This page has not been fully proofread.

ದಾಯಾದಿಗಳವನನ್ನು ಮತ್ಸರದಿ ಕಂಡರು
ಅವರು ಉಣಿಸಿದ ವಿಷವು ಸುಲಭದಲ್ಲಿ ಅರಗಿತ್ತು
ವಿಷಸರ್ಪ ಜಂತುಗಳನಪ್ಪಳಿಸಿ ಕೊಂದನವ
ಪ್ರಮಾಣ ಕೋಟೆಯಲ್ಲಿ ಮುಳುಗೆದ್ದು ಬಂದನವ
ಜಗಕೆಲ್ಲ ಜೀವವನ್ನು ನೀಡುವವ ಆತ
ಎಂತಹ ಅದ್ಭುತವು ! ಆತನೀಪರಿಯು !
 
ಯೋಗಬಲದಲಿ ತಮ್ಮ ದೇಹವನು ದಹಿಸಿ
ಆರ್ಜಿಸಿದ ಧರ್ಮದಿಂ ಕರ್ಮಗಳ ವರ್ಜಿಸಿ
 
ಯೋಗಿಗಳು ಶ್ರೀ ಹರಿಯ ಸಾನ್ನಿಧ್ಯ ಪಡೆವಂತೆ
ಅರಗಿನ ಮನೆಯಿಂದ ಸೋದರರ ರಕ್ಷಿಸಿ
 
ಹಿಡಿಂಬನಂತಹ ಅರಿಗಳನ್ನು ಸಂಹರಿಸಿ
ವ್ಯಾಸರೂಪದಿ ಬಂದ ಶ್ರೀ ಹರಿಯ ಕಂಡ
 
ಪರಿಶುದ್ಧ ಮನಸುಳ್ಳ ಆ ಭೀಮಸೇನ
ವ್ಯಾಸಮುನಿಗಳ ಕಂಡು ದರುಶನವ ಪಡೆದು
ಅರುಹಿದನು ತನ್ನೆಲ್ಲ ಕಾರ್ಯವೈಖರಿಯ
ಅರ್ಪಿಸಿದ ತನ್ನೆಲ್ಲ ಪುಣ್ಯ ಕರ್ಮಗಳ
ತಾ ಮಾಡಲಿಹ ಎಲ್ಲ ಕಾರ್ಯಗಳನರುಹಿ
ಎಲ್ಲವೂ ವ್ಯಾಸರಿಗೆ ಪೂಜೆಯೆಂದರ್ಪಿಸಿದ
 
ಬಕವನು ಸಂಹರಿಪ ರಾಜಹಂಸ
ಶೋಭಿಪುದು ರಮಣೀಯ ರೆಕ್ಕೆಯಿಂದ
ಅದರಂತೆ ಈ ನಮ್ಮ ಭೀಮಸೇನ
ವಿಷ್ಣುಪದದಾಶ್ರಿತನು ಆತನೆಂದೂ
 
ರಾಜಹಂಸನು ರಾಜಹಂಸಿಣಿಯ ಪಡೆವಂತೆ
 
ದುಪದನಾ ಸುತಯನು ಸತಿಯಾಗಿ ಪಡೆದನು
 
ಮೊದಲನೆಯ ಸರ್ಗ /11
 
31
 
32
 
33
 
34