This page has been fully proofread once and needs a second look.

ಶ್ರೀ ವಿಷ್ಣುತೀರ್ಥರು ಪರಮ ಯತಿಶ್ರೇಷ್ಠರು

ಭಕ್ತ ಜನರಿಂದವರು ಪರಮ ಸನ್ಮಾನಿತರು

ಶಿಷ್ಯವರ್ಗವು ತಂದ ಪಂಚಗವ್ಯವನವರು

ಐದು ದಿನಕ್ಕೊಮ್ಮೆ ಸ್ವಲ್ಪ ಸ್ವೀಕರಿಸಿದರು
 
॥ ೧೦೬ ॥
 
ಇಂದ್ರಿಯಗಳ ನಿಗ್ರಹವು ಅತಿ ಸುಲಭವವರಿಗೆ

ಕಾಲಾನುಕ್ರಮದಲ್ಲಿ ಪಂಚಗವ್ಯವ ತೊರೆದು

ಗಿಡಗಳಿಂದುದುರಿದ ಬಿಲ್ವ ಪತ್ರೆಗಳನ್ನು

ಕಿಂಚಿತ್ತು ಜಲದಿಂದ ಉದರವನು ಸಲಹಿದರು
 
॥ ೧೦೭ ॥
 
ಪರಮಾತ್ಮ ಕೃಪೆಯನ್ನು ಪಡೆದ ಮುನಿಗಳು ಕೂಡ

ಕುಳಿತು ಕೊಳ್ಳಲು ಬರದ ಶಿಲೆಯಲ್ಲಿ ಕುಳಿತು

ಮನವ ನಿಗ್ರಹಿಸುತ್ತ, ಸನ್ನಡತೆ ರೂಢಿಸುವ

ವಿಷ್ಣುತೀರ್ಥರು ಆಗ ಕಠಿಣ ತಪಗೈದರು
 
॥ ೧೦೮ ॥
 
ರೇಚಕಾದಿಗಳಿಂದ ಶ್ವಾಸವಾಯುವ ಜಯಿಸಿ

ಪವನಾಂಶ ಅನುಜರು ಆ ವಿಷ್ಣುತೀರ್ಥರು

ಮನವೆಂಬ ಸಾರಥಿಯ ನೆರವನ್ನು ಪಡೆದು

ವಿಷಯವೆಂಬುವ ಅಶ್ವ ವಶಪಡಿಸಿಕೊಂಡರು
 
॥ ೧೦೯ ॥
 
ವೇದಾಂತ ಕೋವಿದರು ಶ್ರೀ ವಿಷ್ಣುತೀರ್ಥರು

ಶ್ರೀ ಹರಿಯ ರೂಪವನು ಮನದಲ್ಲಿ ಸ್ಮರಿಸುತ್ತ

ಯೋಗದಲಿ ಲಭಿಸುವ, ವ್ಯಥೆಯ ನಿವಾರಿಸುವ

"ಸಮಾಧಿ" ಸ್ಥಿತಿಯನ್ನು ಶೀಘ್ರದಲಿ ಗಳಿಸಿದರು
 
॥ ೧೧೦ ॥
 
ನಿರ್ದೋಷ, ಆನಂದ ಗುಣಗಳಿಗೆ ಸಾಗರನೂ

ಸ್ವಾಶ್ಚರ್ಯ ರತ್ನ ಆ ಮುಕುಂದನನು

ಸುಂದರದ ರೂಪದಲಿ ಮನವನ್ನು ತೊಡಗಿಸಿದ

ಶ್ರೀ ವಿಷ್ಣುತೀರ್ಥರು ಬೇರಾವುದನ್ನೂ ಗಮನಿಸಲೆ ಇಲ್ಲ
 
ಹದಿನೈದನೆಯ ಸರ್ಗ / 267
 
106
 
107
 
108
 
109
 
110
 
111
 
॥ ೧೧೧ ॥