This page has been fully proofread once and needs a second look.

ನಂತರದಿ ಆ ಪಂಡಿತೋತ್ತಮರು ತ್ವರೆಯಿಂದ

ಜ್ಞಾನವೆಂಬುವ ಚಾಪ ಮೌರ್ವಿಯ ನೆರವಿಂದ

ವಿವಿಧ ತರ್ಕಗಳೆಂಬ ಬಾಣಗಳ ಹೂಡಿ

ಬುದ್ದಿಧಿ ಬಲದಿಂದವನು ಸರಸರನೆ ಬಿಟ್ಟರು
 
॥ ೬೫ ॥
 
ನಗುನಗುತ ಆ ನಮ್ಮ ಆನಂದ ತೀರ್ಥರು

ತ್ರಿವಿಕ್ರಮರ ಯುಕ್ತಿಗಳ ಬಾಣಗಳನೆಲ್ಲ

ಪ್ರತಿ ತರ್ಕವೆಂಬುವ ಬಾಣಗಳ ಹೂಡಿ

ಸುಲಭದಲ್ಲಿ ಅವುಗಳನ್ನು ಖಂಡಿಸಿದರು
 
॥ ೬೬ ॥
 
ಆನಂದ ತೀರ್ಥರನು ಗೆಲ್ಲಬಯಸಿದ ಅವರು

ಇತರ ಮಂದಿಗಳಿಂದ ಧರಿಸಲಾಗದ <error>ತೆರದ
</error><fix>ತೆರದಿ</fix>
ಮತ್ತಿತರ ಪುರುಷರು ತಡೆಯಲಾಗದ <error>ತೆರದ
</error><fix>ತೆರದಿ</fix>
ವೇದವಾಕ್ಯಗಳೆಂಬ ಅಸ್ತ್ರಗಳ ಬೀರಿದರು
 
॥ ೬೭ ॥
 
ನಿರವಕಾಶವಹ, ಬಹುವಾದ ಸಂಖ್ಯೆ ಇಹ

ವೇದಗತ ವಾಕ್ಯಗಳ ಅತಿಶಯದ ನೆರವಿಂದ

ಆನಂದತೀರ್ಥರು ವಿಧವಿಧದ ಅರ್ಥಗಳ

ಪ್ರತ್ಯಸ್ತ್ರಗಳ ತೆರದಿ ಖಂಡಿಸಿದರವುಗಳನು
 
॥ ೬೮ ॥
 
ವಾಕ್ಯಾರ್ಥ ಜರುಗಿದವು ಎರಡು ಸಪ್ತಾಹದಲ್ಲಿ

ಎರಡು ದಿಗ್ಗಜಗಳ ಅಪ್ರತಿಮ ಕಾಳಗ !

ಚಕ್ರಪಾಣಿಯ ಪ್ರಿಯರು ಆನಂದ ತೀರ್ಥರು

ಕತ್ತರಿಸಿ ಹಾಕಿದರು ಎಲ್ಲ ಸಂಶಯವ
 
॥ ೬೯ ॥
 
ತ್ರಿವಿಕ್ರಮರು ಮಧ್ವಶಿಷ್ಯರಾದದ್ದು

 
ಸಾತ್ವಿಕತೆಯೇ ಮೈವೆತ್ತ ಆ ತ್ರಿವಿಕ್ರಮರು

ಆನಂದ ತೀರ್ಥರನು ಕುರಿತು ಇಂತೆಂದರು:
 

"ಮನ್ನಿಸಿರಿ, ಓ ಸ್ವಾಮಿ! ಈ ನನ್ನ ಚಾಪಲ್ಯ!

ಪದಪದ್ಮಧೂಳಿಯ ಸೇವೆಯನ್ನು ಕರುಣಿಸಿರಿ"
 
260 / ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ
 
65
 
66
 
67
 
68
 
69
 
70