This page has been fully proofread once and needs a second look.

"ಈ ಬಂಡೆ ನೀವೆಲ್ಲ ಸರಿಯಾಗಿ ಇರಿಸಿದರೆ

ಅತಿಯಾದ ಉಪಕಾರ ಜನಗಳಿಗೆ ಆಗುವುದು''

ಎಂಬ ಈ ಮಾತನ್ನು ಆಲಿಸಿದ ಆ ಜನರು

"ಓ ಗುರುವೆ! ಮನುಜರಿಗೆ ಇದು ಸಾಧ್ಯವಿಲ್ಲ

ಭೀಮನಾದರೂ ಈ ಕೆಲಸ ಯತ್ನಿಸಿದರೆ

ಆಗಲೂ ಸಾಧ್ಯವೋ ಹೇಳುವಂತಿಲ್ಲ"
 
॥ ೮ ॥
 
ಹನುಮಾವತಾರದಲಿ ತಾವಂದು ತ್ರೇತೆಯಲಿ

ಗಂಧಮಾದನಗಿರಿಯ ಎಂತು ಹೊತ್ತಿದ್ದರೋ

ಅಂತೆಯೇ ಗುರುಮಧ್ವರಾಯರು ಇಂದು

ಸುಲಲಿತ ಶೈಲಿಯಲ್ಲಿ ಅತಿ ಸುಲಭವಾಗಿ

ಬಂಡೆಯನು ಕರಕಮಲದಲ್ಲಿರಿಸಿಕೊಂಡು

ನದಿಯ ಬಳಿ ಇರಿಸಿದರು ಉಚಿತ ಸ್ಥಳದಲ್ಲಿ
 
॥ ೯ ॥
 
ಸೂರ್ಯಗ್ರಹಣ ಕಾಲದಲ್ಲಿ ನಡೆದ ಸಮುದ್ರಸ್ನಾನದ ಪ್ರಸಂಗ
 

 
ಸೂರ್ಯ ಚಂದ್ರರು ಕೂಡಿ ಇರುವ ತಿಥಿಯಂದು

ಯತಿ, ಗೃಹಸ್ಥರು ಮುಂತಾದ ಶಿಷ್ಯರುಗಳಿಂದ

ಶಾಸ್ತ್ರಾರ್ಥ ವಿಷಯಗಳ ಚರ್ಚೆಯಲ್ಲಿ ಶೋಭಿಸಿದ

ಮಾರ್ಗದಲಿ ನಡೆಯುತ್ತ ಆನಂದ ತೀರ್ಥರು

ಗ್ರಹಣದ ಕಾಲದಲ್ಲಿ ಸ್ನಾನದ ಸಲುವಾಗಿ

ಕಡಲಿನ ತೀರಕ್ಕೆ ತ್ವರಿತದಲಿ ನಡೆದರು.
 
॥ ೧೦ ॥
 
ಕಣ್ವಮುನಿಯೆಂಬುವ ಅತಿಶ್ರೇಷ್ಠ ವಿಪ್ರರಿಗೆ

ಅತ್ಯಂತ ಪ್ರಿಯವಾದ ಕಣ್ವತೀರ್ಥದಿ ಮಿಂದು

ಆ ಗ್ರಾಮದಲ್ಲಿ ನೆಲೆಸಿದ್ದ ಆದ್ರ್ರ್ದ್ರಾಂಗರಾಗಿದ್ದ

ಬಾಲಕರು, ವೃದ್ಧರು, ಮತ್ತೆಲ್ಲ ವಯಸವರು

ಗ್ರಹಣ ಮೋಕ್ಷದ ಸಮಯ ಸ್ನಾನವನ್ನು ಮಾಡಿ

ಮಧ್ವರಾಗಮನಕ್ಕೆ ಮುಂಚಿತವೇ ಬಂದರು
 
ಹದಿನಾರನೆಯ /279
 
8
 
10
 
11
 
॥ ೧೧ ॥