ೧೮ ॥
 
ವಾಸುದೇವನ ಪ್ರತಿಭೆ ಅಪ್ರತಿಮವಹುದು

ಭಾರತೀರಮಣನಿಗೆ ಕಲಿಸುವವರಾರು ?
 

"ನಿನ್ನೆ ಬರೆದಿಹುದನ್ನೆ ಇಂದಿಗೂ ಬರೆದಿರುವೆ

ನಿನ್ನೆ ಕಲಿತುದುದನ್ನೆ ಮತ್ತೆ ಕಲಿಯಲೆ ನಾನು ?"

ಬಾಲಕನು ಉಸುರಿದಾ ನುಡಿಯನ್ನು ಕೇಳಿ

ಸಂತಸದಿ ಬೀಗಿದನು ಮಧ್ಯಗೇಹ
 
ಮೂರನೆಯ ಸರ್ಗ / 43
 
16
 
17
 
18
 
19
 
॥ ೧೯ ॥