This page has been fully proofread once and needs a second look.

ಮಧ್ವಮುನಿಗಳ ಇಂಥ ಪಾಂಡಿತ್ಯ ಕಂಡು
ಶೋ

ಕ್ಷೋ
ಭೆಯನು ತಾಳಿದ್ದ ಶತ್ರು ಪಂಗಡದವರು

"ನೀವು ಹೇಳಿದ ಅರ್ಥ ಸರಿಯಾದುದಲ್ಲ"

ಇಂತೆಂದು ನುಡಿಯುತ್ತ ಮಧ್ವರನು ಟೀಕಿಸಲು

"ಹಾಗಾದರಿದರರ್ಥ ನೀವೇ ಹೇಳಿ " ಎಂಬ

ಮಧ್ವರ ನುಡಿ ಕೇಳಿ ಓಟವನು ಕಿತ್ತರು
 
॥ ೪೪ ॥
 
ಇಂತು ಓಡಿದ ಅವರು ಮತ್ತವರ ಬಳಿ ಬಂದು
ಖುಜ್ಜಂ

ಋಙ್ಮಂ
ತ್ರಗಳ ಐದು ಪಾದ ಸಂಯೋಜನೆಯ

ಮಹಾನಾಮ್ನೀ ಋಕ್ಕುಗಳ ಅವಯವಗಳುಕ್ತವಾಗಿರುವ

ಬ್ರಾಹ್ಮಣದ ಅರ್ಥವನ್ನು ಹೇಳಿರೆಂದಂದಾಗ

ಆ ಋಕ್ಕುಗಳ ಅರ್ಥವನ್ನು ಕೂಡಲೇ ಮಧ್ವರು

ಶೃತಪಡಿಸಿ ತಕ್ಷಣವೇ ಲೇಖನವ ಬರೆಸಿದರು
 
"
 
॥ ೪೫ ॥
 
 
ಆಚಾರ್ಯರ ಇನ್ನೂ ಕೆಲವು ಮಹಿಮೆಗಳು
 

 
ಸಂಪೂರ್ಣ ಉದಿಸಿದ ಪೂರ್ಣಚಂದ್ರನ ತೆರದಿ
 

ಬೆಳಗುವ ನಗೆಮೊಗದ ಮಧ್ವರನು ಕಂಡು

ತಾವೆಲ್ಲ ಅವರಿಗೆ ಪ್ರತಿವಾದಿ ಎಂದೆಣಿಸಿ

ದುಷ್ಟನಿಕರದ ಶ್ವಾನ ದೂರದಲ್ಲಿ ಬೊಗಳುತ್ತ

ಅವರಿಂದ ಮತ್ತೊಮ್ಮೆ ಸೋತು ಓಡಿದರು

ಅಮೃತಾಕರರಾದ ಮಧ್ವರಿಗೆ ಹಾನಿಯೆ ?
 
॥ ೪೬ ॥
 
ಶ್ರೀ ಮಧ್ವಮುನಿಗಳು ಪರಮ ದಯಾ ಶೀಲರು

ಸಿರಿವಂತರಲ್ಲದ ಭಕ್ತಿಜನರರ್ಪಿಸಿದ

ಅನ್ನವನು ನಾಲ್ಕು ಮಡಿ ಹೆಚ್ಚಿಸುಣಿಸಿದರು

ಸಿರಿವಂತರು ತಂದ ತ್ರಿದಶ ಜನರುಣ್ಣುವ

ಅನ್ನವನು ಒಬ್ಬರೇ ಸುಲಭದಲ್ಲಿ ಭುಜಿಸುವರು
 

ಇದರಿಂದ ಎಲ್ಲರೂ ಸುಪ್ರೀತರಾಗುವರು
 
288 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥