This page has not been fully proofread.

ಇಂತು ಆ ಪುರುಷನಲಿ ಆವಿಷ್ಟನಾದ
ಭಗವಂತ ತನ್ನೆರಡು ತೋಳುಗಳನ
ಏರುಸ್ವರದಲ್ಲಿ ನುಡಿದ ಜನನಿವಹದತ್ತ
"ಜಗದ ಜನಕೆಲ್ಲ ಮಂಗಳವನೀವ
ಎಲ್ಲ ತತ್ವವ ಬಲ್ಲ ಸುಜ್ಞಾನಿಯೊಬ್ಬ
ಶೀಘ್ರದಲ್ಲಿ ಇಲ್ಲಿಯೇ ಅವತರಿಸಲಿರುವ
 
ಮಧ್ಯಗೇಹ ಭಟ್ಟರ ಪೂರ್ವೋತ್ತರ
 
ಏಳು ದ್ವೀಪಗಳಿಂದ, ಏಳು ಜಲಧಿಗಳಿಂದ
ಕೂಡಿರುವ ನಮ್ಮದೀ ಭೂಮಂಡಲ
ಇದರ ಮಧ್ಯದಲಿಹುದು ಜಂಬೂದ್ವೀಪ
ಕರ್ಮಬುವಿ ಎನಿಸಿಹುದು ಭರತಖಂಡ
ಇಲ್ಲೊಬ್ಬ ಬ್ರಾಹ್ಮಣನು ಕಲಿಯುಗದಿ ಜನಿಸಿಹನು
ಮಧ್ಯಗೇಹರ ಕುಲದ ಬ್ರಾಹ್ಮಣೋತ್ತಮನು
 
ಅವರ ಮೂಲಸ್ಥಳ
 
ಆ ಭೂಸುರನ ಮೂಲ, ಶಿವಳ್ಳಿ ಗ್ರಾಮ
ಕಂಗೊಳಿಸುತ್ತಿತ್ತು ಆ ಗ್ರಾಮವೆಂದು
 
ರಜತ ಪೀಠದ ನಾಥ ಅನಂತಾಸನನಿಂದ
 
ವೇದಗಿರಿ ಎಂಬೊಂದು ಬೆಟ್ಟದಿಂದ
ಇಲಾವೃತವೆಂಬೊಂದು ಖಂಡದಂತೆ
ಮೇರು ಗಿರಿ ರುದ್ರರ ಸಮ್ಮಿಲನದಂತೆ
 
ವಾಸಸ್ಥಳ
 
ಪಾಜಕವೆಂಬೊಂದು ದಿವ್ಯಕ್ಷೇತ್ರ
ಮೂರು ಕುಲಗಳಿಗೆ ಅದು ಧ್ವಜದ ಪರಿ ಇಹುದು
ಭಾರ್ಗವನು ದುರ್ಗೆಯನು ಸ್ಥಾಪಿಸಿದ ಕ್ಷೇತ್ರ
ವಿಮಾನಗಿರಿಯಿಂದ ಶೋಭೆ ಪಡೆದಿಹ ಕ್ಷೇತ್ರ
ವಿಶ್ವ ಪಾಲಕನಿಂದ ಜಲವ ಗಳಿಸಿದ ಕ್ಷೇತ್ರ
ಆ ಬ್ರಾಹ್ಮಣನು ನೆಲೆಸಿದನು ಈ ಕ್ಷೇತ್ರದಲ್ಲಿ
 
ಎರಡನೆಯ ಸರ್ಗ / 23
 
8
 
9
 
10
 
11