This page has been fully proofread once and needs a second look.

ವರ್ಷಧಾರೆಯ ಸುರಿಸಿ ಹಲವು ಮಹಿಮೆಯ ತೋರ್ದ
 

ಭುವನನಿಯಾಮಕರಾದ ವಾಯುದೇವರ ರೂಪ
 

ಮಧ್ವಮುನಿ ಚರಿತೆಯಲಿ ಅಚ್ಚರಿಯು ಏನಿಲ್ಲ

ಸಕಲ ಜಗಕೆಲ್ಲರೂ ಗುರುವರ್ಯರವರು

ಅವರ ಚರಿತೆಯ ಕಥನ ನಮ್ಮ ಕರ್ತವ್ಯ

ಅದರಿಂದ ವರ್ಣಿಪೆವು ಈ ಪುಣ್ಯ ಶ್ಲೋಕರ ಕಥನ
 
॥ ೪೮ ॥
 
ದೇವತೆಗಳಿಂದಲೂ ಸುಮಧ್ವವಿಜಯದ ಗಾನ
 

 
ಮಧ್ವಮುನಿಗಳ ಚರಿತೆ ಅತಿಮಾನ್ಯವಾಗಿಹುದು

ಆ ಮಹಿಮರ ಮಹಿಮೆ ವೈವಿಧ್ಯಮಯವಹುದು

ಮಾಧೀಧ್ವೀಯ ಬ್ರಾಹ್ಮಣನ ಲೇಖನಿಯ ನೆರವಿಂದ

ಈ ಮಹಿಮೆ ಎಲ್ಲೆಡೆಯು ಹರಡಿತೆಂಬುದು ಸಲ್ಲ

ದೇವ ವರರೆಲ್ಲರನು ಮುದಗೊಳಿಪ ಈ ಕಥನ

ಗಂಧರ್ವ ಗಾಯನದಿ ಸಾರ್ಥಕ್ಯ ಪಡೆದಿಹುದು
 
॥ ೪೯ ॥
 
ಕಾಕಿ ಎಂಬುವ ದೋಷವಿಲ್ಲದಾ ಮಧುರ ಧ್ವನಿ

ಗಾಂಧಾರ ಇತ್ಯಾದಿ ಶೃತಿಗಳನ್ನು ಪ್ರಕಟಿಸುವ

ಉಚಿತ ತಾನದಿ ಕೂಡಿ ಪಂಚಮದ ಸ್ವರದಲ್ಲಿ

ದೇವಲೋಕದ ಆ ಗಂಧರ್ವ ಗಾಯಕರು

ಸ್ವರ ವಿಕಾಸಗಳಿಂದ ಸುರರ ಆ ಕವನವನು

ಮಧ್ವಗೀತೆಯನವರು ಪಾಡತೊಡಗಿದರು
 
॥ ೫೦ ॥
 
ಗಂಧರ್ವ ಗಾಯನದ ಮಧ್ವಮುನಿ ಚರಿತೆಯನು

ಸುಮುಕುಟ ಮೌಲಿಗಳ ಆಭರಣ ಭೂಷಿತರೂ

ಅರಳಿದ ಮುಖಕಮಲ ಶೋಭಿತರು ಆ ಸುರರು

ನಮ್ರತೆ, ದೃಢಭಕ್ತಿ, ವಿನಯದಲಿ ಕೂಡಿ

ಆಲಿಸಿದರಾ ದಿವ್ಯ ಭವ್ಯ ಕಥನವನು

ಗಂಧರ್ವ ಗಾಯನದ ಮಧ್ವಮುನಿ ಚರಿತೆಯನು
 
ಹದಿನಾರನೆಯ ಸರ್ಗ / 289
 
48
 
49
 
50
 
51
 
॥ ೫೧ ॥