This page has been fully proofread once and needs a second look.

ಅಧಿಕಾರವುಳ್ಳವಗೆ ವೇದೋಕ್ತ ಫಲ ಖಚಿತ

ಇಂತೆಂದು ಮಧ್ವಮುನಿ ಉತ್ತರಿಸುತ್ತಿರಲು

ಆ ಧೂರ್ತ ಮತ್ತೊಮ್ಮೆ ಇಂತೆಂದು ನುಡಿದನು

"ವೇದೋಕ್ತ ಫಲವನ್ನು ಪಡೆದವನ ನಾ ಕಾಣೆ

ಇಂತಿರಲು ಅಂತಹ ಯೋಗ್ಯತೆಯ ಅಧಿಕಾರಿ

ಖರವಿಷಾಣದ ತೆರದಿ ಅಪರೂಪಲ್ಲವೆ?"
 
॥ ೪ ॥
 
ಅಂತಹ ಆಕ್ಷೇಪ ಸಹಿಸದಾ ಮಧ್ವರು

ನಿಜ ಕರದ ಪಲ್ಲವದಿ ಧಾನ್ಯವನ್ನು ಹಿಡಿದು

ಓಷಧೀ ಸೂಕ್ತವನ್ನು ಪಠಿಸಿದ ಕ್ಷಣದಲ್ಲೇ

ಬೀಜಗಳು ತಕ್ಷಣವೇ ಮೊಳಕೆಗಳ ತಳೆದವು

ನಂತರದಿ ದಲಗಳು, ಎಲೆಗಳು, ಫಲಗಳೂ ಹುಟ್ಟಿದುವು

ಈ ಮಹಿಮೆಯನು ಕಂಡು ಬೆರಗಾದನಾ ಧೂರ್ತ
 
॥ ೫ ॥
 
ಪಾದದ ಬೆರಳಿನಿಂದ ಪ್ರಕಾಶ
 

 
ಮತ್ತೊಂದು ಮಧ್ವರ ಮಹಿಮೆಯನು ಕೇಳಿ !

ರಾತ್ರಿಯ ಕಾಲದಲ್ಲಿ ಅವರು ಬೋಧಿಸುತ್ತಿರಲು

ವ್ಯಾಸಪೀಠದ ದೀಪ ನಂದಿ ಹೋಗುತ್ತಿರಲು

ಆನಂದ ತೀರ್ಥರ ಪಾದದಂಗುಷ್ಠದ

ಉಗುರಿನ ತುದಿಯಿಂದ ಹೊಮ್ಮಿದ ಬೆಳಕಿಂದ

ಶಿಷ್ಯರೆಲ್ಲರೂ ಗ್ರಂಥ ಪಠನವನು ಮಾಡಿದರು
 
॥ ೬ ॥
 
ಬಂಡೆಯನು ಎತ್ತಿರಿಸಿದ ಪ್ರಸಂಗ
 

 
ಒಮ್ಮೆ ಒಂದೆಡೆಯಲ್ಲಿ ನದಿಯ ತೀರದಲ್ಲಿ

ಇರಿಸಲೋಸುಗ ಜನರು ಸಾವಿರದ ಸಂಖ್ಯೆಯಲಿ

ಹೆಬ್ಬಂಡೆಯೊಂದನ್ನು ನೂಕುತ್ತ ನೂಕುತ್ತ

ಮತ್ತಷ್ಟು ನೂಕಲು ಸಾಧ್ಯ ವಿಲ್ಲೆನ್ನುತ್ತ

ಬಂಡೆಯನು ಹಾದಿಯಲೆ ಇರಿಸಿ ಹೋಗಿದ್ದರು

ಇದ ಕಂಡ ಮಧ್ವರು ಇಂತೆಂದು ನುಡಿದರು
 
278/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
4
 
5
 
6
 
7
 
॥ ೭ ॥