This page has not been fully proofread.

ಕಂಗೊಳಿಸಿದನಾ ಭೀಮ ಸೋದರರ ಸಹಿತ
 
ಕೃಷ್ಣನಡಿದಾವರೆಯ ದುಂಬಿಯಂತ
ದೌಪದಿಯ ಮುಖದಲ್ಲಿ ಹಂಸದಂತೆ
ಪ್ರಜೆಯೆಂಬ ಕಮಲಕ್ಕೆ ಸೂರನಂತೆ
 
ಶೋಭಿಸಿದನಾ ಭೀಮ ಅನುಜರಾಗ್ರಜ ಸಹಿತ
ಕಂಗೊಳಿಸಿ ಮೆರೆದನು ವಾಯುಪುತ್ರ
 
"ಪವಿತ್ರ" ನಾಮಕನು ಭಗವಂತ ಕೃಷ್ಣನ
ಸೋದರಿಯ ಮೊಮ್ಮಗನೆ ಪರೀಕ್ಷಿದ್ರಾಜ
ರಾಜ್ಯಭಾರವನವಗೆ ವಹಿಸಿ ಹರಸಿದನು
ಅಸುರರಲಿ ತುಂಬಿದನು ಸಂತಾಪವನ್ನು
ಮೂರುಲೋಕಗಳೊಳಗೆ ಕೀರ್ತಿಯನ್ನು ಗಳಿಸಿ
 
ಕೃಷ್ಣನನು ಎದೆದುಂಬಿ ತುಂಬಿ ಮೂಲರೂಪವ ಸೇರ್ದ
 
ಮಧ್ಯಾಮಾರ ನಿಮಿತ್ತ ವರ್ಣನೆ :
 
ವಿಷ್ಣು ಪದದಾಶ್ರಿತನು ಭೀಮಸೇನ
ಘೋರ ಪ್ರಹಾರದಿಂ ವಧಿಸಿದನು ರಾಕ್ಷಸರ
ಚಂಚಲ ಪ್ರವೃತ್ತಿಯ ರಾಕ್ಷಸರು ಎಲ್ಲರೂ
ಗತಿಸಿದರು ಶೌಲ್ಯದ ಕೊರತೆಯಿಂದಾಗಿ
ಗಾಳಿಯ ಧಾಳಿಗೆ ಮೋಡ ಚದರುವ ರೀತಿ
 
ಕಾಂತಿಯನು ಕಳಕೊಂಡು ಕಾಣೆಯಾದರು ಕರಗಿ
 
ಸಂಕಟಕೆ ಗುರಿಯಾದ ಈ ಅಸುರರೆಲ್ಲ
ನಿರ್ವೀಯ್ರರಾದರು ಭೀಮ ಬಲದಿಂದ
ಆ ವೀರನೊಡನೆ ಹಗೆಯನ್ನು ಸಾಧಿಸಲು
ಕಲಿಯುಗಕೆ ಕಾಲಿಟ್ಟು ಭೂಮಿಯಲ್ಲಿ ಹುಟ್ಟಿದರು
ಬ್ರಹ್ಮನಿರ್ಗುಣನೆಂಬ ದುಷ್ಟತತ್ವವನಿವರು
 
ಹರಡಿದರು ಬುವಿಯಲ್ಲಿ ಎಲ್ಲ ಕಡೆಯಲೂ
 
14 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
43
 
44
 
45
 
46