This page has not been fully proofread.

ಜಾತಕರ್ಮಾದಿ
 
ಬಳಿಕ ಪೊಕ್ಕರು ತಮ್ಮ ಮನೆಯನ್ನು ಅವರು
ಚಂದ್ರನಂದದ ಮುಖದ ಶಿಶುವನ್ನು ಕಂಡರು
 
ಹರಿಯ ಕರುಣೆಯು ತಮಗೆ ಇಂದಾಯಿತೆಂದು
 
ನಲಿನಲಿದು ದೇವರನು ಪಾಡಿ ಪೊಗಳಿದರು
ಸದ್ಗುಣದ ಖನಿಯಾದ ಆ ಶಿಶುವಿಗವರು
ಜಾತಕರ್ಮಾದಿ ಕ್ರಿಯೆಯ ಸಾಂಗಗೊಳಿಸಿದರು
 
ನಾಮಕರಣ
 
ಮಧ್ಯಗೇಹರು ತಮ್ಮ ಮಗುವಿಗಂದು
"ವಾಸುದೇವ " ಎಂಬ ಹೆಸರನ್ನು ಕೊಟ್ಟರು
ಜ್ಞಾನದಾಯಕನಾದ ಮುಖ್ಯಪ್ರಾ
ಇದರಿಂದ ಈ ಹೆಸರು ಅನ್ವರ್ಥವಾಯಿತು
ವಾಸುದೇವನ ಪದದ ಸುಖವ ಪಡೆವವಗೆ
 
ಹೆಸರು ಸರಿಯಾಯ್ಕೆಂದು ಸುರರು ಕೊಂಡಾಡಿದರು
 
ಪೂರ್ವಾಲಯರು ಮಾಡಿದ ಅಪೂರ್ವ ಸೇವೆ
 
ಮೂಡಿಲ್ಲಾಯ ಎಂಬೊಬ್ಬ ಪರಮ ಧಾರ್ಮಿಕನು
 
"ಶಿಶುವ ಹಾಲಿಗೆ" ಎಂದು ಗೋವ ನೀಡಿದನೊಂದ
 
ನಂತರದ ಜನ್ಮದಲ್ಲಿ ಆ ಪರಮ ದಾನಿಯು
ಜನಿಸಿ ಬಂದನು ತನ್ನ ಮಗನಿಗೆ ಮಗನಾಗಿ
ಉದ್ಧಾರ ಪರದನು ಶಾಸ್ತ್ರಂಗಳಿಂದ
ದಾನ ಪಡವನ ಗುಣದಿಂ ದಾನಫಲವಲ್ಲವೆ ?
 
28/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30