This page has been fully proofread once and needs a second look.

ದೃಢಚಿತ್ತದಿಂದಲಿ ಶಿಷ್ಯತ್ವ ವಹಿಸಿದ್ದ

ಬಾದರಾಯಣರನ್ನು ಶ್ರೀ ವಿಷ್ಣುತೀರ್ಥರು

ಅತಿಯಾದ ಕೃಪೆಯನ್ನು ಅವರಲ್ಲಿ ತೋರುತ್ತ

ಉತ್ತಮಗೊರೊಳುತ್ತಮರು ಎಂಬಂತೆ ಮಾಡಿದರು
 
॥ ೧೧೮ ॥
 
ಸರ್ವದಾ ಶ್ರೀ ಹರಿಗೆ ಪ್ರಿಯವಾದ ಕಾವ್ರ್ಯವನೆ

ಎಸಗುವ ಆ ನಮ್ಮ ಶ್ರೀ ವಿಷ್ಣುತೀರ್ಥರು
 

ಇತರರಿಗೆ ಏರಲು ಅತಿ ಕಠಿಣವಾದಂಥ

ಕುಮಾರ ಪರ್ವತವನೇರಿದರು ಸುಲಭದಲ್ಲಿ
 
ಲಿ ॥ ೧೧೯ ॥
 
ಶ್ರೀ ಪದ್ಮನಾಭತೀರ್ಥರ ಮಹಿಮೆ

 
ಗೋದಾವರೀ ನದಿಯ ತೀರದಿಂದೈತಂದ

ಪದ್ಮನಾಭರು ಎಂಬ ಪಂಡಿತೋತ್ತಮರು

ಭೂಮಿಯಲ್ಲಿ ಪಸರಿಸಿದ ಮಧ್ವಮುನಿ ಗುಣದಿಂದ

ಆಕರ್ಷಣೆಯ ಹೊಂದಿ ಶಿಷ್ಯತ್ವ ವಹಿಸಿದರು
 
॥ ೧೨೦ ॥
 
ಶ್ರವಣ, ಮನನಾದಿಗಳು, ಭಕ್ತಿ, ವಿರಕ್ತಿಗಳು

ನಿತ್ಯಸೇವೆಗಳಿಂದ ಸಂತುಷ್ಟರಾಗಿ

ಆನಂದ ತೀರ್ಥರು ಶ್ರೀ ಪದ್ಮನಾಭರಿಗೆ

ತ್ವರಿತದಲಿ ಬೋಧಿಸಿದರಧ್ಯಾತ್ಮ ವಿದ್ಯೆಯ
 
॥ ೧೨೧ ॥
 
ಯುಕ್ತಿ ಪ್ರವಾಹದಲ್ಲಿ ರೋಷವನು ತಾಳಿ

ಪರಶಾಸ್ತ್ರ ನದಿಗಳಲ್ಲಿ ಸಂಚಾರ ಹೂಡಿ

ವಿದ್ವತ್ತಿಮಿಂಗಿಲರು, ಆ ಪದ್ಮನಾಭರು

ವೇದಾಂತ ಸಾಗರವ ತೊರೆಯಲೇ ಇಲ್ಲ
 
॥ ೧೨೨ ॥
 
ವಾದಿಗಳಲತಿ ಶ್ರೇಷ್ಠ ಶ್ರೀ ಪದ್ಮನಾಭರು

ತಮ್ಮ ಮಂಡಲದಲ್ಲಿ ವೀರರೆಂದೆಣಿಸಿದ್ದ

ಮಾಯಾವಾದಿಗಳೆಂಬ ಗ್ರಾಮಸಿಂಹಗಳನ್ನು

ವ್ಯಾಖ್ಯಾನ ಗರ್ಜನೆಯ ನೆರವಿಂದ ಜಯಿಸಿದರು
 
ಹದಿನೈದನೆಯ ಸರ್ಗ / 269
 
118
 
119
 
120
 
121
 
122
 
123
 
॥ ೧೨೩ ॥