This page has been fully proofread once and needs a second look.

ದಾಯಾದಿಗಳವನನ್ನು ಮತ್ಸರದಿ ಕಂಡರು

ಅವರು ಉಣಿಸಿದ ವಿಷವು ಸುಲಭದಲ್ಲಿ ಅರಗಿತ್ತು

ವಿಷಸರ್ಪ ಜಂತುಗಳನಪ್ಪಳಿಸಿ ಕೊಂದನವ

ಪ್ರಮಾಣ ಕೋಟೆಯಲ್ಲಿ ಮುಳುಗೆದ್ದು ಬಂದನವ

ಜಗಕೆಲ್ಲ ಜೀವವನ್ನು ನೀಡುವವ ಆತ

ಎಂತಹ ಅದ್ಭುತವು ! ಆತನೀಪರಿಯು !
 
೩೧ ॥
 
ಯೋಗಬಲದಲಿ ತಮ್ಮ ದೇಹವನು ದಹಿಸಿ

ಆರ್ಜಿಸಿದ ಧರ್ಮದಿಂ ಕರ್ಮಗಳ ವರ್ಜಿಸಿ
 

ಯೋಗಿಗಳು ಶ್ರೀ ಹರಿಯ ಸಾನ್ನಿಧ್ಯ ಪಡೆವಂತೆ

ಅರಗಿನ ಮನೆಯಿಂದ ಸೋದರರ ರಕ್ಷಿಸಿ
 

ಹಿಡಿಂಬನಂತಹ ಅರಿಗಳನ್ನು ಸಂಹರಿಸಿ

ವ್ಯಾಸರೂಪದಿ ಬಂದ ಶ್ರೀ ಹರಿಯ ಕಂಡ
 
॥ ೩೨ ॥
 
ಪರಿಶುದ್ಧ ಮನಸುಳ್ಳ ಆ ಭೀಮಸೇನ

ವ್ಯಾಸಮುನಿಗಳ ಕಂಡು ದರುಶನವ ಪಡೆದು

ಅರುಹಿದನು ತನ್ನೆಲ್ಲ ಕಾರ್ಯವೈಖರಿಯ

ಅರ್ಪಿಸಿದ ತನ್ನೆಲ್ಲ ಪುಣ್ಯ ಕರ್ಮಗಳ

ತಾ ಮಾಡಲಿಹ ಎಲ್ಲ ಕಾರ್ಯಗಳನರುಹಿ

ಎಲ್ಲವೂ ವ್ಯಾಸರಿಗೆ ಪೂಜೆಯೆಂದರ್ಪಿಸಿದ
 
॥ ೩೩ ॥
 
ಬಕವನ್ನು ಸಂಹರಿಪ ರಾಜಹಂಸ

ಶೋಭಿಪುದು ರಮಣೀಯ ರೆಕ್ಕೆಯಿಂದ

ಅದರಂತೆ ಈ ನಮ್ಮ ಭೀಮಸೇನ

ವಿಷ್ಣುಪದದಾಶ್ರಿತನು ಆತನೆಂದೂ
 

ರಾಜಹಂಸನು ರಾಜಹಂಸಿಣಿಯ ಪಡೆವಂತೆ
 
ದು

ದ್ರು
ಪದನಾ ಸುತೆಯನು ಸತಿಯಾಗಿ ಪಡೆದನು
 
ಮೊದಲನೆಯ ಸರ್ಗ /11
 
31
 
32
 
33
 
34
 
॥ ೩೪ ॥