This page has not been fully proofread.

ಶ್ರೀರಾಮಚಂದ್ರನ ಕಥೆಯೆಂಬ ಸುಧೆಯನ್ನು
ಶ್ರವಣಮನನಾದಿಗಳಿಂದ ಸೇವಿಸುವ ಮಂದಿಗೆ
ಸ್ವರೂಪದಾನಂದದಾವಿರ್ಭಾವ ಮೋಕ್ಷಕ್ಕೆ
ದಾರಿಯನ್ನು ತೋರುವ ಸಾಧನವು ಅಹುದು
ಅದರಲ್ಲಿ ಮುಳುಗಿರುವ ಹನುಮಂತ ದೇವನು
ಇಂದಿಗೂ ನೆಲೆಸಿಹನು ಕಿಂ ಪುರುಷ ಖಂಡದಲ್ಲಿ
 
ಶ್ರೀ ಭೀಮಾಮಾರ ಲೀಲಾ ವರ್ಣನ:
 
ಸಂತುಷ್ಟರಾದರು ಶ್ರೀ ವಾಯುದೇವರು
ಸ್ಪರ್ಶಮಾತ್ರದಿ ಅವರು ವರವನೊಂದಿತ್ತರು
ಪಾಂಡುರಾಜನ ಪತ್ನಿ ಕುಂತಿಯದ ಪಡೆದಳು
ಜನ್ಮವಿತ್ತಳು ಆಕೆ ದಿವ್ಯ ಶಿಶುವೊಂದಕ್ಕೆ
ಭೀಮಸೇನ ಎಂಬ ಹೆಸರಾಯ್ತು ಅದಕ್ಕೆ
 
ವಾಯುವಿನ ಎರಡನೆಯ ಅವತಾರವಾಯಿತು
 
ಹಿಂದೊಂದು ಕಾಲದಲ್ಲಿ ಸುರಪತಿಯು ಒಮ್ಮೆ
ಆಯುಧವ ಬೀಸಿದ್ದ ಪರ್ವತದ ಕಡೆಗೆ
ಉದುರಿತ್ತು ಆಗ ರೆಕ್ಕೆಗಳು ಮಾತ್ರ
ಭೀಮಸೇನನ ಬಲವು ಇದಕ್ಕಿಂತ ಹೆಚ್ಚು
ಬೆದರಿದ್ದ ತಾಯಿಯ ಕೈಯಿಂದ ಜಾರಿದ
ಮಗುವಿನ ಸ್ಪರ್ಶಕ್ಕೆ ಪರ್ವತವು ಚೂರಾಯ್ತು
 
ಆಟವಾಡಿದ ಭೀಮ ರಾಜಪುತ್ರರ ಕೂಡ
ಅತ್ಯಲ್ಪ ಸಾಮರ್ಥ್ಯವನ್ನಾತ ತೋರಿದರೂ
ಸರಿಸಾಟ ಇರದಾಯ್ತು ಸೆಣಸಲವನೊಡನೆ
ಬದರಿಕಾಶ್ರಮದಲ್ಲಿ ತನ್ನ ಬಾಲ್ಯದಲ್ಲಿ
ಸಿಂಹಗಳ ಹಿಂಡನ್ನು ಹತಮಾಡಿದಾ ನೆನಪು
ಮರುಕಳಿಸಿ ಬಂದಿತ್ತು ಭೀಮಸೇನನಿಗೆ
 
10 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
27
 
28
 
29
 
30