This page has been fully proofread once and needs a second look.

ಊಟ ನಿದ್ರೆಗಳನ್ನು, ಆಮೋದಗಳ ತೊರೆದು

ಸನ್ಯಾಸ ಸ್ವೀಕಾರ ಕಾಲವನು ವೀಕ್ಷಿಸುತ
ಜೇ

ಜ್ಯೇ
ಷ್ಠರಾಮನ ಬರವ ಭರತ ಕಾಯ್ದಂತೆ

ಹಾತೊರದು ಕಾಯ್ದರು ಆ ಮಧ್ವರನುಜರು
 
॥ ೯೪ ॥
 
ನಾಲ್ಕು ತಿಂಗಳ ವ್ರತದ ಗಡುವು ಮುಗಿದಿರಲು

ಮಧ್ವಮುನಿಗಳು ಪಯಣ ಮುಂದುವರಿಸಿರಲು

ಅಗಲಿಕೆಯ ತಾಳದೆಯೆ ತಾನೂ ಹೊರಡುವೆನೆಂದ
 

ರಾಜನನು ಸಂತೈಸಿ ಪಾಜಕಕೆ ಮರಳಿದರು
 
॥ ೯೫ ॥
 
ಪರಿಶುದ್ಧ ವಂಶದಲಿ ಜನ್ಮವನು ತಳೆದವರು

ವೇದಾದಿ ವಿದ್ಯೆಯಲ್ಲಿ ಪರಮ ಪಾರಂಗತರು

ಕೃತಕೃತ್ಯಕ್ರಿಯರೂ, ವಿಷಯ ವಿರಕ್ತರೂ

ಅನುಜರಿಗೆ ಆಶ್ರಮವ ಮಧ್ವಮುನಿ ನೀಡಿದರು
 
॥ ೯೬ ॥
 
ನಾಲ್ಮೊಗದ ಬ್ರಹ್ಮನಿಗೆ ಸಮರು ಗುರುಮಧ್ವರು

ಏಕಾಂತದಲ್ಲವರು, ಪಂಚಾಗ್ನಿಗಳ ನಡುವೆ

ತಾಪಸೋತ್ತಮರಿಗೂ ಅರಿಯಲು ಬಾರದಿಹ

ಅತಿ ಗೂಢ ತತ್ವಗಳ ಬೋಧಿಸಿದರು
 
॥ ೯೭ ॥
 
ಪ್ರೇಮದಮೃತದಿಂದ ಕೂಡಿರುವ ಮೊಗದಿಂದ

ಕಿರುನಗೆಯ ಸೂಸುತ್ತ, ಕುಡಿನೋಟ ಬೀರುತ್ತ

ಆನಂದ ತೀರ್ಥರು, ತಮ್ಮ ಆ ಅನುಜರಿಗೆ

"ವಿಷ್ಣು ತೀರ್ಥರು " ಎಂಬ ಹೆಸರನ್ನು ನೀಡಿದರು
 
॥ ೯೮ ॥
 
ವೇದಾಂತಗುರುಗಳ ಸೋದರರು ಆಗ
 

ವೇದಾಂತ ಶಾಸ್ತ್ರದ ಶ್ರವಣ ಮನನಾದಿಯಲಿ

ಅನುವಾದ ಮುಂತಾದ ಸತ್ಕರ್ಮಗಳಲಿ

ಸತ್ಕಾಲ ಕ್ಷೇಪವನು ಮಾಡುತ್ತ ಕಳೆದರು
 
ಹದಿನೈದನೆಯ ಸರ್ಗ / 265
 
94
 
95
 
96
 
97
 
98
 
99
 
॥ ೯೯ ॥