This page has been fully proofread once and needs a second look.

"4 ಅವ
 
ಅಸತ್" ಎಂಬುದಕೆ "ಸದಸದ್ವಿಲಕ್ಷಣ "
 
"
''ಸಂವೃತಿ'' ಎಂಬುದನು 'ಮಾಯೆ'' ಎಂದನು ಅವನು

'ಶೂನ್ಯ'' ತತ್ವಕ್ಕಾಗಿ ಬ್ರಹ್ಮನೇ "ಅಖಂಡ" ನೆಂದ

ಬೌದ್ಧ ಮತ ಬೋಧಿಸಿದ ಮುಖ್ಯ ತತ್ವಗಳನ್ನೇ

ಪ್ರಚುರಗೊಳಿಸಿದನವನು ವಿರೂಪಗೊಳಿಸಿ

'ಪ್ರಚ್ಛನ್ನ ಬೌದ್ಧ' ಹೆಸರಾಯ್ತು ಅವಗೆ
 
॥ ೫೧ ॥
 
ಬ್ರಹ್ಮ ಸೂತ್ರಗಳೆಲ್ಲ ಸೂರ್ಯನಂತಿಹವು

ವೇದವಾಕ್ಯಗಳಲ್ಲಿ ವಿಷಯವಾಕ್ಯಗಳು

ಸಕಲ ತತ್ವಗಳನ್ನು ಕಿರಣಗಳಿಂ ಬೆಳಗುವುವು
 

ಇಂತಹ ಸೂರ್ಯನನ್ನು ಅಪಹರಿಸಿದನಾತ
 

ದುಷ್ಟಿಟೀಕೆ, ದುರ್ಯುಕ್ತಿ, ದುರ್ಭಾಷ್ಯದಿಂದ

ಜ್ಞಾನಿಗಳು ಹೇಳಿದರು "ಇದು ದೊಡ್ಡ ಚೌರ್ಯ"
 
॥ ೫೨ ॥
 
ಕ್ಷಮೆಯೆಂಬ ಸಾಗರನು ನಾರಾಯಣ

ವ್ಯಾಸರೂಪದೊಳಿರುವ ಸಂಕರ್ಷಣ

ಅವ ರಚಿಸಿ ನೀಡಿದ ಬ್ರಹ್ಮ ಸೂತ್ರಕ್ಕೆ

ಸಂಕರನ ಮಾತೆಲ್ಲ ತದ್ವಿರುದ್ಧ

ಬ್ರಹ್ಮಸೂತ್ರಕ್ಕೆಲ್ಲ ಭಾಷ್ಯಕಾರನು ತಾನು

ಎಂದು ನುಡಿದೀತನನು ಸುಡಲಿಲ್ಲ ನಾರಾಯಣ
 
॥ ೫೩ ॥
 
ವೇದಗಳು ಪರಿಶುದ್ಧ ಮಣಿಯ ದೀಪಗಳಂತೆ

ಅವನ ವಾಗ್ದಾಜಾಲ ಕೆಸರಿನಲ್ಲಿ ಮರೆಯಾಯ್ತು ಕಾಂತಿ

ವೇದಾಂತವರಿಯದ ಜನರ ಮನದಲ್ಲಿ

"
ಸೃಷ್ಟಿಯಲ್ಲಿ ಎಲ್ಲೆಲ್ಲೂ ಭೇದವೇ ಇಲ್ಲ''

ಎಂಬ ಅವಿಚಾರವನ್ನು ಬಿತ್ತಿ ಬೆಳೆದನು ಆತ

ಅದರಿಂದ ಆತ ಸಂಕರ ನಂನೆಂದು ಖ್ಯಾತ
 
16/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
51
 
52
 
53
 
54
 
॥ ೫೪ ॥