This page has been fully proofread once and needs a second look.

'ಮೂರು ಭಾಷೆಗಳಲ್ಲಿ ಅರಿವನ್ನು ಅರಿಯದೆ

ಪುರಾಣಗಳನಾಶ್ರಯಿಪ ಪಾಂಥರಿಗೆ ತಮ್ಮಿಂದ

ಭಾಗವತ ತಾತ್ಪರ್ಯ ನಿರ್ಣಯವು ಎಂಬ

ಸಖನೊಬ್ಬ ದೊರತಿಹನು ಪುಣ್ಯ ಫಲದಿಂದ "
 
॥ ೭೭ ॥
 
"ಅಮರರಾಶ್ರಯಿಸುವ ಛಾಯೆಯನ್ನು ಹೊಂದಿರುವ

ಕಲ್ಪವೃಕ್ಷದ ತೆರದಿ ಉತ್ತಮೋತ್ತಮವಾದ

ದೇವತಾಪ್ರಿಯವಾದ ತಂತ್ರಸಾರವ ಪಡೆದ

ಆವನಿಹ ಬಯಕೆಯನ್ನು ಪೂರೈಸಿಕೊಳ್ಳದವ ?
 
" ॥ ೭೮ ॥
 
"ಕರುಣೆಯ ಸಾಗರರೆ, ಆನಂದ ತೀರ್ಥರೆ

ಕಥಾ ಪ್ರಮಾಣಗಳ ದರ್ಶನವ ಪಡೆವುದಕೆ "

ಕಣ್ಣುಗಳ ತರದಲ್ಲಿ ಶೋಭಿಸುತ್ತಿರುವ

ವಾದ ಸನ್ಮಾನ ಲಕ್ಷಣವ ರಚಿಸಿಹಿರಿ
 
॥ ೭೯ ॥
 
"ತತ್ವನಿರ್ಣಯವೆಂಬ ಆ ನಿಮ್ಮ ರಚನೆ

ಅಸಹಾಯ ಶೂರ ಆ ಪಾರ್ಥನಾ ತೆರದಲ್ಲಿ
 

ವಾದಿಗಳ ತಲೆಯನ್ನು ಮೆಟ್ಟಿ ನಿಂತಿಹುದು

ಯಾರಿಂದ ಇದು ಪೂಜ್ಯ ವಲ್ಲವಾಗಿಹುದು ?
 
" ॥ ೮೦ ॥
 
"
ವಾದವೇ ಮೊದಲಾದ ಪ್ರಕರಣ ಗ್ರಂಥಗಳು

ಬೆಂಕಿಯ ಕಿಡಿಯಂತೆ ಅತಿ ಸಣ್ಣ ವಿಹವು

ವಿಪಕ್ಷ ಕಕ್ಷದಿ ಒಣಗಿದ ಕಾನನವ

ಮಾರುತನ ರೀತಿಯಲಿ ನಾಶಗೊಳಿಸಿಹವು
 
""
 
" ॥ ೮೧ ॥
 
"
ಆ ಕೃಷ್ಣನಾನನದಿ ವಿಶ್ವ ತೋರಿದ ಹಾಗೆ

ಅನಂತರ್ಥಗಳ ಹೊಂದಿಹ ಭಾಷ್ಯ ಸಂಗ್ರಹವು

ಗಾತ್ರದಲ್ಲಿ ಕಿರಿದಾಗಿ, ಪಾತ್ರದಲ್ಲಿ ಹಿರಿದಾಗಿ

ತಮ್ಮ ಅದ್ಭುತವಾದ ಸಾಮರ್ಥ್ಯ ತೋರಿಹುದು "
 
262 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
77
 
78
 
.
 
79
 
80
 
81
 
॥ ೮೨ ॥