This page has not been fully proofread.

ಶ್ರೀ ವಾಯುದೇವರಿಂದ ಭಗವದಾಜ್ಞಾ ಸ್ವೀಕಾರ
ಪ್ರಜ್ವಲಿಪ ಬಣ್ಣಗಳ ಮುಕುಟ, ಹರಿಯಾಜ್ಞೆ!
ಶಿರದಲ್ಲಿ ಧರಿಸಿದರು ಕೈಯ ಜೋಡಿಸಿಕೊಂಡು
ರುದ್ರಾದಿ ದೇವರ ಪ್ರಾರ್ಥನೆಯನವರು
ಮುತ್ತ ಮಾಲೆಯ ತೆರದಿ ಹೃದಯದಲಿ ಧರಿಸಿ
ಸಜ್ಜನರನುದ್ಧರಿಸಲಾ ವಾಯು ದೇವರು
ಭೂಮಿಯೊಳು ಅವತರಿಸಲಿಚ್ಚಿಸಿದರು.
 
ಆ ಕಾಲದ ಭೂಲೋಕದ ಸಜ್ಜನರ ಪರಿಸ್ಥಿತಿ
ಅವತಾರ ಕಾಲವದು ಸನ್ನಿಹಿತವಾಯ್ತು
ಅಂದಿನಾ ಕಾಲದಲ್ಲಿ ಭೂಲೋಕದಲ್ಲಿ
ಬ್ರಹ್ಮ ಮೀಮಾಂಸೆಯ ತತ್ವರಸಸಾರವು
ಗೀರ್ವಾಣ ಕಾಲದ ಸಂಪ್ರದಾಯಗಳು
ತಿಳಿಯದಾಗಿದೆ ಎಂದು ತತ್ವಚಿಂತಕರು
ಪರಿತಪಿಸಿ ಚಿಂತೆಯಲ್ಲಿ ಮುಳುಗಿದ್ದರು
 
ಶ್ರೀ ಅನಂತಾಸನನಿಂದ ಮಧ್ಯಾವತಾರದ ಮುನ್ಸೂಚನೆ
ರಜತ ಪೀಠದ ಪುರ ಅಧಿವಾಸಿಯಂದು
ಮುಂಬರುವ ಶುಭವಾರ್ತೆ ಸೂಚಿಸಲು ಎಂದು
ಆ ಪುರದ ಜನರನ್ನು ಮುದಗೊಳಿಸಲೆಂದು
ಸಕಲ ಸಂಭ್ರಮದಿಂದ ಸಡಗರಗಳಿಂದ
ಸಂಕ್ರಮಣ ಉತ್ಸವಕ್ಕೆ ನೆರೆದಿದ್ದ ಜನರಲ್ಲಿ
ಒಬ್ಬನಲಿ ಆವೇಶ ಉಂಟುಮಾಡಿದರು
 
ಶ್ರೀ ಹರಿಯು ಜನರಲ್ಲಿ ನಂಬಿಕೆಯ ಮೂಡಿಸಲು
ಆವೇಶ ಹುಟ್ಟಿಸಿದ ಹುಂಬನೊಬ್ಬನಲಿ
ಎತ್ತರದ ಕಂಭದ ತುದಿಯನೇರಿದ ಹುಂಬ
ರಂಗ ಮಧ್ಯದಿ ಕುಣಿವ ನಟನ ಪರಿಯಲ್ಲಿ
ಕುಣಿಯಲಾರಂಭಿಸಿದ ಚತುರ ನಟನಂತೆ
ಜನರು ವಿಸ್ಮಯಗೊಂಡು ನೋಡಿದರು ಮಹಿಮೆಯನು
 
22 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7